41.3 C
ಪುತ್ತೂರು, ಬೆಳ್ತಂಗಡಿ
April 29, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬಿಸಿಲ ಝಳಕ್ಕೆ ವರುಣ ಕೃಪೆ, ಬೆಳ್ತಂಗಡಿ ತಾಲೂಕಿನ ನಾನಾ ಭಾಗದಲ್ಲಿ ಮಳೆ- ಜನತೆ ಕೂಲ್ ಕೂಲ್

ಬೆಳ್ತಂಗಡಿ: ಬಿಸಿಲ ಬೇಗೆಯಿಂದ ತತ್ತರಿಸಿ ಹೋಗಿ ಬಸವಳಿದಿದ್ದ ಬೆಳ್ತಂಗಡಿ ತಾಲೂಕಿನ ಮಂದಿಗೆ ವರುಣ ಬಂದು ತಂಪೆರೆದಿದ್ದ ಈ ವರ್ಷದ ಮೊದಲ ಮಳೆ ಸುರಿದಿದೆ. ತಾಲೂಕಿನ ಹಲವೆಡೆ ದಿಢೀರ್ ಮಳೆಯಾಗಿದ್ದು, ಜನ ಝಳ ಝಳ ಬಿಸಿಲಿನಿಂದ ಚುಮು ಚುಮು ಚಳಿಯ ಆನಂದ ಕ್ಷಣಗಳ ಕಂಡು ಬಂತು. ಮಾ.11 ರಂದು 41 ಡಿಗ್ರಿ:ಸಿ ತಾಪಮಾನವಿದ್ದು ಜನತೆ ಬಿಸಿಲ ಝಳಕ್ಕೆ ಬೆಂದು ಬಸವಳಿದಿದ್ದರು, ಮಾ.12 ರಂದು ಬಿಸಿಲ ತಾಪ ಅಧಿಕವಾಗಿತ್ತು ಆದರೆ ಸಂಜೆ ವೇಳೆ ವರುಣ ಕೃಪೆಯಿಂದ ಬಿಸಿಲ ಕಾವಿಗೆ ಬೆಂದಿದ್ದ ಇಳೆ, ಜನತೆಗೆ ಮಳೆಯ ಸಿಂಚನದಿಂದ ತಂಪೆರೆದಿದೆ. ಮಾ.12ರಂದು ಮೋಡ ಕವಿದ ವಾತವಾರಣ ತಾಲೂಕಿನ ನಾನಾ ಕಡೆಗಳಲ್ಲಿತ್ತು. ಜನರ ಮಳೆಯ ನೀರಿಕ್ಷೆಯನ್ನು ಆಪೇಕ್ಷಿಸುತ್ತಿದ್ದ ಘಟನೆಗಳು ಕಂಡು ಬಂತು.

ಬಿಸಿಲ ಕಾವು ಕೃಷಿ ಭೂಮಿಗೂ ವ್ಯಾಪಿಸಿ ಬಿಸಿಮುಟ್ಟಿಸಿತ್ತು. ಕೃಷಿಕ ಮೊದಲೇ ಲೋ ವಾಲ್ಟೆಜ್ ಬಾದೆಯಿಂದ ಕಂಗೆಟ್ಟು ಹೋಗಿದ್ದು ಇದರ ನಡುವೆ ಬಿಸಿಲ ಪ್ರತಪಕ್ಕೆ ಬೇಸತ್ತು ಹೋಗಿದ್ದರು. ವರುಣ ಆಗಮನದಿಂದ ಧರೆ ತಂಪೆರದ್ದಂತಾಗಿದೆ.

ಶಿಶಿಲ, ಶಿಬಾಜೆ, ಅರಸಿನಮಕ್ಕಿ, ರೆಖ್ಯಾ, ಕಳೆಂಜ, ನೆರಿಯ, ಉಜಿರೆ ಗಡುಗು ಸಹಿತ ಗಾಳಿ ಮಳೆ ಸುರಿದಿದೆ. ಕೊಕ್ಕಡ ಸಹಿತ ವಿವಿಧೆಡೆ ತುಂತುರು ಮಳೆಯಾಗಿದೆ. ಧರ್ಮಸ್ಥಳ ಭಾಗದಲ್ಲಿ ಅಲಿಕಲ್ಲು ಮಳೆಯಾಗಿದೆ. ಬೆಳ್ತಂಗಡಿ ಭಾಗದಲ್ಲಿ ಸಂಜೆ ಹೊತ್ತಿಗೆ ಗಾಳಿ ಸಹಿತ ಸಡಿಲುನೊಂದಿಗೆ ಮಳೆಯಾಗಿದೆ.

Related posts

ಶಿಬಾಜೆಯ ಮಾದರಿಯಲ್ಲಿ ಮರಣ ಮೃದಂಗಕ್ಕೆ ಅಣಿಯಾಗಿ ನಿಂತಿರುವ ಬೆಳ್ತಂಗಡಿ ಸಂತೆಕಟ್ಟೆ ವಿದ್ಯುತ್ ಕಂಬದ ಸ್ಟೇ ವಯ‌ರ್

Suddi Udaya

ಬಿಜೆಪಿ ಆಡಳಿತದಲ್ಲಿ ಮಂಜೂರುಗೊಂಡ ಕಾಮಗಾರಿಗಳನ್ನು ತನ್ನದೆಂದು ಬಿಂಬುಸುವುದೇ ಸ್ಥಳೀಯ ಕಾಂಗ್ರೆಸಿಗರ ಸಾಧನೆ: ಪ್ರಕಾಶ್ ಎಳನೀರು

Suddi Udaya

ಉಜಿರೆ-ಉಪ್ಪಿನಂಗಡಿ ಶ್ರೀ ದುರ್ಗಾ ಟೆಕ್ಸ್‌ಟೈಲ್ಸ್‌ನಲ್ಲಿ ಬೃಹತ್ ಸಾರಿ ಮೇಳ: ಸೀರೆಗಳ ಮೇಲೆ ಶೇ.50 ಡಿಸ್ಕೌಂಟ್: ಕೆಲವೇ ದಿನಗಳು ಮಾತ್ರ

Suddi Udaya

ಪುದುವೆಟ್ಟು ಶ್ರೀ ಧ.ಮಂ.ಅ.ಹಿ.ಪ್ರಾ. ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಮತ್ತು ವಿಜ್ಞಾನ ಮಾದರಿಗಳ ಪ್ರದರ್ಶನ ಕಾರ್ಯಕ್ರಮ

Suddi Udaya

ಮೇಲಂತಬೆಟ್ಟು ಶ್ರೀ ನಾಗಬ್ರಹ್ಮ ದೇವಸ್ಥಾನದ ವ್ಯವಸ್ಥಾಪನ ಸಮಿತಿಗೆ ಅಧ್ಯಕ್ಷರು, ಸದಸ್ಯರ ನೇಮಕ

Suddi Udaya

ನವೋದಯ ಪ್ರವೇಶ ಪರೀಕ್ಷೆಯಲ್ಲಿ ವಾಣಿ ಶಿಕ್ಷಣ ಸಂಸ್ಥೆಯಲ್ಲಿ ತರಬೇತಿ ಪಡೆದ ಐವರು ವಿದ್ಯಾರ್ಥಿಗಳು ಉತ್ತೀರ್ಣ

Suddi Udaya
error: Content is protected !!