March 10, 2025
Uncategorized

ಗುರುವಾಯನಕೆರೆ ನವಶಕ್ತಿಕ್ರೀಡಾಂಗಣದಲ್ಲಿ ಆದ್ದೂರಿಯಾಗಿ ನಡೆದ ಐತಿಹಾಸಿಕ ನಾಟಕ “ಛತ್ರಪತಿ ಶಿವಾಜಿ”

ಬೆಳ್ತಂಗಡಿ:ಗುರುವಾಯನಕೆರೆ ಶಕ್ತಿನಗರದ ನವಶಕ್ತಿ
ಕ್ರೀಡಾಂಗಣದಲ್ಲಿ ಮಾ 8 ಶನಿವಾರ ನಡೆದ “ಛತ್ರಪತಿ ಶಿವಾಜಿ” ನಾಟಕವನ್ನು ಸಹಸ್ರಾರು ಮಂದಿ ಕಲಾಭಿಮಾನಿಗಳು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಉದ್ಯಮಿಗಳಾದ ಶಶಿಧರ್ ಶೆಟ್ಟಿ ನವಶಕ್ತಿ ನೇತೃತ್ವದಲ್ಲಿ ತುಳು ರಂಗ ಭೂಮಿಯಲ್ಲಿ ಶಿವಧೂತೆ ಗುಳಿಗೆ ಖ್ಯಾತಿಯ ವಿಜಯ ಕುಮಾರ್ ಕೊಡಿಯಲ್ ಬೈಲ್ ಸಾರಥ್ಯದ ಕಲಾ ಸಂಗಮ ತಂಡದ ಕಲಾವಿದರಿಂದ “ಛತ್ರಪತಿ ಶಿವಾಜಿ” ಎಂಬ ಐತಿಹಾಸಿಕ ನಾಟಕ ಪ್ರೇಕ್ಷಕರ ಮನಸೂರೆಗೊಂಡಿತು.

ದೇಶ ಭಕ್ತಿ ಹಾಗೂ ಸ್ವರಾಜ್ಯ ಸ್ಥಾಪನೆಗಾಗಿ ದಿಟ್ಟ ಹೋರಾಟ ನಡೆಸುವ ಶಿವಾಜಿ ಮಹಾರಾಜರ ಜೀವನ ಚರಿತ್ರೆಯ ಈ ನಾಟಕವನ್ನು ಸಹಸ್ರಾರು ಮಂದಿ ನಾಟಕ ವೀಕ್ಷಿಸಿ. ಭಗವಾಧ್ವಜ ಹಾರಿಸುತ್ತ ಶಿವಾಜಿಗೆ ಜಯಘೋಷ ಹಾಕಿ ಸಂಭ್ರಮಿಸುತಿದದ್ದು ಎಲ್ಲರ ಗಮನ ಸೆಳೆಯಿತು. ಕೊನೆಯಲ್ಲಿ ವಿಜಯ ಕುಮಾರ್ ಕೊಡಿಯಲ್ ಬೈಲ್ ಸೇರಿದಂತೆ ಕಲಾ ಸಂಗಮ ತಂಡದ ಎಲ್ಲರನ್ನೂ ನವಶಕ್ತಿ ಕುಟುಂಬಸ್ಥರು ಗಣ್ಯರ ಸಮ್ಮುಖದಲ್ಲಿ ಗೌರವಿಸಲಾಯಿತು. ಈ ವೇಳೆ ಮಾತನಾಡಿದ ವಿಜಯ ಕುಮಾರ್ ಕೊಡಿಯಲ್ ಬೈಲ್, ನಮ್ಮ ಮಾರ್ಗದರ್ಶಕರಾದ ಉದ್ಯಮಿ ಶಶಿಧ‌ರ್ ಶೆಟ್ಟಿಯವರಂತಹ ಕಲಾ ಪೋಷಕರಿಂದಲೇ ಕಲೆಗೆ ಮತ್ತಷ್ಟು ಗೌರವ,ಕಲಾವಿದರಿಗೆ ಉತ್ತಮ ವೇದಿಕೆ ಸಿಗುತ್ತಿದೆ. ನಮ್ಮ ತಂಡದ ಎಲ್ಲರನ್ನೂ ಕಲಾಭಿಮಾನಿಗಳ ಎದುರು ಗೌರವಿಸಿರುವುದು ತಂಡಕ್ಕೆ ಮತ್ತಷ್ಟು ಶಕ್ತಿ ದೊರಕಿದಂತಾಗಿದೆ.ಅವರ ಕಲಾಪ್ರೀತಿಗೆ, ಅಭಿಮಾನಕ್ಕೆ ನಾವು ಚಿರಋಣಿಗಳು, ಕಲಾಭಿಮಾನಿಗಳ ಪ್ರೋತ್ಸಾಹ ನಮ್ಮ ತಂಡದ ಮೇಲೆ ಸದಾ ಇರಲಿ ಎಂದರು.

ಈ ವೇಳೆ ಶಾಸಕ ಹರೀಶ್ ಪೂಂಜ, ಉದ್ಯಮಿ ಶಶಿಧರ್ ಶೆಟ್ಟಿ,ವಿಶ್ರಾಂತ ಪ್ರಾಂಶುಪಾಲ ಕುಮಾರ ಹೆಗ್ಡೆ, ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ ಮೋಹನ್ ಕುಮಾರ್ “ಲಕ್ಷ್ಮೀ ಗ್ರೂಪ್ಸ್” ಉಜಿರೆ, ರಾಜೇಶ್ ಶೆಟ್ಟಿ ನವಶಕ್ತಿ,ಬೆಳ್ತಂಗಡಿ ಮಂಡಲ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಶಶಿರಾಜ್ ಶೆಟ್ಟಿ ಶಕ್ತಿನಗರ, ಸುಚಿತಾ ರಾಜೇಶ್ ಶೆಟ್ಟಿ ನವಶಕ್ತಿ, ಉಪಸ್ಥಿತರಿದ್ದರು.ಅರವಿಂದ ಕುಮಾರ್ ಲಾಯಿಲ, ಜಗದೀಶ್ ಕನ್ನಾಜೆ ಸಹಕರಿಸಿದರು.

Related posts

ನಿಡಿಗಲ್ ಹಳೆ ಸೇತುವೆ ಪರಿಸರದಲ್ಲಿ ಕಸ ಹಾಕಿದವರಿಂದಲೇ ಕಸ ವಿಲೇವಾರಿ: ದಂಡ ವಸೂಲಿ

Suddi Udaya

ಬೆಳ್ತಂಗಡಿ: ನೆಲ್ಯಾಡಿ ಸಂತ ಅಲ್ಫೋನ್ಸ ಚರ್ಚ್‌ನಲ್ಲಿ ಕಾರ್ಗಿಲ್ ವಿಜಯ ದಿವಸ್ ಆಚರಣೆ

Suddi Udaya

ಅಂಡೆತಡ್ಕ ಸರಕಾರಿ ಉನ್ನತಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಬಾಲಕರ ತಂಡವು ಕುವೆಟ್ಟು ಸ.ಉ. ಹಿ. ಪ್ರಾ. ಶಾಲೆಯಲ್ಲಿ ನಡೆದ ತಾಲೂಕು ಮಟ್ಟದ ತ್ರೋಬಾಲ್ ಪಂದ್ಯಾಟದಲ್ಲಿ ಸತತವಾಗಿ ಮೂರನೇ ಬಾರಿ ದ್ವಿತೀಯ ಸ್ಥಾನ

Suddi Udaya

ಕೆದ್ದು ಮಾರ್ನಿಂಗ್ ಕ್ರಿಕೆಟರ್ಸ್ ನಿಂದ ಕೀರ್ತನ್ ರವರ ಚಿಕಿತ್ಸೆಗಾಗಿ ಧನಸಹಾಯ

Suddi Udaya

ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ದುರ್ಗಾ ದೇವಿ ದೇವಸ್ಥಾನಕ್ಕೆ ಧಾರ್ಮಿಕ ಪರಿಷತ್ ಸದಸ್ಯ ಯೋಗೀಶ್ ಕುಮಾರ್ ನಡಕ್ಕರ ಭೇಟಿ

Suddi Udaya

ನಾಳ ಶ್ರೀ ದೇವಸ್ಥಾನದ ರಥಬೀದಿಯಲ್ಲಿ ಶನೀಶ್ವರ ಮಹಾತ್ಮೆ ಬಯಲಾಟ

Suddi Udaya
error: Content is protected !!