22.6 C
ಪುತ್ತೂರು, ಬೆಳ್ತಂಗಡಿ
July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಕಳೆಂಜ: ಪಲ್ಲದಂಗಡಿ, ಕಾಂತ್ರೇಲು ಹಾಗೂ ಹತ್ಯಡ್ಕದ ಮುದ್ದಿಗೆ, ಕುಂಟಾಲಪಳಿಕೆ ಕೆಎಸ್ ಆರ್ ಟಿಸಿ ಬಸ್ಸು ಸಂಚಾರಕ್ಕೆ ಚಾಲನೆ: ಬಸ್ ನ್ನು ಸ್ವಾಗತಿಸಿದ ಮುದ್ದಿಗೆಯ ಗ್ರಾಮಸ್ಥರು

ಕಳೆಂಜ : ಇಲ್ಲಿಯ ಪಲ್ಲದಂಗಡಿ ಕಾಂತ್ರೇಲು ಹಾಗೂ ಹತ್ಯಡ್ಕ ಗ್ರಾಮದ ಮುದ್ದಿಗೆ, ಕುಂಟಾಲಪಳಿಕೆ ವಿದ್ಯಾರ್ಥಿಗಳಿಗೆ ಮತ್ತು ಗ್ರಾಮಸ್ಥರ ಅನುಕೂಲಕ್ಕಾಗಿ ಮಾ.19 ರಂದು ಕೆಎಸ್ ಆರ್ ಟಿಸಿ ಬಸ್ಸು ಸಂಚಾರ ಪ್ರಾರಂಭವಾಗಿದ್ದು ಇಂದು(ಮಾ.21) ಮುದ್ದಿಗೆ ಎಂಬಲ್ಲಿ ಊರವರಿಂದ ಬಸ್ಸಿಗೆ ಚಾಲನೆ ನೀಡಲಾಯಿತು.

ಬಸ್ಸಿನ ಸಮಸ್ಯೆ ಬಗ್ಗೆ ಪುತ್ತೂರು ಶಾಸಕ ಅಶೋಕ್ ರೈ ರವರಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದ್ದು ತಕ್ಷಣವೇ ಸ್ಪಂದಿಸಿ ಅವರು ಸಾರಿಗೆ ಸಚಿವರಿಗೆ ಮನವಿ ಮಾಡಿದ್ದರು, ನಂತರ ತ್ವರೀತ ಕಾರ್ಯಕ್ಕಾಗಿ ಸಂಸದ ಕ್ಯಾ| ಬ್ರಿಜೇಶ್ ಚೌಟ ರವರಿಗೆ ಮನವಿ ಸಲ್ಲಿಸಿದಾಗ ಕೂಡಲೇ ಸ್ಪಂದಿಸಿ ಸಾರಿಗೆ ಸಂಸ್ಥೆಯ ಅಧಿಕಾರಿಗಳಿಗೆ ತಿಳಿಸಿ ಮಾ.19 ರಂದು ಮುದ್ದಿಗೆ ತನಕ ಬಸ್ಸಿನ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟಿದ್ದಾರೆ.

ಈ ಸಂದರ್ಭದಲ್ಲಿ ಅರಸಿನಮಕ್ಕಿ ಗ್ರಾ.ಪಂ. ಉಪಾಧ್ಯಕ್ಷ ಸುಧೀರ್ ಕುಮಾರ್, ಪಂ. ಸ್ಥಳೀಯ ಸದಸ್ಯರಾದ ಪ್ರೇಮಚಂದ್ರ ಕೆ. ಬಿಜೆಪಿ ಮಹಾಶಕ್ತಿ ಕೇಂದ್ರ ಕಾರ್ಯದರ್ಶಿ ಗಣೇಶ್ ಹೋಸ್ತೋಟ, ದಿವಾಕರ್ ತಾಮ್ಹನಕಾರ್, ಕಳೆಂಜ ಗ್ರಾ.ಪಂ ಸದಸ್ಯ ಗಣೇಶ್ ಕುಂದರ್, ಮಾಜಿ ಸೈನಿಕರಾದ ಮಹಾಬಲ ರಾಣ್ಯ ಮತ್ತು ಮೋಹನ್ ಶೆಟ್ಟಿ ,ಕಪಿಲಕೇಸರಿ ಕುಂಟಾಲಪಳಿಕೆ ಅಧ್ಯಕ್ಷರಾದ ರಾಜೇಶ್ ಬೊಳ್ಳೊಡಿ, ಪ್ರಸನ್ನ ನಾಯ್ಕ ಮತ್ತು ಕಳೆಂಜ ಶಕ್ತಿಕೇಂದ್ರ ಅಧ್ಯಕ್ಷರು & ಪ್ರಾಥಮಿಕ ಸಹಕಾರಿ ಸಂಘದ ಅಧ್ಯಕ್ಷ ಧನಂಜಯ ಗೌಡ, ಪ್ರಾ.ಸ.ಸಂಘ ನಿಡ್ಲೆಯ ನಿಕಟಪೂರ್ವ ಅಧ್ಯಕ್ಷರು ಹಾಲಿ ನಿರ್ದೇಶಕ ರಮೇಶ್ ರಾವ್ ಕಾಯಡ, ಜಯಚಂದ್ರ ಬಲ್ಕಾಜೆ ಹಾಗೂ ಊರವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Related posts

ನಕಲಿ ಚಿನ್ನದ ಜಾಲಕ್ಕೆ ತಡೆ: ಚಿನ್ನಾಭರಣ ಮೌಲ್ಯಮಾಪಕರ ತುರ್ತು ಸಮಾಲೋಚನಾ ಸಭೆ

Suddi Udaya

ಮದ್ದಡ್ಕದಲ್ಲಿ 14ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ

Suddi Udaya

ನಡ ಸ.ಪ್ರೌ. ಶಾಲಾ ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದ ಕ್ರೀಡಾಪಟು ದಿನೇಶ್ ವೇಣೂರುರಿಂದ ಕ್ರೀಡಾ ಸ್ಪೈಕ್ ಶೂ ಕೊಡುಗೆ

Suddi Udaya

ಯುಗಾದಿ ನವ ಪಲ್ಲವಕೆ ನಾಂದಿ – ಸ್ನೇಹ ಕೂಟ ಕಾರ್ಯಕ್ರಮ

Suddi Udaya

ಪಟ್ರಮೆ ಅನಾರು ಸ.ಉ.ಹಿ.ಪ್ರಾ. ಶಾಲೆ: ಶಾಲಾ ವಿದ್ಯಾರ್ಥಿಗಳ ಅನುಪಸ್ಥಿತಿಯಲ್ಲಿ ಗ್ರಾ.ಪಂ ಅಧ್ಯಕ್ಷ, ಸದಸ್ಯರು ಮತ್ತು ಗ್ರಾಮಸ್ಥರಿಂದ ಸ್ವಾತಂತ್ರ್ಯೋತ್ಸವ ಆಚರಣೆ

Suddi Udaya

ಕೊಕ್ಕಡ ಕೆನರಾ ಬ್ಯಾಂಕಿನಿಂದ ಗ್ರಾಹಕರಿಗೆ ಆಗುತ್ತಿರುವ ಸಮಸ್ಯೆಗಳ ವಿರುದ್ಧ ಬೃಹತ್ ಪ್ರತಿಭಟನೆ

Suddi Udaya
error: Content is protected !!