ಬೆಳ್ತಂಗಡಿ:ಸರಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಅಂತರ್ ಕಾಲೇಜು ಮಟ್ಟದ ಸಾಂಸ್ಕೃತಿಕ ಹಬ್ಬ ಅವಿನ್ಯ- 2025 ಕಾರ್ಯಕ್ರಮದ ಉದ್ಘಾಡನೆಯು ಮಾ.17 ರಂದು ನಡೆಯಿತು.
ಅಂತರ್ ಕಾಲೇಜು ಮಟ್ಟದ ಸಾಂಸ್ಕೃತಿಕ ಹಬ್ಬವನ್ನು ಬೆಂಗಳೂರು ಯುವ ಉದ್ಯಮಿ ಕಿರಣ್ ಚಂದ್ರ ಪುಷ್ಪಗಿರಿ ಉದ್ಘಾಟಿಸಿ ನಮ್ಮ ಯಶಸ್ವಿನ ಹೆಜ್ಜೆಗೆ ಶಿಕ್ಷಣ ಮುಖ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೋ.ಸುರೇಶ್ ವಿ ವಹಿಸಿ ನಮ್ಮ ಕಾಲೇಜಿನ ಅಂದ ಚಂದವನ್ನು ಮಾಜಿ ಶಾಸಕ ವಸಂತ ಬಂಗೇರ ಹಾಗೂ ಶಾಸಕ ಹರೀಶ್ ಪೂಂಜರವರು ಹೆಚ್ಚಿಸಿದ್ದಾರೆ ಎಂದರು.

ಮುಖ್ಯ ಅತಿಥಿಗಳಾಗಿ ಸೂಪರ್ ಹಿಟ್ ದಸ್ಕತ್ ತುಳು ಚಿತ್ರದ ನಿರ್ದೇಶಕ ಅನೀಶ್ ಅಮೀನ್ ವೇಣೂರು ಮಾತನಾಡಿ ಈ ಕಾಲೇಜಿನ ಬಗ್ಗೆ ಸಾವಿರಾರು ನೆನಪುಗಳಿವೆ ಎಂದರು.
ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಸಂಯೋಜಕ ಡಾ.ಕುಶಾಲಪ್ಪ ಎಸ್,ಸಹ ಸಂಯೋಜಕರಾದ ಡಾ.ರವಿ ಎಂ.ಎನ್,ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆ ವೈಲೆಟ್ ಮೋರಾಸ್,ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜಗದೀಶ್,ಅವಿನ್ಯ ಸಂಯೋಜಕಿ ಅನನ್ಯ ಎಸ್ ಜೈನ್,ಸಾಂಸ್ಕೃತಿಕ ಸಂಯೋಜಕಿ ಬಿ.ನಯನಾ,ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಪವನ್ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಹಿರಿಯ ವಿದ್ಯಾರ್ಥಿ, ಯುವ ನಿರ್ದೇಶಕ ಅನೀಶ್ ಅಮೀನ್ ಅವರನ್ನು ಸನ್ಮಾನಿಸಲಾಯಿತು
ವಿದ್ಯಾರ್ಥಿಗಳಾದ ರೈಹಾನ ಮತ್ತು ಪ್ರತೀಕ್ ಕಾರ್ಯಕ್ರಮ ನಿರೂಪಿಸಿದರು.
ಸ್ಟೂಡೆಂಟ್ ವೆಲ್ಪೆರ್ ಆಫೀಸರ್ ಪ್ರೋ. ಪದ್ಮನಾಭ ಕೆ ಸ್ವಾಗತಿಸಿದರು. ವಿದ್ಯಾರ್ಥಿ ಸಂಘದ ಅಧ್ಯಕ್ಷೆ ನಿವೇದಿತಾ ವಂದಿಸಿದರು.