22.6 C
ಪುತ್ತೂರು, ಬೆಳ್ತಂಗಡಿ
July 23, 2026
Uncategorized

ಸೌತಡ್ಕ ದೇವಸ್ಥಾನ: ಗಂಟೆ ಹಗರಣ ಮತ್ತು ಹುಂಡಿ ಹಗರಣದ ಮರು ತನಿಖೆ ನಡೆಸಿ ವರದಿ ನೀಡಲು ಸೂಚನೆ

ಕೊಕ್ಕಡ: ಸೌತಡ್ಕ ಶ್ರೀ ಮಹಾಗಣಪತಿ ದೇವಾಲಯದ ಹರಕೆ ಗಂಟೆ ಹಗರಣ ಮತ್ತು ಹುಂಡಿ ಹಣದ ಅವ್ಯವಹಾರ ಬಗ್ಗೆ ಮರು ತನಿಖೆ ಮಾಡುವಂತೆ ಪ್ರಶಾಂತ್ ಪೂವಾಜೆಯವರು ಧಾರ್ಮಿಕ ದತ್ತಿ ಆಯುಕ್ತರು ಬೆಂಗಳೂರು ಇವರಿಗೆ ಸಲ್ಲಿಸಿರುವ ಮನವಿಯನ್ನು ಉಲ್ಲೇಖಿಸಿ, ಈ ಬಗ್ಗೆ ತನಿಖೆ ನಡೆಸಿ, ವಿವರವಾದ ವರದಿ ಸಲ್ಲಿಸುವಂತೆ ದ.ಕ ಜಿಲ್ಲಾಧಿಕಾರಿಗಳು, ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತರಿಗೆ ಪತ್ರ ಬರೆದಿದ್ದಾರೆ.


ಪ್ರಶಾಂತ್ ಪೂವಾಜೆಯವರು ತಮ್ಮ ಮನವಿಯಲ್ಲಿ ಸದ್ರಿ ದೇವಸ್ಥಾನವು ಧಾರ್ಮಿಕ ದತ್ತಿ ಇಲಾಖೆ ಅಡಿಯಲ್ಲಿ ಹೆಚ್ಚು ಆದಾಯ ಬರುವ ದೇವಾಲಯವಾಗಿದ್ದು, ರಾಜ್ಯದಲ್ಲಿ ೧೨ನೇ ಸ್ಥಾನದಲ್ಲಿದ್ದು, ರಾಜ್ಯ ಹಾಗೂ ಹೊರ ರಾಜ್ಯದಿಂದ ಭಕ್ತರ ನಂಬಿಕೆಗೆ ಪಾತ್ರವಾಗಿರುವ ಬಯಲು ಆಲಯ ಗಣಪತಿ ಗಂಟೆ ಗಣಪತಿ ಎಂದೇ ಪ್ರಸಿದ್ದಿ ಪಡೆದ ಈ ದೇಗುಲದಲ್ಲಿ ಸರಿ ಸುಮಾರು ಐದು ವರ್ಷಗಳ ಹಿಂದೆ 2019-2020 ನೇ ಸಾಲಿನಲ್ಲಿ ಹಗರಣವಾಗಿ ತನಿಖೆಯಾದ ಹರಕೆ ಗಂಟೆಗಳನ್ನು ಮಾಡುವುದರಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ತನಿಖಾ ವರದಿಯೊಂದಿಗೆ ಇರುವ ಅನುಬಂಧ ಪ್ರತಿಯಲ್ಲಿ ಹಗರಣದ ಸಂದರ್ಭದಲ್ಲಿ ಇದ್ದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರ ಹಸ್ತಕ್ಷೇಪ ಇರುವುದು ಮೇಲ್ನೋಟಕ್ಕೆ ತನಿಖಾ ವರದಿಯಲ್ಲಿ ಕಂಡುಬರುತ್ತಿದೆ ಹಾಗೂ ಇನ್ನೋರ್ವ ಸಮಿತಿ ಸದಸ್ಯರಾಗಿದ್ದ ಕೆ. ವಿಶ್ವನಾಥ ಕೊಲ್ಲಾಜೆ ಇದರ ಹೇಳಿಕೆಯಂತೆ ಸುಮಾರು ೨೦ ವರ್ಷಗಳ ಹಿಂದೆ (೨೦೦೪ ರಲ್ಲಿ) ದೇವಸ್ಥಾನದ ಹುಂಡಿಯಿಂದ ಹಣ ಪಡೆದು ಸ್ವಂತ ಆಸ್ತಿಯ ಸಾಲ ಮರುಪಾವತಿ ಮಾಡಿರುವುದಾಗಿ ನೀಡಿದ ಪತ್ರಿಕಾ ಹೇಳಿಕೆ ಸಂಶಯವನ್ನು ಉಂಟು ಮಾಡಿದೆ ಎಂದೂ, ಗಂಟೆ ಹಗರಣ ಮತ್ತು ಹುಂಡಿ ಹಣದ ಅವ್ಯವಹಾರ ದೇಗುಲದ ಭಕ್ತರ ನಂಬಿಕೆಗೆ ಘಾಸಿ ಹಾಗೂ ಅನುಮಾನ ಉಂಟುಮಾಡುವಂತಿದೆ ಎಂದೂ, ಪ್ರಸಕ್ತ ಸಾಲಿನ ವ್ಯವಸ್ಥಾಪನಾ ಸಮಿತಿಗೆ ಅರ್ಜಿ ಸಲ್ಲಿಸಿದವರಲ್ಲಿ ಸುಬ್ರಹ್ಮಣ್ಯ ಶಬರಾಯ, ಕೆ. ವಿಶ್ವನಾಥ ಕೊಲ್ಲಾಜೆ, ವಿಶ್ವನಾಥ ಶೆಟ್ಟಿ ಪಿ. ಪ್ರಶಾಂತ ರೈ ಮತ್ತು ಶ್ರೀಮತಿ ಸಿನಿ ಇವರು ಈಗಾಗಲೇ ಗಂಟೆ ಹಗರಣದ ಸಮಯದಲ್ಲಿ ಸಮಿತಿಯ ಸದಸ್ಯರಾಗಿದ್ದು ದತ್ತಿ ಕಾಯ್ದೆ ನಿಯಮ ಉಲ್ಲಂಘನೆಯನ್ನು ಮಾಡಿರುವ ಅನೇಕ ನಿರ್ಣಯಗಳು ಮಾಡಿರುವ ಇವರನ್ನು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ಆಯ್ಕೆ ಮಾಡಬಾರದೆಂದೂ, ಗಂಟೆ ಅವ್ಯವಹಾರ ಹಾಗೂ ಭಕ್ತರ ಹುಂಡಿ ಹಣದ ಅವ್ಯವಹಾರ ಬಗ್ಗೆ ಮರು ತನಿಖೆ ಮಾಡಿಸಿ ದೇಗುಲಕ್ಕೆ ಹಾಗೂ ಭಕ್ತರಿಗೆ ನ್ಯಾಯ ಒದಗಿಸಿಕೊಡಬೇಕೆಂದು ಮನವಿಯಲ್ಲಿ ಕೋರಿದ್ದರು. ಸದ್ರಿ ಮನವಿಯ ಬಗ್ಗೆ ಸೂಕ್ತ ತನಿಖೆ ನಡೆಸಿ ವಿವರವಾದ ವರದಿ ಸಲ್ಲಿಸುವಂತೆ ಪತ್ರದಲ್ಲಿ ತಿಳಿಸಲಾಗಿದೆ.

Related posts

ಉಜಿರೆ ಎಸ್‌ಡಿಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ
ಎಕ್ಸ್‌ಪೀರಿಯ-2ಕೆ22 ರಾಜ್ಯ ಮಟ್ಟದ ವಿಜ್ಞಾನ ಮೇಳ ಉದ್ಘಾಟನೆ

Suddi Udaya

ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆಯಲ್ಲಿ ಅನುಗ್ರಹ ಶಾಲಾ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ

Suddi Udaya

ಚಾರ್ಮಾಡಿ ಗ್ರಾಮದ ಅನ್ನಾರು ಕಾಡಿನಲ್ಲಿ ಅಸ್ವಸ್ಥ ಸ್ಥಿತಿಯಲ್ಲಿ ಕಾಡಾನೆ ಪತ್ತೆ

Suddi Udaya

ಶಿಶಿಲ:ಕಂದಾಯ ಇಲಾಖೆಯಿಂದ ಭೂ ಪರಿವರ್ತನೆ ವಿಳಂಬ ಆಗುತ್ತಿರುವ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ರವರಿಗೆ ಮನವಿ

Suddi Udaya

ಬೆಳ್ತಂಗಡಿ ಬಿಎಂಎಸ್ ರಿಕ್ಷಾ ಚಾಲಕರ ಸಂಘದ ಆಪತ್ಕಾಲದ 29ನೇ ಕ್ಷೇಮ ನಿಧಿ ಯೋಜನೆಯ ಸಹಾಯಧನ ವಿತರಣೆ

Suddi Udaya

ದ.ಕ. ಜಿಲ್ಲೆಯಲ್ಲಿ ವ್ಯಾಪಕ ಮಳೆ ಹಿನ್ನಲೆ: ಜು.25: ಎಲ್ಲಾ ಅಂಗನವಾಡಿ, ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

Suddi Udaya
error: Content is protected !!