ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜರವರ ಆಪ್ತ ಕಾರ್ಯದರ್ಶಿಯಾಗಿ 2ನೇ ಅವಧಿಗೂ ಮಂಜುನಾಥ ಎಂ. ರವರು ಪುನರ್ ನೇಮಕವಾಗಿದ್ದಾರೆ.
ಇವರು ಮೂಲತಃ ರೇಷ್ಮೆ ಇಲಾಖೆಯ ಅಧೀಕ್ಷಕರಾಗಿದ್ದು ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಂಗಳೂರು- ಇಲ್ಲಿ ಸಹಾಯಕ ಸಾಂಖ್ಯಿಕ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದು ಸರ್ಕಾರದ ಆದೇಶದಂತೆ ವಿಧಾನಸಭಾ ಸಚಿವಾಲಯದಿಂದ ನಿಯೋಜನೆಗೊಂಡಿದ್ದು ಮುಂದಿನ ದಿನಗಳಲ್ಲಿ ಶ್ರಮಿಕ ಶಾಸಕರ ಕಚೇರಿಯಲ್ಲಿ ಸಾರ್ವಜನಿಕ ಸೇವೆಗೆ ಲಭ್ಯರಿರುತ್ತಾರೆ.