ವೇಣೂರು: ಇಲ್ಲಿಯ ಪಡ್ಡಂದಡ್ಕ ಬಲ್ಲಂಗೇರಿ ನಿವಾಸಿ ಕೃಷಿಕ ಅಬ್ದುಲ್ ಹಮೀದ್ (55ವ) ರವರು ಮೇ 5ರಂದು ಸ್ವಗೃಹದಲ್ಲಿ ಅಲ್ಪಕಾಲದ ಅಸೌಖ್ಯದಿಂದ ನಿಧನ ಹೊಂದಿದರು.
ಅವರು ಅಂಗರ ಕರಿಯ ಜುಮ್ಮಾ ಮಸೀದಿಯ ಕೋಶಾಧಿಕಾರಿಯಾಗಿದ್ದು ಅಲ್ಲದೆ ಸ್ಥಳೀಯ ಪುಲಾಬೆ ಮದ್ರಸದ ಮಾಜಿ ಅಧ್ಯಕ್ಷರಾಗಿದ್ದರು.
ಮೃತರು ಪತ್ನಿ,ಇಬ್ಬರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿರುತ್ತಾರೆ.












