22.9 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಇನ್ವರ್ಟರ್ ನೀಡುವಂತೆ ಮನೆಗೆ ಕೇಳಲು ಹೋಗಿದ್ದವರಿಗೆ ಕತ್ತಿಯಿಂದ ಹಲ್ಲೆ

ಕಾಶಿಪಟ್ಣ: ಇನ್ವರ್ಟರ್ ನೀಡುವಂತೆ ಮನೆ ಬಳಿಗೆ ಹೋಗಿದ್ದವರಿಗೆ ಕತ್ತಿಯಿಂದ ಕಡಿದು, ಟಾರ್ಚ್ ಲೈಟ್‌ನಿಂದ ಹಲ್ಲೆ ನಡೆಸಿ, ಜೀವಬೆದರಿಕೆ ಒಡ್ಡಿದ ಘಟನೆ ಎ.24 ರಂದು ರಾತ್ರಿ ಕಾಶಿಪಟ್ಣ ಗ್ರಾಮದ ಮಿತ್ತೊಟ್ಟು ಎಂಬಲ್ಲಿ ಸಂಭವಿಸಿದೆ.

ಮರೋಡಿ ಗ್ರಾಮದ ಪೆಂಚಾರ್ ಪಿಜತಕಟ್ಟೆ ನಿವಾಸಿ ಸುಜಿತ್ ಎಂಬವರೊಂದಿಗೆ ಕಾಶಿಪಟ್ಣ ಗ್ರಾಮದ ಮಿತ್ತೊಟ್ಟು ಅಭಿಷೇಕ್ ಕೆಲಸ ಮಾಡಿಕೊಂಡಿದ್ದು, ಅಭಿಷೇಕ್‌ನ ಮನೆಯಲ್ಲಿ ಇಟ್ಟಿದ್ದ ಇನವರ್ಟರ್‌ನ್ನು ವಾಪಾಸು ಅಂಗಡಿಗೆ ತಂದುಕೊಡುವಂತೆ ಸುಜಿತ್ ಕೇಳಿದಾಗ ಬೇಕಾದಲ್ಲಿ ಮನೆಗೆ ಬಂದು ತೆಗೆದುಕೊಂಡು ಹೋಗುವಂತೆ ಅಭಿಷೇಕ್ ತಿಳಿಸಿದ್ದನೆನ್ನಲಾಗಿದೆ.


ಅದರಂತೆ ಎ.24 ರಂದು ರಾತ್ರಿ 10 ಗಂಟೆಗೆ ಸುಜಿತ್ ತನ್ನ ಸ್ನೇಹಿತರಾದ ಆಕಾಶ್, ಜಗದೀಶ @ ಜಗ್ಗು, ಸಂಜಯ್ ಮತ್ತು ಸವಿನ್ ಎಂಬವರೊಂದಿಗೆ ಕಾಶಿಪಟ್ಣ ಮಿತ್ತೊಟ್ಟು ಅಭಿಷೇಕ್‌ನ ಮನೆಯ ಬಳಿಗೆ ಬಂದು ಇನ್ ವರ್ಟರ್ ಕೇಳಿದಾಗ, ಅಭಿಷೇಕ್ ಇನವರ್ಟರ್ ಕೊಡುವುದಿಲ್ಲ, ನೀನು ಏನು ಮಾಡುತ್ತೀಯಾ ಎಂದು ಅವ್ಯಾಚ್ಯ ಶಬ್ದಗಳಿಂದ ಬೈದಾಗ, ಅವರೊಳಗೆ ಮಾತಿನ ಚಕಮಕಿ ನಡೆದು ಅಲ್ಲಿಗೆ ಬಂದ ಅಭಿಷೇಕ್‌ನ ತಂದೆ ಧರ್ಣಪ್ಪ ಪೂಜಾರಿ ಎಂಬವರು ಜಗ್ಗು @ ಜಗದೀಶನಿಗೆ ಟಾರ್ಚ್ ಲೈಟ್ ಹಲ್ಲೆ ನಡೆಸಿ, ಅಭಿಷೇಕನನ್ನು ಮನೆಗೆ ಕರೆದುಕೊಂಡು ಹೋಗಿದ್ದು, ಆ ಸಮಯ ಮನೆಯ ಗೇಟಿನ ಬಳಿ ಸುಜಿತ್, ಅಭಿಷೇಕ್ ನಲ್ಲಿ ಇನ್ ವರ್ಟರ್ ಕೊಡು ಎಂದಾಗ ಅಭಿಷೇಕನು ಕತ್ತಿಯಿಂದ ಸುಜಿತ್ ಹಾಗೂ ಆಕಾಶ್‌ಗೆ ಕಡಿದು, ಧರ್ಣಪ್ಪ ಪೂಜಾರಿ ಟಾರ್ಚ್ ಲೈಟ್‌ನಿಂದ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವುದಾಗಿ ವೇಣೂರು ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ. ಈ ಬಗ್ಗೆ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಇಂದಿನಿಂದ (ಫೆ.27 ) ವಿದ್ಯಾಮಾತಾ ಅಕಾಡೆಮಿಯಲ್ಲಿ ಡಿ.ಸಿ.ಸಿ. ಬ್ಯಾಂಕ್ ಪರೀಕ್ಷಾ ತರಬೇತಿ ಪ್ರಾರಂಭ

Suddi Udaya

ಕೊಯ್ಯೂರು ಸ. ಹಿ. ಪ್ರಾ. ಶಾಲೆಯಲ್ಲಿ ಹಳೆ ವಿದ್ಯಾರ್ಥಿ ಸಂಘ ರಚನೆ: ಅಧ್ಯಕ್ಷರಾಗಿ ಕೇಶವ ಗೌಡ , ಪ್ರಧಾನ ಕಾರ್ಯದರ್ಶಿಯಾಗಿ ಚಂದ್ರಶೇಖರ ಸಾಲ್ಯಾನ್

Suddi Udaya

ಬಾರ್ಯ ಪ್ಯಾಕ್ಸ್ ಚುನಾವಣೆ: 12 ಸ್ಥಾನಗಳಿಗೆ ಅಂತಿಮ ಕಣದಲ್ಲಿ24 ಮಂದಿ ಅಭ್ಯರ್ಥಿಗಳು: ಬಿಜೆಪಿ ಬೆಂಬಲಿತ ಸಹಕಾರ ಭಾರತೀಯ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳ ನಡುವೆ ಪೈಪೋಟಿ

Suddi Udaya

ಕುಂಟಿನಿ ಬೂತ್ ಸಮಿತಿ ಎಸ್.ಡಿ.ಪಿ.ಐ ವತಿಯಿಂದ ಪಕ್ಷದ ಸಂಸ್ಥಾಪನ ದಿನಾಚರಣೆ

Suddi Udaya

ಬೆಂಗಳೂರು ಬಿಲ್ಲವ ಅಸೋಸಿಯೇಷನ್ ನಿಂದ ಪೀತಾಂಬರ ಹೆರಾಜೆ ಅವರಿಗೆ ಅಭಿನಂದನೆ

Suddi Udaya

ಹರೀಶ್ ಪೂಂಜ ಬೃಹತ್ ಬಹುಮತದಿಂದ ಗೆಲುವು: ಬಳಂಜ, ನಾಲ್ಕೂರು, ತೆಂಕಕಾರಂದೂರಿನಲ್ಲಿ ವಿಜಯೋತ್ಸವ

Suddi Udaya
error: Content is protected !!