26.1 C
ಪುತ್ತೂರು, ಬೆಳ್ತಂಗಡಿ
April 30, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಶಿಶಿಲ ಶಿವಕೀರ್ತಿ ನಿಲಯದಲ್ಲಿ ಹನುಮಾನ್ ಜಯಂತಿ ಆಚರಣೆ



ಶಿಶಿಲ : ಹನುಮಂತ ಸ್ವಾಮಿ ಭಕ್ತಿಗೆ ಆದರ್ಶ. ಆತ ಅತೀ ಧೈರ್ಯವಂತ. ಯಾವುದೇ ಕಾರ್ಯ ಸಾಧಿಸಬೇಕಾದಲ್ಲಿ ಅದನ್ನು ಸಾಧಿಸುವಂತ ಪರಾಕ್ರಮಿ. ಶ್ರೀರಾಮನ ಸೇವಕ. ದುಷ್ಟ ಶಕ್ತಿಗಳನ್ನು ನಿಗ್ರಹಿಸಿದ ವೀರ ಪುರುಷ. ಆತನ ಆರಾಧನೆ ಪರಿಣಾಮ ನಮಗೂ ರಾಷ್ಟ್ರಕ್ಕೂ ಶಕ್ತಿ ತುಂಬಲಿ ಎಂದು ಶ್ರೀ ಅರಿಕೆಗುಡ್ದೆ ವನದುರ್ಗಾ ದೇವಾಲಯ ಅಧ್ಯಕ್ಷ ಪ್ರಕಾಶ‌ ಪಿಲಿಕಬೆ ತಿಳಿಸಿದ್ದರು.

ಅವರು ಶಿಶಿಲ ಶಿವಕೀರ್ತಿ ನಿಲಯದಲ್ಲಿ ನಡೆದ ಶ್ರೀ ಆಂಜನೇಯ ಜಯಂತಿ ಕಾರ್ಯಕಾರ್ಯಕ್ರಮ ಉದ್ಘಾಟನೆ ಮಾಡಿ ಶುಭ ಹಾರೈಸಿದರು.


ಮುಖ್ಯ ಅತಿಥಿಯಾಗಿ ಜೀವ ವಿಮಾ ಬೆಳ್ತಂಗಡಿ ಅಧಿಕಾರಿ ಉದಯಶಂಕರ ಅರಸಿನಮಕ್ಕಿ ಮಾತನಾಡಿ ಹನುಮನ ಶಕ್ತಿ ಎಲ್ಲಾ ಭಾರತೀಯ ಪ್ರಜೆಗೂ ಬರಲಿ. ಅವರ ಆದರ್ಶ ಮೈಗೂಡಿಸಿಕೊಂಡು ಬರುವಾ ಎಂದು ಶುಭಾಶಯ ತಿಳಿಸಿದರು.
ಈ ಸಂದರ್ಭದಲ್ಲಿ ಕಾಸರಗೋಡು ಹಿರಿಯ ಭಜನಾ ಪಟು ಹರಿದಾಸ ಜಯಾನಂದ ಕಾಸರಗೋಡು ‌ಮತ್ತು ಭಜನಾ ಸಾಧಕ ಬಾಲಕೃಷ್ಣ ಪಂಜ ಅವರನ್ನು ಮನೆಯ ಪರವಾಗಿ ಜಯರಾಮ ನೆಲ್ಲಿತ್ತಾಯ ಮತ್ತು ಶ್ರೀ ಮತಿ ರೇಖಾ ಜಯರಾಮ ನೆಲ್ಲಿತ್ತಾಯ ಅಭಿನಂದನೆ ‌ಮಾಡಿದರು.


ರಾಘವೇಂದ್ರ ಕಿಗ್ಗ ಉಪಸ್ಥಿತರಿದ್ದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ತಾಲೂಕಿನ ವಿವಿಧ ಭಜನಾ ಮಂಡಳಿಯ ಭಜಕರು ಭಾಗವಹಿಸಿ ಆಕರ್ಷಕ ಕುಣಿತ ಭಜನೆ ನೆರವೇರಿಸಿದರು.
ಬಿಳಿನೆಲೆ ಭಜನಾ‌ ಮಂಡಳಿಯ ಸುಂದರ ಮತ್ತು ತಂಡದವರಿಂದ ಮತ್ತು ಹರಿದಾಸ ಕಾಸರಗೋಡು ಜಯಾನಂದ ಅವರ ತಂಡ ಭಜನಾ ಕಾರ್ಯಕ್ರಮ ನಡೆಸಿದ್ದರು.


ಕಾರ್ಯಕ್ರಮದಲ್ಲಿ ಬೆಳ್ತಂಗಡಿ , ಪುತ್ತೂರು, ಕಾಸರಗೋಡು ವಿವಿಧ ಭಜನಾ ತಂಡದವರು ಭಾಗವಹಿಸಿದ್ದರು.
ಭಾಗವಹಿಸಿದ ಎಲ್ಲರಿಗೂ ಶಿವಕೀರ್ತಿ ನಿಲಯದ ಜಯರಾಮ ನೆಲ್ಲಿತ್ತಾಯ ದಂಪತಿಗಳು ಮನೆಯವರೂ ಎಲ್ಲರೂ ಅಭಿನಂದನೆ ತಿಳಿಸಿದ್ದರು.

Related posts

ವೃತ್ತಿ ಕೀಳರಿಮೆ ಬೇಡ, ಗೌರವವನ್ನು ಬೆಳೆಸಿಕೊಳ್ಳಿ : ಡಿ ಹರ್ಷೇಂದ್ರ ಕುಮಾರ್

Suddi Udaya

ಆನ್ ಲೈನ್ ಜಾಬ್ ಆಫರ್ ನೀಡಿ ಮಹಿಳೆಗೆ ರೂ. 4.25 ಲಕ್ಷ ವಂಚನೆ: ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ಮಹಾಮಂಡಲೇಶ್ವರರಾಗಿ ಪಟ್ಟಾಭಿಶಿಕ್ತರಾದ ಕನ್ಯಾಡಿ ಶ್ರೀರಾಮ ಕ್ಷೇತ್ರದ ಮಠಾಧೀಶರಾದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮಿಗಳಿಗೆ ಶ್ರೀ ಕ್ಷೇತ್ರ ಗೆಜ್ಜೆ ಗಿರಿಯ ಜಾತ್ರೋತ್ಸವದ ಆಮಂತ್ರಣ ಪತ್ರಿಕೆ ನೀಡಿ ಆಹ್ವಾನ

Suddi Udaya

ವಾಣಿ ಪ.ಪೂ. ಕಾಲೇಜಿನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ

Suddi Udaya

ಬಂದಾರು: ಬೊಳೋಡಿ ಸೇತುವೆ ಬಳಿ ಧರೆ ಕುಸಿತ

Suddi Udaya

ಮಾಲಾಡಿ ಅಂಬೇಡ್ಕರ್ ಜನ್ಮ ದಿನಾಚರಣಾ ಸಮಿತಿಯ ವತಿಯಿಂದ ಲಾಯಿಲ ದಯಾ ವಿಶೇಷ ಶಾಲೆಗೆ ಊಟದ ವ್ಯವಸ್ಥೆ

Suddi Udaya
error: Content is protected !!