September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬೆಳ್ತಂಗಡಿ ಟೀಚರ್ಸ್ ಕೋ ಆಪರೇಟಿವ್ ಬ್ಯಾಂಕಿನ ವ್ಯವಹಾರಕ್ಕೆ ಸಹಕಾರ ನೀಡಿದವರಿಗೆ ಗೌರವಾರ್ಪಣೆ

ಬೆಳ್ತಂಗಡಿ ಟೀಚರ್ಸ್ ಕೋ ಆಪರೇಟಿವ್ ಬ್ಯಾಂಕಿನ ವ್ಯವಹಾರಕ್ಕಾಗಿ ಸಂಪೂರ್ಣ ರೀತಿಯಲ್ಲಿ ಸಹಕಾರವನ್ನು ನೀಡುತ್ತಿರುವ ಬೆಳ್ತಂಗಡಿಯ ಪ್ರೇರಣಾ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷೆ ಲ್ಯಾನ್ಸಿ ಎ ಪಿರೇರಾ ಹಾಗೂ ಸಂಸ್ಥೆಯ ಮುಖ್ಯ ಪ್ರಬಂಧಕರಾದ ಶ್ರೀಮತಿ ಐರಿನ್ ಡಿಸೋಜ ಹಾಗೂ ಸಿಬ್ಬಂದಿಗಳನ್ನು ಟೀಚರ್ಸ್ ಕೋ ಆಪರೇಟಿವ್ ಬ್ಯಾಂಕ್ ಉಡುಪಿ ಕೇಂದ್ರ ಕಚೇರಿಯ ಪರವಾಗಿ ಬೆಳ್ತಂಗಡಿ ಶಾಖಾ ಕಛೇರಿ ವತಿಯಿಂದ ಬ್ಯಾಂಕಿನ ನಿರ್ದೇಶಕರಾದ ಧರಣೇಂದ್ರ ಕೆ ರವರು ಗೌರವಿಸಿದರು.

ಗೌರವವನ್ನು ಸ್ವೀಕರಿಸಿದ ಲ್ಯಾನ್ಸಿ ಪಿರೇರರವರು ಟೀಚರ್ಸ್ ಕೋ ಆಪರೇಟಿವ್ ಬ್ಯಾಂಕಿನ ಸಿಬ್ಬಂದಿಗಳ ಕಾರ್ಯ ಮೆಚ್ಚುವ ರೀತಿಯಲ್ಲಿ ಇರುವ ಕಾರಣ ನಮ್ಮ ಸಂಸ್ಥೆಯು ಕೂಡ ತಮ್ಮ ಬ್ಯಾಂಕಿನೊಂದಿಗೆ ಸದಾ ಸಹಕಾರಕ್ಕೆ ಬದ್ಧವಾಗಿದೆ. ತಮ್ಮ ಈ ಸೇವೆಯು ಮುಂದೆಯು ಕೂಡ ಇದೇ ರೀತಿ ಮುಂದುವರೆಯಲಿ, ಅದೇ ರೀತಿಯಲ್ಲಿ ನೂತನವಾಗಿ ನಿರ್ದೇಶಕರಾಗಿ ಆಯ್ಕೆಯಾದ ನಮ್ಮ ಸಹೋದರ ಧರಣೇಂದ್ರ ರವರು ಕೂಡ ಉತ್ತಮ ಸೇವೆಯನ್ನು ಮಾಡುವಂತಾಗಲಿ ಎಂದು ಮನದಾಳದ ಮಾತುಗಳನ್ನು ಹಂಚಿಕೊಂಡರು.


ಈ ಸಂದರ್ಭದಲ್ಲಿ ಬ್ಯಾಂಕಿನ ಬೆಳ್ತಂಗಡಿ ಶಾಖೆಯಯ ಶಾಖಾ ಪ್ರಬಂಧಕರಾದ ಚೇತನ್ ಕುಮಾರ್ ಹಾಗೂ ಸಿಬ್ಬಂದಿಗಳಾದ ಗಣೇಶ್ ಮತ್ತು ಅನಿಲ್ ಕುಮಾರ್ ಕೆ ಜಿ ಉಪಸ್ಥಿತರಿದ್ದರು.

Related posts

ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಬಿಷಪ್ ಲಾರೆನ್ಸ್ ಮುಕ್ಕುಯಿ ರವರಿಂದ ಮತ ಚಲಾವಣೆ

Suddi Udaya

ರಾಜ್ಯ ಮಟ್ಟದ ಮುಕ್ತ ಕರಾಟೆ ಪಂದ್ಯಾಟ: ಗೇರುಕಟ್ಟೆಯ ಅದೀಲ್ ರವರಿಗೆ ಕುಮಿತೆಯಲ್ಲಿ ಚಿನ್ನದ ಪದಕ

Suddi Udaya

ಪೆರಿಂಜೆಯಲ್ಲಿ ಎನ್ನೆಸ್ಸೆಸ್ ವತಿಯಿಂದ ಅಮೃತ ಕಲಶ ಯಾತ್ರೆಯೊಂದಿಗೆ ಸ್ವಚ್ಛತಾ ಅಭಿಯಾನ

Suddi Udaya

ಡಾ. ವಿಕ್ರಮ್ ತಿಮರಡ್ಕ ರವರಿಗೆ ಜಪಾನ್‌ನ ಕ್ಯೋಟೋ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ. ಪದವಿ

Suddi Udaya

ಬಳಂಜದಲ್ಲಿ ಜೆಸಿಐ ಬೆಳ್ತಂಗಡಿ ಮಂಜುಶ್ರೀಯಿಂದ ವ್ಯಕ್ತಿತ್ವ ವಿಕಸನ ತರಬೇತಿ ಕಾರ್ಯಕ್ರಮ

Suddi Udaya

ಕಳಿಯ: ಬೈಕ್ ನಲ್ಲಿ ಹೋಗುತ್ತಿದ್ದ‌ ಸಹ ಸಾವರೆ ಮಹಿಳೆಯೋವ೯ರ ಕಾಲು ಸೈಲೇಸರ್‌ ಮತ್ತು ಚೇಸ್‌ ನಡುವೆ ಸಿಲುಕಿ ಗಾಯ

Suddi Udaya
error: Content is protected !!