30.8 C
ಪುತ್ತೂರು, ಬೆಳ್ತಂಗಡಿ
April 13, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕಪ್ರಮುಖ ಸುದ್ದಿಬೆಳ್ತಂಗಡಿವರದಿ

ಮನೋಜವಂ ಮಾರುತ ತುಲ್ಯವೇಗಂ; ಅಳದಂಗಡಿಯಲ್ಲಿ ಹನುಮ ನಾಮ ಸ್ಮರಣೆ ಹನುಮೋತ್ಸವ-2025, : ಹನುಮ ಯಾಗಕ್ಕೆ ಚಾಲನೆ

ಅಳದಂಗಡಿ: ಸಂಸ್ಕಾರ ಭಾರತೀ ಬೆಳ್ತಂಗಡಿ-ಹನುಮೋತ್ಸವ ಸಮಿತಿ ಅಳದಂಗಡಿ ಆಶ್ರಯದಲ್ಲಿ ಹನುಮ ಜಯಂತಿ ಪ್ರಯುಕ್ತ ಇಂದು (ಎ.12) ಅರಮನೆ ನಗರಿ ಅಳದಂಗಡಿ ಶ್ರೀ ಸತ್ಯ ದೇವತಾ ಮೈದಾನದಲ್ಲಿ “ಹನುಮೋತ್ಸವ 2025” ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಹನುಮ ನಾಮ ಸ್ಮರಣೆ: ಬ್ರಹ್ಮಶ್ರೀ ಮಡಂತ್ಯಾರು ವೇದಮೂರ್ತಿ ಗೋಪಾಲಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ಹನುಮ ಮಹಾಯಾಗ ನೇರವೇರಲಿದೆ. ಸಂಜೆ ಸಾಮೂಹಿಕ ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹವಾಚನ, ಸಪ್ತ ಶುದ್ಧಿಗಳು, ವ್ರತಾಧಾರಿಗಳಿಂದ ಸಂಕಲ್ಪ ಪ್ರಾರ್ಥನೆ, ಸಾಮೂಹಿಕ ಮಹಾಸಂಕಲ್ಪ, ಅಗ್ನಿಜನನ, ಸಹಸ್ರ ಕದಳೀ ಹನುಮ ಯಾಗ, ಸಾಮೂಹಿಕ ಹನುಮಾನ್ ಚಾಲೀಸ ಪಠಣ, ಪ್ರಧಾನ ಹೋಮ, ಕಲಶ ಪೂಜೆ, ಮಂಡಲ ಪೂಜೆ, ಹನುಮ ಮಹಾಯಾಗ, ಪೂರ್ಣಾಹುತಿ, ಎಳ್ಳುಗಂಟು ಸಮರ್ಪಣೆ ಪೂಜೆ, ಮಹಾ ಪೂಜೆ, ಹನುಮ ಶ್ರೀರಕ್ಷೆ ಧಾರಣೆ ಮತ್ತು ಪ್ರಸಾದ ವಿತರಣೆ ನಡೆಯುತ್ತಿದೆ.

ಕೇಸರಿ ಪಾತಕೆ ಗಳಿಂದ ಅರಮನೆ ನಗರಿ ಅಳದಂಗಡಿ ಕಂಗೋಳಿಸುತ್ತಿದೆ. ವಿದ್ಯುತ್ ದೀಪಾಲಂಕಾರ ಜನಾಕರ್ಷಣೆ
ಗೆ ಅಣಿಯಾಗುತ್ತಿದೆ. ಲಂಕಾದಹನ ಕಾರ್ಯಕ್ರಮ ಜನರಲ್ಲಿ ಕುತೂಹಲ ಮೂಡಿಸಿದ್ದು, ಹನಮೋತ್ಸವಕ್ಕೆ ಭಕ್ತಾದಿಗಳು ಆಗಮಿಸುತ್ತಿದ್ದಾರೆ ‌.

ಈ ಸಂದರ್ಭದಲ್ಲಿ ಹನುಮೋತ್ಸವ ಸಮಿತಿ ಅಧ್ಯಕ್ಷ ಸಂಪತ್ ಬಿ. ಸುವರ್ಣ, ಸಮಿತಿ ಪ್ರಮುಖರಾದ ಪ್ರಭಾಕರ ಶೆಟ್ಟಿ ಉಪಡ್ಕ, ನಿತ್ಯಾನಂದ ನಾವರ, ಪ್ರಸಾದ್ ಬೆಳ್ತಂಗಡಿ, ವಿಜಯ ಗೌಡ ವೇಣೂರು, ಶಶಿಧರ ಎ. ಅಳದಂಗಡಿ, ಉಮೇಶ್ ಸುವರ್ಣ ಅಳದಂಗಡಿ, ವಿಶ್ವನಾಥ ಶಿರ್ಲಾಲು, ಮಾಧವ ಶಿರ್ಲಾಲು, ಸಂಜೀವ ದೇವಾಡಿಗ, ಲಯನ್ಸ್ ಕ್ಲಬ್ ಅಧ್ಯಕ್ಷ ದೇವದಾಸ್ ಶೆಟ್ಟಿ, ಸತೀಶ್ ಶಿರ್ಲಾಲು, ಹರೀಶ್ ಕ್ಲಲಾಜೆ, ಪ್ರಶಾಂತ್ ಶಾಂತಿನಗರ, ರವಿ ಪೂಜಾರಿ, ಪ್ರಮೋದ್ ಆರ್ ನಾಯ್ಕ್, ಮೋಹನ್ ದಾಸ್, ಜಯ ಸಾಲ್ಯಾನ್, ಸಂತೋಷ್ ಹೆಗ್ಡೆ ತೆಂಕ ಕರಂದೂರು ಮೊದಲಾದವರು ಹಾಗೂ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

Related posts

ನಾವರ: ಶ್ರೀ ಮಹಾಲಿಂಗೇಶ್ವರ ದೇವರಿಗೆ ಅಷ್ಟಬಂಧ ಬ್ರಹ್ಮಕಲಶೋತ್ಸವ: ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾ‌ರ್ ಭೇಟಿ

Suddi Udaya

ಅಕ್ರಮ ಸಕ್ರಮದಲ್ಲಿ ಜಾಗ ಮಂಜೂರು ಮಾಡಿ ಕೊಡುವುದಾಗಿ ನಂಬಿಸಿ, ರೂ. 4.95 ಲಕ್ಷ ವಂಚನೆ ಆರೋಪ : ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ಮಚ್ಚಿನ: ಕುಕ್ಕಿಲದಲ್ಲಿ ಗುಡ್ಡ ಕುಸಿದು ಮನೆ ಹಾಗೂ ಹಟ್ಟಿಗೆ ಸಂಪೂರ್ಣ ಹಾನಿ

Suddi Udaya

ವಾಣಿ ಶಿಕ್ಷಣ ಸಂಸ್ಥೆ: ಸ್ಕೌಟ್ ಮತ್ತು ಗೈಡ್ಸ್- ಬೇಸಿಗೆ ಶಿಬಿರ

Suddi Udaya

ಗೇರುಕಟ್ಟೆ ಸರಕಾರಿ ಪದವಿ ಪೂರ್ವ ಕಾಲೇಜಿಗೆ ಶೇ. 94.11 ಫಲಿತಾಂಶ

Suddi Udaya

ಮಡಂತ್ಯಾರು: ಜೆಸಿಐ ಭಾರತದ ವಲಯ 15ರ ವಲಯ ಕಾರ್ಯಕ್ರಮ ವಿಭಾಗದ ನಿರ್ದೇಶಕರಾಗಿ ಜೇಸಿ ಭರತ್ ಶೆಟ್ಟಿ ಆಯ್ಕೆ

Suddi Udaya
error: Content is protected !!