39.4 C
ಪುತ್ತೂರು, ಬೆಳ್ತಂಗಡಿ
May 1, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ರೈತರ ಕೃಷಿ ಪಂಪು ಸೆಟ್ ಸ್ಥಾವರಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಶಾಸಕ ಹರೀಶ್ ಪೂಂಜರಿಗೆ ಮನವಿ

ಬೆಳ್ತಂಗಡಿ: ಕರ್ನಾಟಕ ಸರಕಾರದ ವ್ಯಾಪ್ತಿಯಲ್ಲಿ ಮೆಸ್ಕಾಂ ಇಲಾಖೆಯು ರೈತರ ಕೃಷಿ ಪಂಪು ಸೆಟ್ ಸ್ಥಾವರಗಳಿಗೆ ಹೆಚ್ಚುವರಿ 15000/- ಠೇವಣಿ ವಿಧಿಸುವ ಯೋಜನೆ ಹಾಕಿಕೊಂಡಿದ್ದು, ಈಗಾಗಲೇ ಅಂದಾಜು ಪಟ್ಟಿ ತಯಾರಿಸಿ ಕಾರ್ಯದೇಶವಾದ ಯಾವುದೇ ಪಂಪು ಸೆಟ್ಟುಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುತ್ತಿಲ್ಲ. ಆದ್ದರಿಂದ ಬೆಳ್ತಂಗಡಿ ತಾಲೂಕಿನ ಕೃಷಿಕ ಬಂಧುಗಳು ಶಾಸಕ ಹರೀಶ್ ಪೂಂಜಾ ಅವರನ್ನು ಭೇಟಿಯಾಗಿ , ತಮ್ಮ ಮನವಿಯನ್ನು ಅರ್ಪಿಸಿದರು.

ಕೃಷಿಕರು ಈಗಾಗಲೇ ಬ್ಯಾಂಕುಗಳಿಂದ ಸಾಲ ಮಾಡಿ ಅಡಿಕೆ ಹಾಗೂ ತೆಂಗು ಇನ್ನಿತರ ಕೃಷಿ ಅಭಿವೃದ್ಧಿ ಮಾಡಿದ್ದು, ಕೃಷಿ ಪಂಪು ಸೆಟ್ಟುಗಳಿಗೆ ವಿದ್ಯುತ್ ಸಂಪರ್ಕ ಸಿಗದೇ ಬಸವಳಿದಿದ್ದಾರೆ. ಈ ಮೊದಲು ಇಲಾಖೆ ನೀಡಿದ ಇಂಟಿಮೇಶನ್ ಪ್ರಕಾರ ಠೇವಣಿ ಪಾವತಿಸಿದ್ದು, ಇದೀಗ ಹೆಚ್ಚುವರಿ 15 ಸಾವಿರ ಮೊತ್ತವನ್ನು ಪಾವತಿಸಲು ಮೆಸ್ಕಾಂ ಇಲಾಖೆ ತಿಳಿಸಿರುತ್ತದೆ. ಈ ಬಗ್ಗೆ ಇಲಾಖೆ ಹಾಗೂ ಸರಕಾರದ ಮಟ್ಟದಲ್ಲಿ ಆಗ್ರಹಿಸಿ ರೈತರ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸಬೇಕಾಗಿ ಶಾಸಕರಿಗೆ ತಾಲೂಕಿನ ಕೃಷಿಕರ ಪರವಾಗಿ ಮನವಿ ಸಲ್ಲಿಸಲಾಯಿತು. ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಶಾಸಕರು ತಾಲೂಕಿನ ಕೃಷಿಕರಿಗೆ ಭರವಸೆ ನೀಡಿದರು.

Related posts

4ನೇ ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್ ಶಿಪ್: ಉಜಿರೆ ತಂಡಕ್ಕೆ ಹಲವು ಪ್ರಶಸ್ತಿ

Suddi Udaya

ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಜಗದ್ಗುರು ಪೀಠದ ಪೀಠಾಧೀಶರಾದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರಿಂದ ಆಶೀರ್ವಾದ ಪಡೆದ ಕಾಂಗ್ರೆಸ್ ಮುಖಂಡರಾದ ರಂಜನ್ ಜಿ. ಗೌಡ ಮತ್ತು ಅಭಿನಂದನ್ ಹರೀಶ್ ಕುಮಾರ್

Suddi Udaya

ಕು.ಸೌಜನ್ಯ ಪ್ರಕರಣ: ಮರು ತನಿಖೆಗೆ ಒತ್ತಾಯಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ: ಸೆ. 8ರಂದು (ಇಂದು)ಹೈಕೋರ್ಟಿನಲ್ಲಿ ವಿಚಾರಣೆ

Suddi Udaya

ಉಜಿರೆಯಲ್ಲಿ ನ್ಯೂ ಚೆನೈ ಶಾಪಿಂಗ್ ದಿ ಫ್ಯಾಮಿಲಿ ಶಾಪ್ ಅದ್ದೂರಿ ಪ್ರಾರಂಭ: ಮಕ್ಕಳಿಂದ ದೊಡ್ಡವರವರೆಗೆ ಯಾವುದೇ ವಸ್ತು ತೆಗೆದುಕೊಂಡರು ರೂ.199

Suddi Udaya

ಭಾರತೀಯ ಜೈನ್‌ ಮಿಲನ್ ಬೆಳ್ತಂಗಡಿ ಮತ್ತು ಧೀಮತಿ ಮಹಿಳಾ ಸಮಾಜ ಉಜಿರೆ ಸಹಯೋಗದಲ್ಲಿ “ಆಹಾರೋತ್ಸವ ಮತ್ತು ಪ್ರತಿಭಾ ಪುರಸ್ಕಾರ”

Suddi Udaya

ಗುರುವಾಯನಕೆರೆ ಸನ್ಯಾಸಿ ಗುಳಿಗ ಕ್ಷೇತ್ರದ ಪುನರ್ ಪ್ರತಿಷ್ಠಾ ಮಹೋತ್ಸವದಲ್ಲಿ ಪರ್ವ-2024′ ತುಳುನಾಡ ದೈವಾರಾಧಕರ ಮಹಾ ಸಮ್ಮೇಳನದಲ್ಲಿ ಸರ್ವ ದೈವಾರಾಧಕರಿಗೆ ಸನ್ಮಾನ: ಸಂಪತ್ ಬಿ ಸುವರ್ಣ

Suddi Udaya
error: Content is protected !!