23.5 C
ಪುತ್ತೂರು, ಬೆಳ್ತಂಗಡಿ
June 8, 2026
Uncategorized

ಜೈನ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಹಾಗೂ ಜೈನ ಜಾತಿ ಮತ್ತು ಧರ್ಮಕ್ಕೆ ಅಪಮಾನ ಆರೋಪ : ಮಹೇಶ್ ಶೆಟ್ಟಿ ತಿಮರೋಡಿ ಹಾಗೂರಾಜು ಶೆಟ್ಟಿ ಎಂಬವರ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು

ಬೆಳ್ತಂಗಡಿ: ಜೈನ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಹಾಗೂ ಜೈನ ಜಾತಿ ಮತ್ತು ಧರ್ಮಕ್ಕೆ ಅಪಮಾನಗೊಳಿಸಿದ್ದಾರೆಂದು ಆರೋಪಿಸಿ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ರಾಜು ಶೆಟ್ಟಿ ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ, ಉಜಿರೆ ಓಡಲ ನಿವಾಸಿ ಅಜಯ್ ಕುಮಾರ್ ಪಿ.ಕೆ ಅವರು ಇಂದು ಸಂಜೆ ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.
ಎ. 7 ರಂದು ಸಾಮಾಜಿಕ ಜಾಲತಾಣದಲ್ಲಿ ಒಂದು ಆಡಿಯೋ ಸಂಭಾಷಣೆಯ ತುಣುಕು ಹರಿದಾಡುತ್ತಿದ್ದು, ಆಡಿಯೋದಲ್ಲಿ ಕೇಳಿ ಬರುತ್ತಿರುವ ಸ್ವರವನ್ನು ಆಳಿಸಿದಾಗ ಚಿರಪರಿಚಿತ ಸ್ವರವಾಗಿದ್ದು, ಇದು
ಮಹೇಶ್ ಶೆಟ್ಟಿ ತಿಮರೋಡಿ ಮತ್ತು ರಾಜು ಶೆಟ್ಟಿ ಇವರ ಸಂಭಾಷಣೆಯ ಸ್ವರವಾಗಿರುತ್ತದೆ. ಆಡಿಯೋದಲ್ಲಿ ಜೈನರನ್ನು ಹಾಗೂ ಜೈನ ಧರ್ಮವನ್ನು ಅತ್ಯಂತ ಅವಹೇಳನಕಾರಿಯಾಗಿ ಇಬ್ಬರು ಮಾತಾನಾಡಿದ್ದು ಜೈನರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ.

ಈ ಅಡಿಯೋದಲ್ಲಿ “ ದುಡ್ಡು ಹಿಂದುಲೇನನೆ ಜೈನೆರೆನ ಅತ್ತತ್ತ, ದುಡ್ಡು ಹಿಂದುಲೆನನೆ ದುರುಪಯೋಗ ಮಲ್ಪರ ಅಕುಲು ಆಂಡಲಾ ನಮ್ಮಕ್ಕುಲೆಗು ಗೊತ್ತಾಪುಜಿ ನನಲಾ ಅವು ಬೇಜಾರ್ ಮುಲುಲ ಅಂಚನೆ ಉಂಡು ನಮ್ಮ ಅಜಿಲ ಸೀಮೆಲ ಅಂಚನೆ ಉಂಡು ಮೊಕುಲೆನ್ ಬುಳೆವರೇ ಬುಡಿಯಾರೇ ಬಲ್ಲಿ ನೆಟ್ ಪೆಟ್ ತಿಂದೆಂರ್ಡ ಅಡೆಗ್ ಜೈನೆರರ್ನ ಆಡಳಿತ ಮುಗಿಯಿಂಡ್ ಈ ಜೈನೆರೆಗ್ ಅವೊಂಜಿ ಸುಪ್ರಿಂ ಕೋರ್ಟ್ ” ಎಂದು ಹೇಳಿರುವುದಲ್ಲದೆ, ಜೈನರಿಗೆ ಅವ್ಯಾಚ್ಯ ಶಬ್ಧಗಳಿಂದ ಬೈದು ಜೈನ ಜಾತಿಯನ್ನು ನಿಂದಿಸಿರುತ್ತಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ಈ ಸಂಭಾಷಣೆಯನ್ನು ಆಲಿಸಿದಾಗ ಚಿರಪರಿಚಿತ ಸ್ವರಗಳಾದ, ಉಜಿರೆಯ ಕುಂಜರ್ಪ ಎಂಬಲ್ಲಿಯ ನಿವಾಸಿಯಾದ ಮಹೇಶ್ ಶೆಟ್ಟಿ ತಿಮರೋಡಿ ಮತ್ತು, ಬಡಗಕಾರಂದೂರು ರಾಜು ಶೆಟ್ಟಿ ಇವರದ್ದಾಗಿರುತ್ತದೆ. ಫೋನಿನಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಮತ್ತು ರಾಜು ಶೆಟ್ಟಿ ಇವರು ಮಾತಾನಾಡಿದ ಸಂಭಾಷಣೆಯ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದು ಜೈನ ಜಾತಿಗೆ ಅಪಮಾನ ಹಾಗೂ ಜೈನ ಧರ್ಮದ ಬಗ್ಗೆ ನಿಂದಿಸಿ ಸಮಾಜದ ಅಶಾಂತಿಗೆ ಕಾರಣವಾಗಿದೆ ಎಂದು ದೂರಿನಲ್ಲಿ ಅಪಾದೀಸಲಾಗಿದೆ.
ಜೈನರ ಧಾರ್ಮಿಕ ಭಾವನೆಗಳಿಗೆ ಅಪಮಾನ ಮಾಡಿ ಆಘಾತವನ್ನುಂಟು ಮಾಡುವ ಉದ್ದೇಶದಿಂದ ದ್ವೇಷ ಭಾವನೆಯಿಂದ ಕೃತ್ಯವನ್ನು ಮಾಡಿದ್ದು, ಇವರಿಬ್ಬರ ವಿರುದ್ಧ, ಮೇಲೆ ಮೇಲಿನ ಅಪರಾಧಕ್ಕಾಗಿ ಹಾಗೂ ತಮ್ಮ ತನಿಖೆಯ ವೇಳೆ ಕಂಡು ಬರುವ ಎಲ್ಲಾ ರೀತಿಯ ಅಪರಾಧಕ್ಕಾಗಿ ಸೂಕ್ತ ಪ್ರಕರಣ ದಾಖಲಿಸಿ, ನ್ಯಾಯ ಒದಗಿಸಿ ಕೊಡಬೇಕಾಗಿ ಒತ್ತಾಯಿಸಿದ್ದಾರೆ. ಮನವಿ ನೀಡುವ ಸಂದರ್ಭದಲ್ಲಿ ಜೈನ ಸಮಾಜ ಬಾಂಧವರು ಉಪಸ್ಥಿತರಿದ್ದರು.

Related posts

ಬಳಂಜ ಗ್ರಾ.ಪಂ. ನ ನೂತನ ಅಧ್ಯಕ್ಷರಾಗಿ ಶೋಭಾ ಕುಲಾಲ್, ಉಪಾಧ್ಯಕ್ಷರಾಗಿ ಯಶೋಧರ ಶೆಟ್ಟಿ ಅವಿರೋಧವಾಗಿ ಆಯ್ಕೆ

Suddi Udaya

ಆರ್ ಟಿ ಓ ಫ್ರೆಂಡ್ಸ್ ಕಾರ್ಕಳ ಇವರ ಆಶ್ರಯದಲ್ಲಿ: ಆರ್ ಟಿ ಓ ಟ್ರೋಫಿ 2025 ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟ

Suddi Udaya

ಧರ್ಮಸ್ಥಳ: 26ನೇ ವರ್ಷದ ‘ಭಜನಾ ತರಬೇತಿ ಕಮ್ಮಟ’ ಕಾರ್ಯಾಗಾರದ ಉಪನ್ಯಾಸ ಸರಣಿ ಕಾರ್ಯಕ್ರಮ

Suddi Udaya

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತಿಹಾಸ ಕಂಡರಿಯದೆ ದೊಡ್ಡ ಮಟ್ಟದ ಪ್ರವಾಹದಿಂದಾಗಿ ತೀವ್ರಮಟ್ಟದ ಹಾನಿ: ಸಂಕಷ್ಟಕಿಡಾಗಿರುವ ಜನತೆಗೆ ಪುನರ್ವಸತಿ ಹಾಗೂ ತುರ್ತು ಪರಿಹಾರ ಕ್ರಮಗಳನ್ನು ತ್ವರಿತಗತಿಯಲ್ಲಿ ಕೈಗೊಳ್ಳುವಂತೆ ವಿ.ಪ. ಶಾಸಕ ಪ್ರತಾಪಸಿಂಹ ನಾಯಕ್ ರಿಂದ ಮುಖ್ಯಮಂತ್ರಿಗಳಿಗೆ ಮನವಿ

Suddi Udaya

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ, ಶಾಂತಿವನ ಟ್ರಸ್ಟ್ ವತಿಯಿಂದ ‘ಯೋಗ ರತ್ನ ಪ್ರಶಸ್ತಿ’ಗೆ ಚಿನ್ಮಯಿ ಎ. ಬೆಂಗಳೂರು ಆಯ್ಕೆ

Suddi Udaya

ಕೆಪಿಸಿಸಿ ಕಾರ್ಮಿಕ ಘಟಕದ ರಾಜ್ಯ ಪದಾಧಿಕಾರಿಗಳ ಹಾಗೂ ಜಿಲ್ಲಾ ಅಧ್ಯಕ್ಷರುಗಳ ತರಬೇತಿ ಶಿಬಿರ

Suddi Udaya
error: Content is protected !!