April 15, 2025
ಗ್ರಾಮಾಂತರ ಸುದ್ದಿಚಿತ್ರ ವರದಿಪ್ರತಿಭಟನೆಸಮಸ್ಯೆ

ಎಸ್‌ಡಿಪಿಐ ಕುಂಟಿನಿ ಬ್ರಾಂಚ್ ಸಮಿತಿ ವತಿಯಿಂದ ಕುಂಟಿನಿ-ಕುತ್ರೊಟ್ಟು ರಸ್ತೆ ದುರಸ್ತಿ ಆಗ್ರಹಿಸಿ ಬೃಹತ್ ಪ್ರತಿಭಟನೆ

ಉಜಿರೆ: ಎಸ್‌ಡಿಪಿಐ ಕುಂಟಿನಿ ಬ್ರಾಂಚ್ ಸಮಿತಿ ವತಿಯಿಂದ ಕುಂಟಿನಿ-ಕುತ್ರೊಟ್ಟು ರಸ್ತೆ ದುರಸ್ತಿ ಆಗ್ರಹಿಸಿ ಬೃಹತ್ ಪ್ರತಿಭಟನೆಯು ಫೆ.24ರಂದು ಉಜಿರೆ ಟಿ.ಬಿ. ಕ್ರಾಸ್ ಜಂಕ್ಷನ್‌ನಲ್ಲಿ ನಡೆಯಿತು.

ಬ್ಲಾಕ್ ಸಮಿತಿ ಸದಸ್ಯ ಆರಿಫ್ ಮಾತನಾಡಿ ರಸ್ತೆ ಕಾಮಗಾರಿ ಕೆಲಸಗಳು ಬಹಳ ನಿಧನಗತಿಯಿಂದ ಸಾಗುತ್ತಿದೆ. ಮನವಿ ಕೊಟ್ಟಾಗ ಸ್ವಲ್ಪ ದಿನ ಕೆಲಸ ನಡೆಯುತ್ತದೆ. ಮತ್ತೆ ನಿಲ್ಲುತ್ತದೆ. ಆದಷ್ಟು ಬೇಗ ಕೆಲಸ ಮಾಡಬೇಕು. ಗುತ್ತಿಗೆದಾರನ್ನು ಬ್ಲಾಕ್ ಲಿಸ್ಟ್‌ಗೆ ಹಾಕಬೇಕು ಎಂದರು.

ಪಿಡಬ್ಲ್ಯೂ ಡಿ ಇಂಜಿನಿಯರ್ ಬಕ್ಕಪ್ಪ ರವರು ಮನವಿಯನ್ನು ಸ್ವೀಕರಿಸಿ, ಗುತ್ತಿಗೆದಾರರಿಗೆ ಪ್ರತಿಭಟನಾ ಸ್ಥಳದಲ್ಲೇ ಕರೆ ಮಾಡಿ ಕೆಲಸವನ್ನು ಆದಷ್ಟು ಬೇಗ ಪೂರ್ಣಗೊಳಿಸಿಸುವಂತೆ ಹೇಳಿದರು.

ಈ ಸಂದರ್ಭದಲ್ಲಿ ಎಸ್‌ಡಿಪಿಐ ಉಜಿರೆ ಬ್ಲಾಕ್ ಅಧ್ಯಕ್ಷ ಮಹಮ್ಮದ್ ಆಲಿ, ಕುಂಟಿನಿ ಬ್ರಾಂಚ್ ಉಪಾಧ್ಯಕ್ಷ ರಫೀಕ್ ಕುಂಟಿನಿ, ಉಜಿರೆ ಬ್ಲಾಕ್ ಕಾರ್ಯದರ್ಶಿ ಮರ್ಷದ್ ಉಜಿರೆ, ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಸದಸ್ಯ ಸಹಲ್ ನಿರ್ಸಾಲ್, ಪಂಚಾಯತ್ ಸದಸ್ಯ ಸಲೀಂ ಕುಂಟಿನಿ ಉಪಸ್ಥತರಿದ್ದರು.

Related posts

ತಣ್ಣೀರುಪಂತ ವಲಯದ ತೆಕ್ಕಾರು ಕಾರ್ಯಕ್ಷೇತ್ರದ ಒಕ್ಕೂಟದ ಪದಗ್ರಹಣ ಸಮಾರಂಭ

Suddi Udaya

ಪುಂಜಾಲಕಟ್ಟೆ ಯುವಕ ಸೈನೇಡ್ ಸೇವಿಸಿ ಆತ್ಮಹತ್ಯೆ

Suddi Udaya

ಅಪಾಯದಂಚಿನಲ್ಲಿರುವ ತೋಟತ್ತಾಡಿಯ ಸೇತುವೆ: ದುರಸ್ತಿಗೊಳಿಸುವಂತೆ ಗ್ರಾಮಸ್ಥರ ಆಗ್ರಹ

Suddi Udaya

ಅಂಡಿಂಜೆ: ನವೋದಯ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘ ಇದರ 27 ನೇ ವರ್ಷದ ವಿಶ್ವಕರ್ಮ ಪೂಜೆ

Suddi Udaya

ಕಳೆಂಜ: ಶ್ರೀ ಸದಾಶಿವೇಶ್ವರ ದೇವಸ್ಥಾನದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಧಾರ್ಮಿಕ ಸಭೆ

Suddi Udaya

ಬೃಂದಾವನ ಸಂಜೀವಿನಿ ಮಹಿಳಾ ಒಕ್ಕೂಟ ಮತ್ತು ಗ್ರಾ.ಪಂ. ಕುಕ್ಕೇಡಿ ವತಿಯಿಂದ ನರೇಗಾ ಫಲಾನುಭವಿಗಳಿಗೆ ಗಿಡ ವಿತರಣೆ

Suddi Udaya
error: Content is protected !!