23.1 C
ಪುತ್ತೂರು, ಬೆಳ್ತಂಗಡಿ
June 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಪಡ್ಡಂದಡ್ಕ: ಶ್ರೀ ವೆಂಕಟೇಶ್ವರ ಪ್ಯೂಲ್ ಸರ್ವಿಸ್ ಶುಭಾರಂಭ

ಹೊಸಂಗಡಿ: ಇಲ್ಲಿಯ ಪಡ್ಡಂದಡ್ಕ ಎಂಬಲ್ಲಿ ನೂತನವಾಗಿ ಪ್ರಾರಂಭಗೊಂಡ ಶ್ರೀ ವೆಂಕಟೇಶ್ವರ ಪ್ಯೂಲ್ ಸರ್ವಿಸ್ ಇದರ ಉದ್ಘಾಟನಾ ಸಮಾರಂಭವು ಎ.30ರಂದು ನೆರವೇರಿತು.


ಉಡುಪಿ ಕಟಪಾಡಿ-ಪಡುಕುತ್ಯಾರು ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀಪೀಠದ ಪರಮಪೂಜ್ಯ ಜಗದ್ಗುರು ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳು ಉದ್ಘಾಟಿಸಿ ಆಶೀರ್ವಚನ ನೀಡಿದರು.


ಮುಖ್ಯ ಅತಿಥಿಗಳಾಗಿ ಶ್ರೀ ಕ್ಷೇತ್ರ ಪಡ್ಯಾರಬೆಟ್ಟದ ಅನುವಂಶೀಯ ಆಡಳಿತ ಮೊಕ್ತೇಸರ ಎ. ಜೀವಂಧರ್ ಕುಮಾರ್, ಪಡ್ಡಂದಡ್ಕ ಜುಮ್ಮಾ ಮಸೀದಿ ಖತೀಬರು ಬಹು| ಖಲಂದರ್ ಬಾಖವಿ, ತಾ.ಪಂ. ಮಾಜಿ ಸದಸ್ಯ ವಿಜಯ ಗೌಡ ವೇಣೂರು ಭಾಗವಹಿಸಿದರು.
ವೇದಿಕೆಯಲ್ಲಿ ಆನಂದ ಆಚಾರ್ಯ, ಶ್ರೀಧರ ಆಚಾರ್ಯ, ಸುಂದರ ಆಚಾರ್ಯ, ಯೋಗೀಶ್ ಆಚಾರ್ಯ ಮಂಗಳೂರು, ಕೇಶವ ಆಚಾರ್ಯ ಮುಂಬೈ, ಆರ್.ಕೆ ಶಬೀರ್, ರೋಶನ್ ಉಪಸ್ಥಿತರಿದ್ದರು.


ಮಾಲಕರಾದ ಚೈತ್ರಾ ಸಂದೀಪ್ ಆಚಾರ್ಯ ರವರು ಅತಿಥಿಗಳನ್ನು ಸತ್ಕರಿಸಿ ಗೌರವಿಸಿದರು. ವಿಜಯ ಗೌಡ ಕಾರ್ಯಕ್ರಮ ನಿರೂಪಿಸಿದರು. ಪತ್ರಕರ್ತ ಹೆಚ್. ಮಹಮ್ಮದ್ ಸ್ವಾಗತಿಸಿ, ವಂದಿಸಿದರು.

ಗ್ರಾಹಕರಿಗೆ ಲಕ್ಕಿ ಕೂಪನ್:
ರೂ.3೦೦ ಪೆಟ್ರೋಲ್ ಖರೀದಿಗೆ ಲಕ್ಕಿ ಕೂಪನ್ ಹಾಗೂ ರೂ.1,000 ಡಿಸೇಲ್ ಖರೀದಿಗೆ ಲಕ್ಕಿ ಕೂಪನ್ ನೀಡಲಾಗುವುದು.
ಪ್ರಥಮ ಬಹುಮಾನ – ಸ್ಮಾರ್ಟ್ ಫೋನ್
ದ್ವಿತೀಯ ಬಹುಮಾನ – ಲ್ಯಾಪ್ ಟಾಪ್
ತೃತೀಯ ಬಹುಮಾನ – ಎಲ್.ಇ.ಡಿ. ಟಿವಿ
ಡ್ರಾ ದಿನಾಂಕ : 22 ಅಕ್ಟೋಬರ್ 2025

Related posts

ಜೂ.21: “ಪ್ರಭು ಸ್ವೀಟ್ಸ್” 2ನೇ ಫ್ಯಾಕ್ಟರಿ ಔಟ್‌ಲೆಟ್ ಗುರುವಾಯನಕೆರೆಯಲ್ಲಿ ಶುಭಾರಂಭ

Suddi Udaya

ಪ್ರಧಾನಿ ನರೇಂದ್ರ ಮೋದಿ ಯವರ ವಿರುದ್ದ ಪ್ರಚೋದನಕಾರಿ ಹೇಳಿಕೆ ನೀಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ವಿರುದ್ಧ ಬೆಳ್ತಂಗಡಿ ಬಿಜೆಪಿ ಯುವಮೋರ್ಚಾದಿಂದ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು

Suddi Udaya

ಮೈಸೂರು ದಸರಾ ಸಿ.ಎಂ ಕಪ್ ನ ಸ್ನಾಚ್, ಕ್ಲೀನ್ ಮತ್ತು ಜೆರ್ಕ್ ನಲ್ಲಿ ನಿಡ್ಲೆಯ ಪ್ರತ್ಯುಷ್‌ ರವರಿಗೆ ಗೋಲ್ಡ್ ಮೆಡಲ್

Suddi Udaya

ಕನ್ಯಾಡಿ ಸರ್ಕಾರಿ ಶಾಲೆಗೆ ರೂ. 1.65 ಲಕ್ಷ ವೆಚ್ಚದ ಸ್ಮಾರ್ಟ್ ಕ್ಲಾಸ್ ಹಸ್ತಾಂತರ

Suddi Udaya

ಕಾಂಗ್ರೆಸ್ ನ ಸಕ್ರೀಯ ಕಾರ್ಯಕರ್ತೆ ಸಾವಿತ್ರಿ ಬಿಜೆಪಿ ಸೇರ್ಪಡೆ

Suddi Udaya

ಓಡಿಲ್ನಾಳ: ಕಿರಾತ ಮೂರ್ತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವರಮಹಾಲಕ್ಷ್ಮಿ ಪೂಜೆ

Suddi Udaya
error: Content is protected !!