39.6 C
ಪುತ್ತೂರು, ಬೆಳ್ತಂಗಡಿ
May 6, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳ್ತಂಗಡಿ: ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನಾ ದಿನಾಚರಣೆ

ಬೆಳ್ತಂಗಡಿ : ವಾಣಿ ಕಾಲೇಜು ಹಳೆಕೋಟೆ ಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಬೆಳ್ತಂಗಡಿ ತಾಲೂಕು ಮತ್ತು ವಾಣಿ ಕಾಲೇಜಿನ ವತಿಯಿಂದ ಕನ್ನಡ ಸಾಹಿತ್ಯ ಪರಿಷತ್ತು ಸ್ಟಾಪನಾ ದಿನಾಚರಣೆ ಜರಗಿತು.

ರಸಾನುಭವ ಮತ್ತು ರಸಾಭಿವ್ಯಕ್ತಿಗೆ ಭಾಷೆ ಬೇಕು. ನಮಗೆ ನಮ್ಮದೇ ಆದ ಅನನ್ಯತೆಯನ್ನು ಉಳಿಸಿಕೊಳ್ಳಲು ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಬೇಕು. ಹಿಂದೆಲ್ಲ ಕಲಿಕೆಯಲ್ಲಿದ್ದ ಮತ್ತು ಕಡಿಮೆ ಅಂಕದ ಫಲಿತಾಂಶ ಬಂದರೂ ಇರುತ್ತಿದ್ದ ಸಂತಸ ಮತ್ತು ಸಂತೃಪ್ತಿ ಈಗ ಕಲಿಕೆಯಲ್ಲೂ ಇಲ್ಲ ಮತ್ತು ನೂರು ಶೇಕಡಾ ಅಂಕದ ಫಲಿತಾಂಶ ಬಂದರೂ ಇಲ್ಲದಾಗಿದೆ. ಅದಕ್ಕೆಲ್ಲ ನಮ್ಮ ಮಾತೃ ಭಾಷಾ ಕಲಿಕೆಯ ಮತ್ತು ಸಾಹಿತ್ಯಿಕ ಓದಿನ ಕೊರತೆಯೇ ಕಾರಣ. ಸಂಸ್ಕೃತಿಯ ಉತ್ಪನ್ನವಾಗಿರುವ ಭಾಷೆಯ ಬಳಕೆ, ಸಾಹಿತ್ಯದ ಅಧ್ಯಯನ ಮತ್ತು ಓದಿನ ಅಗತ್ಯತೆ ಇಂದಿನ ಅನಿವಾರ್ಯತೆ ಎಂದು ಬೆಳ್ತಂಗಡಿ ತಾಲ್ಲೂಕು ಕ ಸಾ ಪ ದ ಅಧ್ಯಕ್ಷರು, ಕ ಸಾ ಪ ಸ್ಥಾಪನಾ ದಿನಾಚರಣೆ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಡಿ. ಯದುಪತಿ ಗೌಡರು ಅಭಿಪ್ರಾಯಪಟ್ಟರು.

ಮುಖ್ಯ ಭಾಷಣಕಾರರಾಗಿ ಆಗಮಿಸಿದ ವಾಣಿ ಕಾಲೇಜಿನ ಉಪನ್ಯಾಸಕರಾದ ಬೆಳ್ಳಿಯಪ್ಪ ರವರು, ಕ ಸಾ ಪ ದ ಪ್ರಸ್ತುತತೆ ಮತ್ತು ಮಹತ್ವದ ಬಗ್ಗೆ ಮಾತನಾಡುತ್ತಾ, ನಮ್ಮ ರಾಜ್ಯದಲ್ಲಿ ಕನ್ನಡ ಭಾಷೆಗೆ ತೊಂದರೆ ಮತ್ತು ಅಡ್ಡಿಗಳು ಎದುರಾದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಜೊತೆ ಎಲ್ಲಾ ಕನ್ನಡಿಗರೂ ಹೋರಾಟಕ್ಕೆ ಸಿದ್ಧರಾಗಬೇಕು ಎಂದು ಕರೆ ನೀಡಿದರು.

ವಾಣಿ ಕಾಲೇಜಿನ ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಕ ಸಾ ಪ ದ ಗೌರವ ಕಾರ್ಯದರ್ಶಿಗಳಾದ ರಾಮಕೃಷ್ಣ ಭಟ್ ಚೊಕ್ಕಾಡಿ ಸ್ವಾಗತಿಸಿ ವಂದಿಸಿದರು. ಕಾಲೇಜಿನ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಸಮಾರಂಭದ ಯಶಸ್ಸಿಗೆ ಸಹಕರಿಸಿದರು.

Related posts

ವಾಣಿ ಕಾಲೇಜು: ಸಮಾನ ನಾಗರಿಕ ಸಂಹಿತೆ ಮಾಹಿತಿ ಉಪನ್ಯಾಸ

Suddi Udaya

ರೋಟರಿ ಕ್ಲಬ್ ಬೆಳ್ತಂಗಡಿ, ರೋಟರಿ ಬೆಂಗಳೂರು ಇಂದಿರಾನಗರ ಮತ್ತು ಕ್ಯಾನ್ ಫಿನ್ ಹೋಮ್ಸ್ ಲಿಮಿಟೆಡ್ ಸಹಯೋಗದೊಂದಿಗೆ ನಾವೂರಿನ ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆಗೆ ಶೌಚಾಲಯ ನಿರ್ಮಿಸಿ ಹಸ್ತಾಂತರ

Suddi Udaya

ಕಾಶಿಪಟ್ಣ: ನಾರಾವಿ ಸಂತ ಅಂತೋನಿ ಕಾಲೇಜಿನ ಎನ್ನೆಸ್ಸೆಸ್ ಶಿಬಿರದ ಉದ್ಘಾಟನೆ

Suddi Udaya

ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಶ್ರೀ ವಿಘ್ನೇಶ್ವರ ಭಜನಾ ಮಂದಿರದಿಂದ ಪಾದಯಾತ್ರೆ

Suddi Udaya

ತಣ್ಣೀರುಪಂತ ಗ್ರಂಥಾಲಯ ಸಲಹಾ ಸಮಿತಿ ಸಭೆ

Suddi Udaya

ಧರ್ಮಸ್ಥಳ: ಶ್ರೀ. ಮಂ.ಅ.ಪ್ರೌ. ಶಾಲೆಯಲ್ಲಿ ವಿಶ್ವ ಬಾಲಕಾರ್ಮಿಕ ವಿರೋಧಿ ದಿನಾಚರಣೆ

Suddi Udaya
error: Content is protected !!