September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಮುಂಡಾಜೆ ಪ್ರಾ.ಕೃ.ಪ.ಸ. ಸಂಘದ ವತಿಯಿಂದ ನಿವೃತ್ತ ಚಂದ್ರಕಾಂತ ಪ್ರಭುರವರಿಗೆ ಅಭಿನಂದನೆ ಕಾರ್ಯಕ್ರಮ

ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಚಂದ್ರಕಾಂತ ಪ್ರಭು ಸೇವಾ ನಿವೃತ್ತಿ ಹೊಂದಿದ್ದು ಅವರನ್ನು ಸಂಘದ ವತಿಯಿಂದ ಮಾ.8ರಂದು ಮುಂಡಾಜೆ ಸಹಕಾರಿ ಸಂಘದ ಕೇಂದ್ರ ಕಚೇರಿಯ ಸಭಾಭವನದಲ್ಲಿ ಅಭಿನಂದಿಸಲಾಯಿತು.


ಸಂಘದ ಅಧ್ಯಕ್ಷ ಪ್ರಕಾಶ್ ನಾರಾಯಣ ರಾವ್ ರವರು ಅಧ್ಯಕ್ಷತೆ ವಹಿಸಿ , ಸದಾ ಹಸನ್ಮುಖಿಯಾದಂತಹ ಸಿಇಓ ಅವರು ಗ್ರಾಮದ ಪ್ರತಿ ಸದಸ್ಯರಲ್ಲಿಯೂ ಆತ್ಮೀಯವಾಗಿದ್ದು, 42 ವರ್ಷಗಳ ಕಾಲ ಸಂಘದಲ್ಲಿ ದುಡಿದು, ಸಂಘದ ಏಳಿಗೆಗೆ ಪ್ರಾಮಾಣಿಕ ಕೆಲಸ ನಿರ್ವಹಿಸಿ ಸಂಘದ ಏಳಿಗೆಗೆ ಇವರ ಸೇವೆ ಅಪಾರ ಎಂದು ನುಡಿದರು.

ಕಾರ್ಯಕ್ರಮದಲ್ಲಿ ಯಂಗ್ ಚಾಲೆಂಜರ್ಸ್ ಸ್ಪೋರ್ಟ್ಸ್ ಕ್ಲಬ್ ನ ಸಂಚಾಲಕರು ನಾಮದೇವ ರಾವ್, ಉಜಿರೆ ರಬ್ಬರ್ ಸೊಸೈಟಿ ಉಪಾಧ್ಯಕ್ಷ ಅನಂತ ಭಟ್ ಮಚ್ಚಿಮಲೆ, ನೆರಿಯ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಗೋಪಾಲ್ ಕೃಷ್ಣ , ನಿವೃತ್ತ ಸಿ ಇ ಓ ಆದ ನಾರಾಯಣ ಫಡಕೆ, ಊರಿನ ಹಿರಿಯ ಸದಸ್ಯರಾದ ಅಡೂರು ವೆಂಕಟರಾಯ ರಾವ್ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ರಾಘವ್ ಗೌಡ ಕುಡುಮಡ್ಕ, ನಿರ್ದೇಶಕರಾದ ವೆಂಕಟೇಶ್ವರ ಭಟ್ ಕಜೆ, ಚನ್ನಕೇಶವ ಅರಸ ಮಜಲು ,ಅಶ್ವಿನಿ ಹೆಬ್ಬಾರ್ ಮೋಹಿನಿ ,ಸುಮ ಗೋಖಲೆ, ಶಶಿಧರ್ ಕಲ್ಮಂಜ, ರಾಘವ ಕಲ್ಮಂಜ ,ಶಿವಪ್ರಸಾದ್, ಅಜಯ್ ಕಲ್ಲಿಕಟ್ ಉಪಸ್ಥಿತರಿದ್ದರು. ಊರಿನ ಕೃಷಿ ಸದಸ್ಯ ಮಿತ್ರರು, ಸಂಘದ ಎಲ್ಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು.


ಕಾರ್ಯಕ್ರಮವನ್ನು ಕಕ್ಕಿಂಜೆ ಶಾಖಾ ಪ್ರಬಂಧಕಿ ಪುಷ್ಪಾವತಿ ಸ್ವಾಗತಿಸಿ, ನೆರಿಯ ಶಾಖಾ ಪ್ರಬಂಧಕ ಸದಾನಂದ ಡಿ ವಂದಿಸಿದರು. ಕಾರ್ಯಕ್ರಮವನ್ನು ನೂತನ ಸಿಇಒ ಪ್ರಸನ್ನ ಪರಾಂಜಪೆ ನಿರೂಪಿಸಿದರು.

Related posts

ಬಳಂಜ ಸರ್ವೋದಯ ಫ್ರೆಂಡ್ಸ್ ಅಟ್ಲಾಜೆ ನೂತನ ಪದಾಧಿಕಾರಿಗಳ ಆಯ್ಕೆ: ಅಧ್ಯಕ್ಷರಾಗಿ ಸುರೇಶ್ ಪೂಜಾರಿ ಹೇವ

Suddi Udaya

ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಬೆಳ್ತಂಗಡಿ ವಲಯದಿಂದ ದೀಪಾವಳಿ ಆಚರಣೆ

Suddi Udaya

ಶ್ರೀ ಕ್ಷೇ.ಧ. ಗ್ರಾ.ಯೋ ಕೊಕ್ಕಡ ವಲಯದ ಉಪ್ಪಾರಪಳಿಕೆ ಕಾರ್ಯಕ್ಷೇತ್ರದಲ್ಲಿ ವಿಶ್ವಜ್ಯೋತಿ ಜ್ಞಾನ ವಿಕಾಸ ಮಹಿಳಾ ಕೇಂದ್ರದ ವಾರ್ಷಿಕೋತ್ಸವ

Suddi Udaya

ನಾಳೆ (ಜು.14) ಉಜಿರೆಯಲ್ಲಿ ಶುಭಾರಂಭಗೊಳ್ಳಲಿದೆ “ಡೈನಮಿಕ್ ಡ್ಯಾನ್ಸ್ ಫ್ಯಾಕ್ಟರಿ&ಕಾಸ್ಟೋಮ್ ಕಾರ್ನರ್”

Suddi Udaya

ನಾಳೆಯೂ(ಜು.26) ಶಾಲೆ, ಕಾಲೇಜುಗಳಿಗೆ ರಜೆ: ದ.ಕ ಜಿಲ್ಲಾಧಿಕಾರಿ ಘೋಷಣೆ

Suddi Udaya

ಪುಂಜಾಲಕಟ್ಟೆ ಸರಕಾರಿ ಪ.ಪೂ. ಕಾಲೇಜಿಗೆ ಶೇ. 93.91 ಫಲಿತಾಂಶ

Suddi Udaya
error: Content is protected !!