25.5 C
ಪುತ್ತೂರು, ಬೆಳ್ತಂಗಡಿ
July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕಿಲ್ಲೂರು ಮುಖ್ಯ ರಸ್ತೆಯ ಸೇತುವೆ ಸುರಕ್ಷಿತಗೊಳಿಸಲು ಪ್ರತಿಭಟನೆ : ಕಿಲ್ಲೂರು ಮುಖ್ಯ ರಸ್ತೆಯ ಸೇತುವೆ ಸುರಕ್ಷಿತಗೊಳಿಸಲು ಪ್ರತಿಭಟನೆ : ಲೋಕೋಪಯೋಗಿ ಇಲಾಖೆಯ ಎಇಇ ಹಾಗೂ ಸಹಾಯಕ ಇಂಜಿನಿಯರ್ ರವರಿಗೆ ಮನವಿ

ಬೆಳ್ತಂಗಡಿ: ಕಿಲ್ಲೂರು ಮುಖ್ಯ ರಸ್ತೆಯ ಮಧ್ಯೆ, ನಾವೂರು ಗ್ರಾಮದ ಮುರ ಎಂಬಲ್ಲಿನ ಸೇತುವೆ ಬಿರುಕು, ಸೇತುವೆಯ ಎರಡು ಕಡೆ ಸುರಕ್ಷತೆ ಗೋಡೆ ಇಲ್ಲದೆ ಅಪಘಾತಗಳು ನಿರಂತರವಾಗಿ ನಡೆಯುತ್ತಿದ್ದು ವರ್ಷಗಳಾದರೂ ಯಾವುದೇ ವ್ಯವಸ್ಥಿತ ಪರಿಹಾರ ಆಗಿಲ್ಲ. ಸುಮಾರು ವರ್ಷಗಳಿಂದ ಎಸ್ ಡಿ ಪಿ ಐ ನಾವೂರು ವತಿಯಿಂದ ಶಾಶ್ವತ ಪರಿಹಾರ, ಸುರಕ್ಷಿತ ತಡೆ ಗೋಡೆ, ಸೇತುವೆಯ ಅಗಲೀಕರಣಕ್ಕೆ ಮನವಿ ನೀಡುತ್ತಾ ಬಂದಿದೆ. ಭರವಸೆ ನೀಡುತ್ತಾರೆಯೇ ಹೊರತು ಅಧಿಕಾರಿಗಳು ನಿರ್ಲಕ್ಷಿಸುತ್ತಾ ಬಂದಿದ್ದು, ಇದೀಗ ನಾವೂರಿಂದ 3 ಕಿ.ಮಿ ಮತ್ತೆ ಮರು ಡಾಮರೀಕರಣದ ಕಾಮಗಾರಿ ಆರಂಭಿಸಿದ್ದು ಈ ಸಂದರ್ಭದಲ್ಲಿ ಮುರ ಸೇತುವೆ ಬಳಿ ಸುರಕ್ಷಿತ ವ್ಯವಸ್ಥೆ ಕಲ್ಪಿಸದೆ ಮರುಡಾಮರೀಕರಕ್ಕೆ ಅವಕಾಶ ಕಲ್ಪಿಸುವುದಿಲ್ಲ ಎಂದು ನಾವೂರು ಹಿತರಕ್ಷಣಾ ವೇದಿಕೆ ವತಿಯಿಂದ ಅಧ್ಯಕ್ಷ ಸಾದಿಕ್ ನಾವೂರು ಇವರ ನೇತೃತ್ವದಲ್ಲಿ ಡಾಮರೀಕರಣದ ವಾಹನವನ್ನು ತಡೆದು ಪ್ರತಿಭಟನೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಲೋಕೋಪಯೋಗಿ ಇಲಾಖೆಯ(AEE) ಎಇಇ ಬಕಪ್ಪ ಹಾಗೂ ಸಹಾಯಕ ಇಂಜಿನಿಯರ್ ಶಿವಕುಮಾರ್ ರವರು ಮನವಿಗೆ ಸ್ಪಂದಿಸಿ ಸಮಸ್ಯೆ ಇರುವ ಸ್ಥಳವನ್ನು ಪರಿಶೀಲನೆ ನಡೆಸಿದರು. ಬಳಿಕ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಅವರು ಸಮಸ್ಯೆ ಬಗ್ಗೆ ಅರಿವಾಗಿದ್ದು ಬಿರುಕುಗೊಂಡ ಸ್ಥಳದ ಅಸುಪಾಸಿನಲ್ಲಿ 50 ಮೀಟರ್ ವರೆಗೆ ಕೆಲಸವನ್ನು ಸ್ಥಗಿತಗೊಳಿಸುವುದಾಗಿಯೂ ಬಿರುಕುಗೊಂಡ ಮೋರಿಯನ್ನು ಬದಲಿಸಿ ಸಮಸ್ಯೆ ಪರಿಹಾರಗೊಳಿಸಿದ ನಂತರ ಡಾಮರೀಕರಣ ಮಾಡುವುದಾಗಿ ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ಸಲೀಮ್ ಮುರ, ಬದ್ರು ದೇರ್ಲಕ್ಕಿ, ಖಾದರ್ ನಾವೂರು, ದಾಸನ್ನ ಶೆಟ್ಟಿ ಮುರ, ಸಾದಿಕ್ ಕಿರ್ನಡ್ಕ, ಅಬ್ದುಲ್ ರಹಿಮಾನ್ ಮುಸ್ಲಿಯಾರ್, ಇಸ್ಮಾಯಿಲ್ ಸಿ. ಎಂ, ಇರ್ಷಾದ್, ಬಶೀರ್ ಕಳಸಾ, ಹಂಝ ಕಿರ್ನಡ್ಕ, ಇಕ್ಬಾಲ್ ಮುರ, ಇರ್ಫಾನ್ ನಾವೂರು, ಆದಂ ಕೈಕಂಬ, ಇಸ್ಮಾಯಿಲ್ ದೇರ್ಲಕ್ಕಿ, ರಮ್ಲಾ ಇಂದಬೆಟ್ಟು, ಮನ್ಸೂರ್ ದುಗಲಚ್ಚಿಲ್ ಮುಂತಾದವರು ಉಪಸ್ಥಿತರಿದ್ದರು.

Related posts

ವೇಣೂರು: ನಿಟ್ಟಡೆ ಕುಂಭಶ್ರೀ ಶಿಕ್ಷಣ ಸಂಸ್ಥೆಗೆ ‘ಶಿಕ್ಷಣ ಭೀಷ್ಮ ಪ್ರಶಸ್ತಿ’ಯ ಗರಿ

Suddi Udaya

ಬೆಳ್ತಂಗಡಿ ತಾಲೂಕು ರಾಜ ಕೇಸರಿ ಟ್ರಸ್ಟಿನ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಬಂದಾರು ಚಂದ್ರಹಾಸ ಕುಂಬಾರರವರಿಗೆ ಸಾಹಿತ್ಯ ಸಾಮ್ರಾಟ್ ಪ್ರಶಸ್ತಿ

Suddi Udaya

ಕಸ್ತೂರಿ ರಂಗನ್ ವರದಿಯನ್ನು ವಿರೋಧಿಸಿ ಮಲವಂತಿಗೆ ಗ್ರಾಮ ಪಂಚಾಯತ್ ನಲ್ಲಿ ಪ್ರತಿಭಟನೆ

Suddi Udaya

ಬೆಳ್ತಂಗಡಿ ತಾಲೂಕಿನ ಮಳೆ ಹಾನಿ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಭೇಟಿ

Suddi Udaya

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಚಾರ ಮಂಟಪ ಕಾರ್ಯಕ್ರಮ

Suddi Udaya
error: Content is protected !!