July 29, 2026
Uncategorized

ಪಾಡ್ದನ,ಸಂಧೀ ಮುಂತಾದ ಅನೇಕ ಜನಪದೀಯ ಸಾಂಸ್ಕೃತಿಕ ಬೇರುಗಳು ಮುಂದಿನ ತಲೆಮಾರಿಗೆ ತಿಳಿಸುವ ನಿಟ್ಟಿನಲ್ಲಿ ಹೆಗ್ಗೋಡಿನ ನೀನಾಸಂ ,ರಂಗಾಯಣದಂತಹ ರಂಗ ಶಾಲೆ ತೆರೆಯುವ ಯೋಚನೆ: ಸಂಪತ್ ಬಿ ಸುವರ್ಣ

ಬೆಳ್ತಂಗಡಿ:ಅಭಿವೃದ್ಧಿ ಎಂದರೆ ಬರೀ ರಸ್ತೆ ನಿರ್ಮಾಣ, ಕಟ್ಟಡ ನಿರ್ಮಾಣ ಅಲ್ಲ.ವ್ಯಕ್ತಿಯೋರ್ವನ ಸಾಂಸ್ಕೃತಿಕ ಮನಸ್ಸು ಕಟ್ಟುವ ಕೆಲಸವು ಕೂಡ ಆಂತರಿಕ ಅಭಿವೃದ್ಧಿಯೇ. ಯುವ ಮನಸ್ಸುಗಳನ್ನು ಸಾಂಸ್ಕೃತಿಕವಾಗಿ ಕಟ್ಟದೆ ಹೋದಲ್ಲಿ ಭಾರತದ ನೈಜ ಸಾಂಸ್ಕೃತಿಕ ವಿಶ್ವರೂಪ ದರ್ಶನ ದೊರೆಯದ ಸಾಧ್ಯವಿಲ್ಲ. ಭಾರತೀಯ ಕಲಾ ಪ್ರಕಾರಗಳೆಲ್ಲವು ಸಾಮಾಜಿಕ ಮೌಲ್ಯಗಳ ಅಂತ್ಹಸತ್ವ ಅಧರಿಸಿದವುಗಳು. ಭಾರತೀಯ ಸಂಸ್ಕೃತಿಯ ನಾಟಕ ,ಯಕ್ಷಗಾನ, ಸಂಗೀತಗಳು ಮನೋರಂಜನಾ ಕಾರ್ಯಕ್ರಮಗಳಲ್ಲ. ಅದು ಕಲೆ ಸಂಸ್ಕೃತಿ, ಸಂಸ್ಕಾರ , ಆಚರಣೆ, ಆಚಾರ ವಿಚಾರಗಳ ಮನೋವಿಕಾಸದ ಒಟ್ಟು ಸಂಕಲನ.

ಈ ನೆಲದ ಮಣ್ಣಿನ ಜೀವಂತಿಕೆಯನ್ನು ,ಅದರ ಸಾರವನ್ನು,ಈ ದೇಶ ಪ್ರತಿಪಾದಿಸಿದ ಜೀವನ ಮೌಲ್ಯವನ್ನು ತಿಳಿಸುವ ಪ್ರಯತ್ನವೆ ಸಾಂಸ್ಕೃತಿಕ ಪ್ರತಿಷ್ಠಾನದ ಉದ್ದೇಶ ಆಗಿದೆ. ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನ ಕಳೆದ 15 ವರ್ಷಗಳಿಂದ ಇದೇ ವಿಚಾರದಲ್ಲಿ ನಂಬಿಕೆಯಿಟ್ಟು ಬೆಳೆದಿದೆ. ಪಾಡ್ದನ, ಸಂಧೀ ಮುಂತಾದ ಅನೇಕ ಜನಪದೀಯ ಸಾಂಸ್ಕೃತಿಕ ಬೇರುಗಳು ಮುಂದಿನ ತಲೆಮಾರಿಗೆ ತಿಳಿಸುವ ನಿಟ್ಟಿನಲ್ಲಿ ಹೆಗ್ಗೋಡಿನ ನೀನಾಸಂ ,ಮೈಸೂರಿನ ರಂಗಾಯಣದಂತಹ ರಂಗ ಶಾಲೆಗಳನ್ನು ತೆರೆಯುವ ಆಲೋಚನೆಗಳಿವೆ ಎಂದು ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಬಿ ಸುವರ್ಣ ತಿಳಿಸಿದರು. ಮಾಹಿತಿಗಾಗಿ ಅವರ ಪೋನ್ ನಂಬರ್ – 96633 73940

Related posts

ಬೆಳ್ತಂಗಡಿ ವಿದಾನಸಭಾ ಕ್ಷೇತ್ರದ ಮಹಿಳಾ ಸದಸ್ಯತ್ವ ನೋಂದಾವಣಾ ಅಭಿಯಾನ ಕಾರ್ಯಕ್ರಮ

Suddi Udaya

ಚಿನ್ನಯ್ಯ ಪರ ವಕೀಲರುಗಳ ವಿರುದ್ಧ ಎಸ್.ಐ.ಟಿಗೆ ಧರ್ಮಸ್ಥಳ ಗ್ರಾಮಸ್ಥರಿಂದ ದೂರು:

Suddi Udaya

ಬೆಳ್ತಂಗಡಿ ಪಟ್ಟಣ ಪಂಚಾಯತ್ ಬಿಲ್‌ಕಲೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದ ಲಕ್ಷ್ಮೀನಾರಾಯಣರಿಗೆ ಬೀಳ್ಕೊಡುಗೆ

Suddi Udaya

– ಐದು ವರ್ಷಗಳ ಸಾಧನೆಯ ಸಂಭ್ರಮದಲ್ಲಿರುವ ಪ್ರತಿಷ್ಠಿತ ಎಕ್ಸೆಲ್ ವಿದ್ಯಾಸಂಸ್ಥೆಗೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭೇಟಿ. -ವಿದ್ಯಾ ಗಣಪತಿ ದೇವರ ವಿಗ್ರಹ ಅನಾವರಣ,ಎಕ್ಸೆಲ್ ಪಂಚ ಪರ್ವ. -ಕಡಿಮೆ ಅವಧಿಯಲ್ಲಿ ಯಶಸ್ವಿನ ಶಿಖರವೇರಿದೆ ಎಕ್ಸೆಲ್ ವಿದ್ಯಾ ಸಂಸ್ಥೆ:ಡಿ.ಕೆ ಶಿವಕುಮಾರ್

Suddi Udaya

ನಾಳ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾಗಿ ಕೇಶವ ಪೂಜಾರಿ , ಉಪಾಧ್ಯಕ್ಷರಾಗಿ ಸೋಮಪ್ಪ ಗೌಡ

Suddi Udaya

ಗುರುವಾಯನಕೆರೆ : ಗೆಳೆಯರ ಬಳಗದ ಶಾರದಾ ಕಲಾ ಮಂಟಪದಲ್ಲಿ ವಿಶ್ವ ಯೋಗ ದಿನಾಚರಣೆ

Suddi Udaya
error: Content is protected !!