ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಮುಂಡಾಜೆ ಚಿತ್ಪಾವನ ಸಂಘಟನೆ ವಾರ್ಷಿಕೋತ್ಸವ

ಮುಂಡಾಜೆ: ಇಲ್ಲಿಯ ಚಿತ್ಪಾವನ ಸಂಘಟನೆಯ ವಾರ್ಷಿಕೋತ್ಸವವು ಸನ್ಯಾಸಿಕಟ್ಟೆ ಶ್ರೀ ಪರಶುರಾಮ ದೇವಸ್ಥಾನದ ಸಭಾಭವನದಲ್ಲಿ ಜರಗಿತು.


ಹಿರಿಯ ಪತ್ರಕರ್ತ, ಯಕ್ಷಗಾನ ಕಲಾವಿದ ಶ್ರೀಕರ ಮರಾಠೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಸಂಘಟನೆಗಳು ಬಲಗೊಂಡಾಗ ಸಮುದಾಯದಲ್ಲಿ ಒಗ್ಗಟ್ಟು ಹೆಚ್ಚುತ್ತದೆ. ಪ್ರತಿಭೆಗಳ ಅನಾವರಣಕ್ಕೆ, ಸಾಮಾಜಿಕ ಚಿಂತನೆಯ ದೃಷ್ಟಿಯಲ್ಲಿ ಉತ್ತಮ ಕಾರ್ಯಕ್ರಮಗಳು ಮೂಡಿ ಬರಬೇಕು ಎಂದು ಹೇಳಿದರು.


ಸಂಘಟನೆಯ ಅಧ್ಯಕ್ಷೆ ಸುಷ್ಮಾ ಶಶಾಂಕ ಭಿಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೃಷಿಕ ಸಂತೋಷ ಹೆಬ್ಬಾರ್, ಗೌರವಾಧ್ಯಕ್ಷ ಜಗದೀಶ ಆರ್.ಫಡಕೆ ಉಪಸ್ಥಿತರಿದ್ದರು.

ಸನ್ಮಾನ: ನಾನಾ ರಂಗಗಳಲ್ಲಿ ವಿಶಿಷ್ಟ ಸಾಧನೆಗೈದ ಸಮುದಾಯದ ಕೇಶವ ಫಡಕೆ (ಸಮಾಜ ಸೇವೆ), ಗೋವಿಂದ ಚಿಪಳೂಣಕರ್ (ಧಾರ್ಮಿಕ), ಡಾ. ಅಮಿತ್ ಖಾಡಿಲ್ಕರ್ (ವೈದ್ಯಕೀಯ), ಜ್ಯೋತಿ ದಿವಾಕರ ಚಿಪಳೂಣಕರ್ (ಸಾಮಾಜಿಕ ಸೇವೆ), ಸ್ವಾತಿ ಗೋಖಲೆ ಮತ್ತು ನೀತಾ ಗೋಖಲೆ (ಅಡುಗೆ), ವೆಂಕಟೇಶ ಬೆಂಡೆ (ಪತ್ರಕರ್ತ), ಅರ್ಜುನ್ ಎ. ಹೆಬ್ಬಾರ್ (ಭೂತಾರಾಧನೆ) ಇವರನ್ನು ಗೌರವಿಸಲಾಯಿತು.

ಸಂಘಟನೆಯ ಸದಸ್ಯರಿಂದ ಭಜನೆ, ಚಿತ್ಪಾವನಿ ಭಾಷೆಯ ನಾಟಕ, ಇತ್ಯಾದಿ ಕಾರ್ಯಕ್ರಮಗಳು ನಡೆದವು.

ಕಾರ್ಯದರ್ಶಿ ರಂಗನಾಥ ಹೆಬ್ಬಾರ್ ವರದಿ ವಾಚಿಸಿದರು. ಗೌರವಾಧ್ಯಕ್ಷ ವಾಸುದೇವ ಗೋಖಲೆ ಸ್ವಾಗತಿಸಿದರು.ಚಿತ್ರಾ ಧನಂಜಯ ಭಿಡೆ ಕಾರ್ಯಕ್ರಮ ನಿರೂಪಿಸಿದರು.

Related posts

ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷರಾಗಿ ನಾವೂರು ಗ್ರಾ.ಪಂ ಮಾಜಿ ಅಧ್ಯಕ್ಷ ಗಣೇಶ್ ನಾವೂರು ನೇಮಕ

Suddi Udaya

ಮುಂಡಾಜೆ: ಶ್ರೀ ದುರ್ಗಾಪರಮೇಶ್ವರೀ ಯಕ್ಷಗಾನ ಅಧ್ಯಯನ ಕೇಂದ್ರ ಉದ್ಘಾಟನೆ

Suddi Udaya

ಪದ್ಮುಂಜ ಸಿ.ಎ ಬ್ಯಾಂಕ್ ಬಳಿ ಸರ್ಕಾರಿ ಗೇರುತೋಟ ಹಾಗೂ ರಬ್ಬರ್ ತೋಟಕ್ಕೆ ತಗುಲಿದ ಬೆಂಕಿ : ಅಪಾರ ನಷ್ಟ

Suddi Udaya

ಗರ್ಡಾಡಿ ಪಲ್ಗುಣಿ ನದಿ ಪರಿಸರದಲ್ಲಿ ನೀರು ನಾಯಿ

Suddi Udaya

ಬೆಳ್ತಂಗಡಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಪ್ರಥಮ ದರ್ಜೆ ಸಹಾಯಕ ಎಂ.ಆ‌ರ್. ಪ್ರಸನ್ನರಿಗೆ ಬೀಳ್ಕೊಡುಗೆ

Suddi Udaya

ಕೊಕ್ಕಡ ಗ್ರಾ.ಪಂ. ವ್ಯಾಪ್ತಿಯಲ್ಲಿ ತೋಡುಗಳ ಹೂಳೆತ್ತುವ ಕಾರ್ಯ

Suddi Udaya
error: Content is protected !!