23.8 C
ಪುತ್ತೂರು, ಬೆಳ್ತಂಗಡಿ
June 8, 2025
ಗ್ರಾಮಾಂತರ ಸುದ್ದಿಚಿತ್ರ ವರದಿ

ಕಾಶ್ಮೀರ ಉಗ್ರಗಾಮಿ ದಾಳಿ: ಶಾಂತಿ ಮತ್ತು ಮಾನವೀಯತೆಗೆ ಎದುರಾದ ಹೊಡೆತ: ಶಾಸಕ ಹರೀಶ್ ಪೂಂಜ

ಬೆಳ್ತಂಗಡಿ: ಇತ್ತೀಚೆಗೆ ಕಾಶ್ಮೀರದಲ್ಲಿ ನಡೆದ ಉಗ್ರಗಾಮಿ ದಾಳಿ ಆಘಾತಕಾರಿ. ಈ ಭಯೋತ್ಪಾದಕ ಕೃತ್ಯವನ್ನು ತೀವ್ರವಾಗಿ ಖಂಡಿಸುವುದಾಗಿ ಶಾಸಕ ಹರೀಶ್ ಪೂಂಜ ತಿಳಿಸಿದ್ದಾರೆ,


ಈ ಕೂಡಲೇ ಕೇಂದ್ರ ಸರ್ಕಾರ ನಾವು “ಬಯಸುವ ನ್ಯಾಯ”ವನ್ನು ಒದಗಿಸುವ ಕಾರ್ಯಕ್ಕೆ ಪ್ರಧಾನಿ ನರೇಂದ್ರ ಮೋದಿಜಿ ಹಾಗೂ ಗೃಹಸಚಿವರಾದ ಅಮಿತ್ ಷಾ ಕೈಗೊಳ್ಳುತ್ತಾರೆ.
ನೆನಪಿಡಿ, ಎಲ್ಲಿಯವರೆಗೆ ಮತವೊಂದು ಇತರ ಮತದವರನ್ನು ಕೊಲ್ಲುವುದೇ ತಮ್ಮ ಮತದ ಉಳಿವಿಗೆ ದಾರಿ ಎಂದು ತನ್ನ ಸಮುದಾಯದವರಿಗೆ ಬೋಧಿಸುತ್ತಿರುತ್ತದೋ, ಅಲ್ಲಿಯವರೆಗೆ ಈ ಎಲ್ಲರಿಗೂ ಆಪತ್ತು ತಪ್ಪಿದ್ದಲ್ಲ.


ಇಸ್ಲಾಂಗೂ ಭಯೋತ್ಪಾದಕರಿಗೂ ಸಂಬAಧ ಇಲ್ಲ ಎಂದು ಒಪ್ಪಿಕೊಳ್ಳೋಣ, ಹುಡುಕಿ ಹುಡುಕಿ ಹಿಂದುಗಳನ್ನ ಕೊಂದು ಆ ರಾಕ್ಷಸರು ಮೊಳಗಿಸಿದ ಉದ್ಘೋಷ ಏನು ಸಂದೇಶ ಸಾರುತ್ತದೆ ಎಂದು ಯೋಚಿಸಬೇಕಾಗಿದೆ.
ಕೇಡು ವಿಜೃಂಭಿಸುವಾಗ ಪ್ರತಿಘಾತ ಮಾಡದ ಸಾತ್ವಿಕತೆ/ಮೌನ ನಿಷ್ಪçಯೋಜಕವಾಗುತ್ತದೆ. ಕೇವಲ ಹತ್ತು ಜನ ಕೆಟ್ಟವರಿಗಾಗಿ ಒಂದು ಸಮುದಾಯಕ್ಕೆ ಭಯೋತ್ಪಾದನೆಯ ಕಳಂಕ ಹಾಕಬಾರದು ಎನ್ನುತ್ತಾರೆ. ಹತ್ತು ಕೆಟ್ಟವರನ್ನ ಬಿಡಿ ಉಳಿದ ೯೦ ಒಳ್ಳೆಯ ಮುಸಲ್ಮಾನರಲ್ಲಿ ಒಬ್ಬರು ಧ್ವನಿಯೆತ್ತಿ ಖಂಡಿಸಿದ್ದನ್ನು ಕೇಳಲೇ ಇಲ್ಲ, ಇದು ದುರಂತ. ಘಟನೆಯನ್ನು ಖಂಡಿಸಿ ಬೀದಿಗೆ ಇಳಿದಿದ್ದನ್ನು ಕಾಣಲಿಲ್ಲ. ಸಾತ್ವಿಕ ಮುಸಲ್ಮಾನ್ ಬಂಧುಗಳೇ, ಇದು ನಿಮಗೂ ಎಚ್ಚರಿಕೆಯ ಕರೆಗಂಟೆ. ನಿಮ್ಮ ಮೌನ ನಿಮ್ಮನ್ನೇ ಕಾಡಲಿದೆ. ನಿಮ್ಮ ಮತದೊಳಗಿನ ಕೊಳಕನ್ನು ನೀವಿನ್ನು ಸಹಾನುಭೂತಿಯಿಂದ ನೋಡುತ್ತಾ ಕುಳಿತರೆ ಮುಂದಾಗುವ ಎಲ್ಲಾ ಅನಾಹುತಗಳಲ್ಲಿ ನೀವೂ ಪಾಲುದಾರರಾಗುತ್ತೀರಿ. ನಿಮ್ಮ ಮೌನವೇ ಉಗ್ರಗಾಮಿಗಳಿಗೆ ಶ್ರೀರಕ್ಷೆ ಆಗದಂತೆ ನೋಡಿಕೊಳ್ಳಿ ಎಂದು ಶಾಸಕ ಹರೀಶ್ ಪೂಂಜರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Related posts

ಬದ್ರಿಯಾ ಜುಮಾ ಮಸೀದಿ ಪೆರಾಲ್ದರಕಟ್ಟೆಯಲ್ಲಿ ವನಮಹೋತ್ಸವ

Suddi Udaya

ಅಕ್ರಮವಾಗಿ ಕಡಿದು ಸಂಗ್ರಹಿಸಿದ್ದ ಮರಮಟ್ಟು ವಶಕ್ಕೆ

Suddi Udaya

ಚಾರ್ಮಾಡಿ ಜಲಾಲಿಯಾ ನಗರ ಮಸ್ಜಿದ್‌‌ನ ಆಡಳಿತ ಮಂಡಳಿಯನ್ನು ವಜಾಗೊಳಿಸಿದ ವಕ್ಫ್ ಮಂಡಳಿ: ಸರಕಾರದಿಂದ ಆಡಳಿತಾಧಿಕಾರಿ ನೇಮಕ

Suddi Udaya

ಬೆಳಾಲು ಮೈತ್ರಿ ಯುವಕ ಮಂಡಲ ನೂತನ ಪದಾಧಿಕಾರಿಗಳ ಆಯ್ಕೆ: ಅಧ್ಯಕ್ಷರಾಗಿ ನಿತಿನ್ ಮೋನಿಸ್, ಕಾರ್ಯದರ್ಶಿಯಾಗಿ ವಿಘ್ನೇಶ್

Suddi Udaya

ಅರಫಾ ಜಾಮಿಅಃ ಮಸ್ಜಿದ್ ಅತ್ತಾಜೆಯಲ್ಲಿ ಸಂಭ್ರಮದ ಬಕ್ರೀದ್ ಆಚರಣೆ

Suddi Udaya

ಫ್ರೆಂಡ್ಸ್ ಬದ್ಯಾರ್ ತಂಡದ ಸದಸ್ಯರಿಂದ ಶ್ರಮದಾನ

Suddi Udaya
error: Content is protected !!