26.9 C
ಪುತ್ತೂರು, ಬೆಳ್ತಂಗಡಿ
May 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಅಧರ್ಮಿಗಳ ಅಟ್ಟಹಾಸ ಅಂತ್ಯವಾಗಬೇಕು: ಅನಿಲ್ ಕುಮಾರ್ ಯು

ಬೆಳ್ತಂಗಡಿ: ತುಳುನಾಡಿನ ಈ ಪವಿತ್ರ ಭೂಮಿಯಲ್ಲಿ ಅಧರ್ಮಿಗಳ ಈ ರೀತಿಯ ಅಟ್ಟಹಾಸವನ್ನು ಅವರವರು ನಂಬುವ ದೇವರು ಕೂಡ ಕ್ಷಮಿಸಲ್ಲ, ಅಂತಹ ಅಧರ್ಮಿಗಳಿಗೆ ಶಿಕ್ಷೆ ತಪ್ಪಿದ್ದಲ್ಲ. ಈ ರೀತಿಯ ದುಷ್ಟರನ್ನು ದೇವರು ಶಿಕ್ಷಿಸದೇ ಬಿಡಲ್ಲ. ತುಳುನಾಡಿನಲ್ಲಿ ಧರ್ಮದ ಸಂಸ್ಥಾಪನೆಗೆ ದುಷ್ಟರ ಸಂಹಾರ ಅಗತ್ಯವಾಗಿ ಆಗಬೇಕಾಗಿದೆ.

ಧರ್ಮ ನಿಷ್ಠರ ಪರವಾಗಿ, ಅಧರ್ಮಿಗಳ ನಾಶಕ್ಕಾಗಿ, ಧರ್ಮಿಗಳ ಉಳುವಿಗಾಗಿ ಧರ್ಮನಿಷ್ಠರು ಒಂದಾಗಬೇಕಾಗಿದೆ. ಅಧರ್ಮದತೆಯ ಮನಸ್ಥಿತಿ ಇರುವ ಇಂತಹ ವ್ಯಕ್ತಿಗಳನ್ನು, ಬೆಂಬಲವಾಗಿ ಇರುವ ಸಂಘಟನೆಗಳನ್ನು, ಬೇರು ಸಹಿತ ಕಿತ್ತು ಬಿಸಾಡಬೇಕಾದ ಸಮಯ ಬಂದಿದೆ, ಇಲ್ಲದೇ ಹೋದರೆ ಇದೇ ರೀತಿ ಧರ್ಮ ನಿಷ್ಟರು ಬಲಿಯಾಗಬೇಕಾದ ಪರಿಸ್ಥಿತಿ ಬರುತ್ತದೆ, ಇಂತಹ ಅಧರ್ಮಿಗಳಿಗೆ ಬೆಂಬಲ ನೀಡುವ ರಾಜಕೀಯ ಪಕ್ಷಗಳಿಗೆ, ಸಂಘಟನೆಗಳಿಗೆ ನನ್ನ ದಿಕ್ಕಾರ, ತಕ್ಷಣ ಸಂಬಂಧ ಪಟ್ಟ ಸರಕಾರಗಳು, ಆಡಳಿತ ವರ್ಗ, ಅಧಿಕಾರಿ ವರ್ಗದವರು ಯಾವುದೇ ಮುಲಾಜಿಲ್ಲದೆ ತಮ್ಮ ರಾಜಕೀಯದ ಹಿತಾಸಕ್ತಿಯನ್ನು ಇದರಲ್ಲಿ ತರದೇ ಕ್ರಮ ತೆಗೆದು ಕೊಳ್ಳಬೇಕು, ಆ ಮೂಲಕ ಅಧರ್ಮಿಗಳಿಗೆ ತಕ್ಕ ಪಾಠ ಕಲಿಸಬೇಕು ಎಂದು ಆಗ್ರಹಿಸುತ್ತೇನೆ. ಧರ್ಮ ನಿಷ್ಠ ಮೃತ ಸುಹಾಸ್ ಶೆಟ್ಟಿ ಆತ್ಮಕ್ಕೆ ಶ್ರದ್ಧಾಂಜಲಿ ಅರ್ಪಿಸುತ್ತೇನೆ. ಮತ್ತೋರ್ವ ಕಾರ್ಯಕರ್ತನಿಗೂ ಹಲ್ಲೆಯಾಗಿದ್ದು ಶೀಘ್ರ ಗುಣಮುಖವಾಗಲೆಂದು ದೇವರಲ್ಲಿ ಪ್ರಾಥಿಸುತ್ತೇನೆ ಎಂದು ಭಾರತೀಯ ಮಜ್ದೂರು ಸಂಘ ದ.ಕ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಯು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Related posts

ಅರಿಕೆಗುಡ್ಡೆ ಶ್ರೀ ವನದುರ್ಗ ಕ್ಷೇತ್ರದಲ್ಲಿ ವಿಜೃಂಭಣೆಯ ನವರಾತ್ರಿ ಉತ್ಸವ ಸಂಪನ್ನ

Suddi Udaya

ಗುರುವಾಯನಕೆರೆ ಶ್ರೀಶಾರದಾಂಭ ಭಜನಾ ಮಂಡಳಿಯಿಂದ ಶ್ರೀ ವರಮಹಾಲಕ್ಷ್ಮಿ ಪೂಜೆ

Suddi Udaya

ಸಹಕಾರ ಸಂಘಗಳ ಅಧಿಕಾರಕ್ಕೆ ತಡೆ ನೀಡಿದ್ದ ಸರಕಾರದ ಸುತ್ತೋಲೆಗೆ ಹೈಕೋರ್ಟ್ ತಡೆಯಾಜ್ಞೆ

Suddi Udaya

ಸ್ಪಂದನ ಪಾಲಿಕ್ಲಿನಿಕ್ ವತಿಯಿಂದ ಮನೆ ಬಾಗಿಲಿಗೆ ಬಂದು ರಕ್ತದ ಸ್ಯಾಂಪಲ್ ಸಂಗ್ರಹಿಸುವ ವ್ಯವಸ್ಥೆ

Suddi Udaya

ಚಾರ್ಮಾಡಿ ಗ್ರಾ.ಪಂ. ಅಧ್ಯಕ್ಷರಾಗಿ ಶಾರದಾ ಎ., ಉಪಾಧ್ಯಕ್ಷರಾಗಿ ನೀಲು

Suddi Udaya

ಉಜಿರೆ : ಶ್ರೀ.ಧ.ಮಂ ಆಂ.ಮಾ. ಶಾಲಾ ವಿದ್ಯಾರ್ಥಿ ಪರಿಷತ್ತಿನ ನಾಯಕತ್ವದ ಆಯ್ಕೆಗಾಗಿ ಚುನಾವಣೆ

Suddi Udaya
error: Content is protected !!