
ಬೆಳ್ತಂಗಡಿ : ವಕೀಲರ ಸಂಘ ಬೆಳ್ತಂಗಡಿ ವತಿಯಿಂದ ಪಹಾಲ್ ಗಾಮ್ ಧಾಳಿ ಯ ಬಗ್ಗೆ ಖಂಡನಾ ಸಭೆ ಹಾಗೂ ಶ್ರದ್ಧಾಂಜಲಿ ಸಭೆ ನಡೆಯಿತು.

ಪಹಾಲ್ ಗಾಮ್ ನಲ್ಲಿ ಭಯೋತ್ಪಾದಕರು ಪ್ರವಾಸಿಗರು ಹಾಗೂ ಅಮಾಯಕರ ಮೇಲೆ ನಡೆಸಿದ ದಾಳಿ ಬಗ್ಗೆ ವಕೀಲರ ಸಂಘವು ಸಭೆಯನ್ನು ನಡಿಸಿ ಅತ್ಯುಗ್ರವಾಗಿ ಖಂಡಿಸಿದೆ. ಸಭೆಯಲ್ಲಿ ಹಿರಿಯ ವಕೀಲರಾದ ಸುಬ್ರಮಣ್ಯ ಕುಮಾರ್ ಅಗರ್ತ ಮಾತನಾಡುತ್ತ ಈ ತರಹದ ಕೃತ್ಯಗಳು ನಡೆದಾಗ ನಾವೆಲ್ಲರು ಜಾತಿ, ಧರ್ಮ, ಪಕ್ಷ ಹಾಗೂ ಮನಸ್ತಾಪಗಳನ್ನು ಮರೆತು ಒಗ್ಗಟ್ಟಾಗಿ ಖಂಡಿಸಿ ನಾವು ಸರಕಾರದ ಜೊತೆ ದೇಶದ ಜೊತೆ ನಿಲ್ಲಬೇಕು ಎಂದು ತಮ್ಮ ಮಾತಲ್ಲಿ ತಿಳಿಸಿದರು. ಹಿರಿಯ ವಕೀಲರಾದ ಶಿವಕುಮಾರ್ ಎಸ್ ಎಂ ಮಾತನಾಡುತ್ತ ಇದು ನಮ್ಮ ದೇಶದ ಮೇಲೆ ಆಗಿರುವ ದಾಳಿಯಾಗಿದೆ. ಪ್ರವಾಸೋದ್ಯಮ ಉತ್ತುಂಗಲ್ಲಿರುವಾಗ ಅದನ್ನು ಸಹಿಸದೆ ಈ ಕೃತ್ಯ ಎಸಗಲಾಗಿದೆ. ನಾವು ಎಲ್ಲರೂ ಒಂದಾಗಿ ಇದನ್ನು ಖಂಡಿಸ ಬೇಕಾಗಿದೆ ಎಂದರು.ಅಧ್ಯಕ್ಷರಾದ ವಸಂತ ಮರಕಡ ಈ ಕೃತ್ಯವನ್ನು ಖಂಡಿಸುತ್ತಾ ಈ ದಾಳಿಯು ನಮ್ಮ ದೇಶದ ಮೇಲೆ ಹೇಡಿಗಳು ಮಾಡಿರುವ ದಾಳಿಯಾಗಿದೆ, ಇದರ ಬಗ್ಗೆ ವಾಟ್ಸಪ್ಪ್, ಫೇಸ್ಬುಕ್ ಗಳಲ್ಲಿ ದಾಳಿಕೊರರರು ಮಾಡಿರುವ ಕೃತ್ಯವನ್ನು ಸಮರ್ಥಿಸುವವರನ್ನು ಸಮಾಜ ಬಹಿಷ್ಕರಿಸಬೇಕು, ಖಂಡಿಸ್ಬೇಕು ಅವರೆಲ್ಲರೂ ದೇಶದ್ರೋಹಿಗಳು ಎಂದು ಹೇಳಿದರು.

ವೇದಿಕೆಯಲ್ಲಿ ವಕೀಲರ ಸಂಘದ ಉಪಾಧ್ಯಕ್ಷರಾದ ಅಶೋಕ್ ಕರಿಯನೆಲ ಉಪಸ್ಥಿತರಿದ್ದರು. ಪ್ರಾಸ್ತಾವಿಕವಾಗಿ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿಯಾದ ನವೀನ್ ಬಿ.ಕೆ ಮಾತನಾಡಿದರು.
ಸಭೆಯಲ್ಲಿ ಸಂಘದ ಪದಾಧಿಕಾರಿಗಳು, ಹಿರಿಯ ಕಿರಿಯ ವಕೀಲರಗಳು, ಸರಕಾರಿ ವಕೀಲರುಗಳು ಹಾಜರಿದ್ದರು.