September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಅಂತರ್ ಕಾಲೇಜು ತೆಂಕುತಿಟ್ಟು ಯಕ್ಷಗಾನ ಸ್ಪರ್ಧೆ: ಉಜಿರೆ ಎಸ್.ಡಿ.ಎಂ. ಕಾಲೇಜು ಪ್ರಥಮ

ಉಜಿರೆ: ಸುರತ್ಕಲ್ ಗೋವಿಂದ ದಾಸ ಕಾಲೇಜು ಹಾಗೂ ಸುರತ್ಕಲ್ ಅಗರಿ ಶ್ರೀನಿವಾಸ ಭಾಗವತರ ಸಂಸ್ಮರಣ ವೇದಿಕೆ ಆಯೋಜನೆ ಮಾಡಿರುವ “ಯಕ್ಷಯಾನ-2025” ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ತೆಂಕುತಿಟ್ಟು ಯಕ್ಷಗಾನ ಸ್ಪರ್ಧೆಯಲ್ಲಿ ಉಜಿರೆ ಎಸ್.ಡಿ.ಎಂ ಕಾಲೇಜು ಯಕ್ಷಗಾನ ಕಲಾಕೇಂದ್ರದ ತಂಡ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ.

ಯಕ್ಷಗುರು ಅರುಣ್ ಕುಮಾರ್ ಧರ್ಮಸ್ಥಳ ನಿರ್ದೇಶನದ ಎಸ್.ಡಿ.ಎಂ. ತಂಡ “ಸುಧನ್ವ ಮೋಕ್ಷ” ಪ್ರಸಂಗವನ್ನು ಪ್ರಸ್ತುತ ಪಡಿಸಿ ಪ್ರಥಮ ಸ್ಥಾನ ಪಡೆದು, ನಾಲ್ಕು ವೈಯಕ್ತಿಕ ಬಹುಮಾನವನ್ನು ಪಡೆದುಕೊಂಡಿದೆ.

ಪುಂಡುವೇಷ ಪ್ರಥಮ ಸುಬ್ರಮಣ್ಯ ಭಟ್ (ಸುಧನ್ವ), ರಾಜವೇಷ ದ್ವಿತೀಯ ಸೌರವ್ ಶೆಟ್ಟಿ (ಅರ್ಜುನ), ಸ್ತ್ರೀ ವೇಷ ಪ್ರಥಮ ಸಾಕ್ಷಿ (ಪ್ರಭಾವತಿ), ಹಾಸ್ಯ ಪ್ರಥಮ ಅಮೋಘ ಶಂಕರ(ದೂತ) ವೈಯಕ್ತಿಕ ಬಹುಮಾನ. ಮಿಥುನ್ ರಾಜ್ (ಹೃಷಕೇತು), ವರ್ಷಿತ್(ಹಂಸಧ್ವಜ), ಹಾರ್ದಿಕ್ (ಅನುಸಾಲ್ವ), ಪ್ರಾವಿಣ್ಯ (ಕೃಷ್ಣ). ರಂಗಸಜ್ಜಿಕೆಯಲ್ಲಿ ಕು. ಮೋನಿಷಾ ಹಾಗೂ ಕು. ಮನಸ್ವಿ ಸಹಕರಿಸಿದರು.

ಹಿಮ್ಮೇಳದಲ್ಲಿ ಭಾಗವತರಾಗಿ ಗಿರೀಶ್ ರೈ ಕಕ್ಕೆಪದವು, ಚೆಂಡೆಯಲ್ಲಿ ಆನಂದ ಗುಡಿಗಾರ್ ಕೆರ್ವಾಶೆ, ಮದ್ದಳೆಯಲ್ಲಿ ಆದಿತ್ಯ ಹೊಳ್ಳ ಭಾಗವಹಿಸಿದರು.

Related posts

ಓಡಿಲ್ನಾಳ ಶಾಲಾ ವಿದ್ಯಾರ್ಥಿಗಳಿಗೆ ನೆರಿಯ ಸ್ಟೇಶನ್ ಇಂಚಾರ್ಜ್ ಪೆಟ್ರೋನೆಟ್ ವತಿಯಿಂದ ಬ್ಯಾಗ್ ಹಾಗೂ ಲೇಖನಿ ಸಾಮಾಗ್ರಿ ವಿತರಣೆ

Suddi Udaya

ಕಸಾಪ ಸಮ್ಮೇಳನ; ಸರ್ವಾಧ್ಯಕ್ಷ ಪ್ರೊ.ಎ ಕೃಷ್ಣಪ್ಪ ಪೂಜಾರಿ ಅವರಿಗೆ ಅಧಿಕೃತ ಆಮಂತ್ರಣ

Suddi Udaya

ಹತ್ಯಡ್ಕ: ಹೊಸ್ತೋಟ ನಿವಾಸಿ, ಯಕ್ಷಗಾನ ಕಲಾವಿದ ಅಂತರ ದಿನೇಶ್ ಭಟ್ ನಿಧನ

Suddi Udaya

ರಾಜ್ಯ ಕಾಂಗ್ರೆಸ್ ಸರ್ಕಾರದ “ಜನ ವಿರೋಧಿ ನೀತಿ”ಗಳನ್ನು ಖಂಡಿಸಿ ನಾವೂರು ಗ್ರಾ.ಪಂ. ಎದುರು ಬಿಜೆಪಿ ಪ್ರತಿಭಟನೆ

Suddi Udaya

ಅಳದಂಗಡಿ ಗ್ರಾ. ಪಂ. ನಲ್ಲಿ ಸಾಮಾಜಿಕ ಪರಿಶೋದನಾ ವಿಶೇಷ ಗ್ರಾಮ ಸಭೆ

Suddi Udaya

ರಂಝಾನ್ ಪ್ರಯುಕ್ತ ಮದ್ದಡ್ಕದಲ್ಲಿ ವಿಶಿಷ್ಟ ಕಾರ್ಯಕ್ರಮ: 50 ಕುಟುಂಬಕ್ಕೆ ರಂಝಾನ್ ಕಿಟ್ , 25 ಕುಟುಂಬಕ್ಕೆ “ಝಕಾತ್ ದಾನ ನಿಧಿ”, ಶೈಕ್ಷಣಿಕ ನಿಧಿ‌ ಹಸ್ತಾಂತರ

Suddi Udaya
error: Content is protected !!