ಬೆಳ್ತಂಗಡಿ: ಗುರುವಾಯನಕೆರೆ ಎಕ್ಸೆಲ್ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಸಂಜನಾ ಎಂ. ಡಿ ಅವರು ಕ್ಯಾನ್ಸರ್ ಪೀಡಿತರಿಗಾಗಿ ಕೇಶದಾನ ಮಾಡಿದ್ದಾರೆ.
ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಎ.ಎಸ್.ಐ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ದುರ್ಗಾದಾಸ್ ಎಂ ಹಾಗೂ ರೇವತಿ ದಂಪತಿಯ ಪುತ್ರಿಯಾದ ಇವರು ಕರಾಟೆ, ಯಕ್ಷಗಾನ, ಭರತನಾಟ್ಯದಲ್ಲಿ ತೊಡಗಿಸಿಕೊಂಡಿರುವ ಅವರು ತನ್ನ ಕೇಶವನ್ನು ಕ್ಯಾನ್ಸರ್ ಪೀಡಿತರಿಗೆ ಶೃಂಗಾರ್ ಮಾಸ್ಟರ್ ಕಟ್ ಅವರ ಮೂಲಕ ಯುವಶಕ್ತಿ ಸೇವಾಪಥ ಟ್ರಸ್ಟ್ ಅವರಿಗೆ ದಾನವಾಗಿ ಮಾಡಿದ್ದಾರೆ. ಮೂಲತಃ ಸುಬ್ರಹ್ಮಣ್ಯದವರಾದ ಇವರು ಪ್ರಸ್ತುತ ಬೆಳ್ತಂಗಡಿಯಲ್ಲಿ ನೆಲೆಸಿದ್ದಾರೆ.