ಹತ್ಯಡ್ಕ :ಇಲ್ಲಿಯ ತುಂಬೆತ್ತಡ್ಕ ನಿವಾಸಿ ಗಣೇಶ್ ಎಂಬವರ ಮನೆಯ ಪಕ್ಕದ ವಿದ್ಯುತ್ ಪರಿವರ್ತಕದಿಂದ ಬೆಂಕಿ ಕಿಡಿ ಸಿಡಿದು ಅಲ್ಲೆ ಪಕ್ಕದಲ್ಲಿ ಇದ್ದ ಗೇರು ತೋಟಕ್ಕೆ ಬೆಂಕಿ ಆವರಿಸಿ ಅಪಾರ ನಷ್ಟ ಉಂಟಾದ ಘಟನೆ ಇಂದು ( ಮಾ.3) ನಡೆದಿದೆ.
ಸ್ಥಳೀಯರಾದ ಕುಮಾರೇಶ, ವೇಣುಗೋಪಾಲ, ರಾಘವ ಹಾಗೂ ಗೀತಾ ರವರು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವಲ್ಲಿ ಸಹಕರಿಸಿದರು.













