ಬೆಳ್ತಂಗಡಿ:ಕಾಶ್ಮೀರದ ಪಹಲ್ಗಾಮ್ ನಲ್ಲಿ 27 ಮಂದಿ ಮುಗ್ಧ ಭಾರತೀಯರನ್ನು ಹತ್ಯೆಗೈದ ಪಾಕಿಸ್ಥಾನದ ಉಗ್ರರಿಗೆ ಭಾರತೀಯ ಸೇನೆ ಅವರದ್ದೇ ಭಾಷೆಯಲ್ಲಿ ಉತ್ತರಿಸಿದೆ.
ನಮ್ಮ ತಾಯಂದಿರ ಸಿಂಧೂರವನ್ನು ಅಳಿಸುವ ದುಸ್ಸಾಹಸ ಮಾಡುವ ಎಲ್ಲಾ ದುರುಳರಿಗೆ “ಆಪರೇಶನ್ ಸಿಂಧೂರ” ಸರಿಯಾದ ಉತ್ತರವಾಗಿದೆ. ನಾವೆಲ್ಲ ಭಾರತೀಯರು ಒಟ್ಟಾಗಿ, ಸೇನೆ ಮತ್ತು ಸರಕಾರದ ಜೊತೆ ನಿಲ್ಲಬೇಕಿದೆ. ದೇಶದ ಅವಶ್ಯಕತೆಗೆ ಅನುಸಾರ ನಮ್ಮ ಕರ್ತವ್ಯ ನಿರ್ಹಹಿಸಬೇಕಿದೆ ಎಂದು ಎಕ್ಸೆಲ್ ಕಾಲೇಜಿನ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ತಿಳಿಸಿದರು.











