23.5 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಕಳೆಂಜ: ಪಲ್ಲದಂಗಡಿ, ಕಾಂತ್ರೇಲು ಹಾಗೂ ಹತ್ಯಡ್ಕದ ಮುದ್ದಿಗೆ, ಕುಂಟಾಲಪಳಿಕೆ ಕೆಎಸ್ ಆರ್ ಟಿಸಿ ಬಸ್ಸು ಸಂಚಾರಕ್ಕೆ ಚಾಲನೆ: ಬಸ್ ನ್ನು ಸ್ವಾಗತಿಸಿದ ಮುದ್ದಿಗೆಯ ಗ್ರಾಮಸ್ಥರು

ಕಳೆಂಜ : ಇಲ್ಲಿಯ ಪಲ್ಲದಂಗಡಿ ಕಾಂತ್ರೇಲು ಹಾಗೂ ಹತ್ಯಡ್ಕ ಗ್ರಾಮದ ಮುದ್ದಿಗೆ, ಕುಂಟಾಲಪಳಿಕೆ ವಿದ್ಯಾರ್ಥಿಗಳಿಗೆ ಮತ್ತು ಗ್ರಾಮಸ್ಥರ ಅನುಕೂಲಕ್ಕಾಗಿ ಮಾ.19 ರಂದು ಕೆಎಸ್ ಆರ್ ಟಿಸಿ ಬಸ್ಸು ಸಂಚಾರ ಪ್ರಾರಂಭವಾಗಿದ್ದು ಇಂದು(ಮಾ.21) ಮುದ್ದಿಗೆ ಎಂಬಲ್ಲಿ ಊರವರಿಂದ ಬಸ್ಸಿಗೆ ಚಾಲನೆ ನೀಡಲಾಯಿತು.

ಬಸ್ಸಿನ ಸಮಸ್ಯೆ ಬಗ್ಗೆ ಪುತ್ತೂರು ಶಾಸಕ ಅಶೋಕ್ ರೈ ರವರಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದ್ದು ತಕ್ಷಣವೇ ಸ್ಪಂದಿಸಿ ಅವರು ಸಾರಿಗೆ ಸಚಿವರಿಗೆ ಮನವಿ ಮಾಡಿದ್ದರು, ನಂತರ ತ್ವರೀತ ಕಾರ್ಯಕ್ಕಾಗಿ ಸಂಸದ ಕ್ಯಾ| ಬ್ರಿಜೇಶ್ ಚೌಟ ರವರಿಗೆ ಮನವಿ ಸಲ್ಲಿಸಿದಾಗ ಕೂಡಲೇ ಸ್ಪಂದಿಸಿ ಸಾರಿಗೆ ಸಂಸ್ಥೆಯ ಅಧಿಕಾರಿಗಳಿಗೆ ತಿಳಿಸಿ ಮಾ.19 ರಂದು ಮುದ್ದಿಗೆ ತನಕ ಬಸ್ಸಿನ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟಿದ್ದಾರೆ.

ಈ ಸಂದರ್ಭದಲ್ಲಿ ಅರಸಿನಮಕ್ಕಿ ಗ್ರಾ.ಪಂ. ಉಪಾಧ್ಯಕ್ಷ ಸುಧೀರ್ ಕುಮಾರ್, ಪಂ. ಸ್ಥಳೀಯ ಸದಸ್ಯರಾದ ಪ್ರೇಮಚಂದ್ರ ಕೆ. ಬಿಜೆಪಿ ಮಹಾಶಕ್ತಿ ಕೇಂದ್ರ ಕಾರ್ಯದರ್ಶಿ ಗಣೇಶ್ ಹೋಸ್ತೋಟ, ದಿವಾಕರ್ ತಾಮ್ಹನಕಾರ್, ಕಳೆಂಜ ಗ್ರಾ.ಪಂ ಸದಸ್ಯ ಗಣೇಶ್ ಕುಂದರ್, ಮಾಜಿ ಸೈನಿಕರಾದ ಮಹಾಬಲ ರಾಣ್ಯ ಮತ್ತು ಮೋಹನ್ ಶೆಟ್ಟಿ ,ಕಪಿಲಕೇಸರಿ ಕುಂಟಾಲಪಳಿಕೆ ಅಧ್ಯಕ್ಷರಾದ ರಾಜೇಶ್ ಬೊಳ್ಳೊಡಿ, ಪ್ರಸನ್ನ ನಾಯ್ಕ ಮತ್ತು ಕಳೆಂಜ ಶಕ್ತಿಕೇಂದ್ರ ಅಧ್ಯಕ್ಷರು & ಪ್ರಾಥಮಿಕ ಸಹಕಾರಿ ಸಂಘದ ಅಧ್ಯಕ್ಷ ಧನಂಜಯ ಗೌಡ, ಪ್ರಾ.ಸ.ಸಂಘ ನಿಡ್ಲೆಯ ನಿಕಟಪೂರ್ವ ಅಧ್ಯಕ್ಷರು ಹಾಲಿ ನಿರ್ದೇಶಕ ರಮೇಶ್ ರಾವ್ ಕಾಯಡ, ಜಯಚಂದ್ರ ಬಲ್ಕಾಜೆ ಹಾಗೂ ಊರವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Related posts

ನಿಡ್ಲೆ ವಿಕಲಚೇತನರ ವಿಶೇಷ ಗ್ರಾಮ ಸಭೆ

Suddi Udaya

ಪಡಂಗಡಿ ಪ್ರಾ.ಕೃ.ಪ.ಸ. ಸಂಘಕ್ಕೆ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಂದ ಸಾಧನ ಪ್ರಶಸ್ತಿ

Suddi Udaya

ಮುಂಡಾಜೆ : ಶಿವಂ ಬೇಕರಿ ಮತ್ತು ಪ್ಲವರ್ ಡೆಕೋರೇಶನ್ ಶುಭಾರಂಭ

Suddi Udaya

ಬಳಂಜ ಬೊಂಟ್ರೋಟ್ಟು ಕ್ಷೇತ್ರದ ಕಲಶಾಭಿಷೇಕದ ಕೂಪನ್ ಬಿಡುಗಡೆ: ಡಿ28 ರಿಂದ 31 ರವರೆಗೆ ಕಲಶಾಭಿಷೇಕ, ದೈವಗಳಿಗೆ ನರ್ತನ ಸೇವೆ, ಚಂಡಿಕಾಹೋಮ

Suddi Udaya

ಗ್ರಾ.ಪಂ. ನೌಕರರ ಜಿಲ್ಲಾ ಮಟ್ಟದ ಕುಂದು ಕೊರತೆ ಅದಾಲತ್ ಸಭೆ ನಡೆಸುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಿಗೆ ಮನವಿ

Suddi Udaya

ದೇಶಭಕ್ತಿ ಗೀತೆ ಸ್ಪರ್ಧೆ: ಉಜಿರೆ ಶ್ರೀ. ಧ. ಮಂ ಆಂ.ಮಾ. ಶಾಲೆಯ ವಿದ್ಯಾರ್ಥಿಗಳಿಗೆ ಪ್ರಶಸ್ತಿ

Suddi Udaya
error: Content is protected !!