September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

“ಸಿಂಧೂರ್” ಅರ್ಥಪೂರ್ಣವಾದ ಆಪರೇಷನ್: ಪೀತಾಂಬರ ಹೆರಾಜೆ

ಬೆಳ್ತಂಗಡಿ: ಹಲವಾರು ದಶಕಗಳಿಂದ ಭಾರತ ದೇಶದಲ್ಲಿ ಉಗ್ರವಾದಕ್ಕೆ ಪ್ರಚೋದನೆ ನೀಡುತ್ತಿದ್ದ ಪಾಕಿಸ್ತಾನ ಸರಕಾರ, ಸೈನಿಕರು, ಹಾಗೂ ಅವರಿಗೆ ಸಹಕರಿಸುತ್ತಿರುವ ಉಗ್ರರಿಂದಾಗಿ ಶಾಂತಿಪ್ರಿಯ ಭಾರತ ದೇಶದ ಆರ್ಥಿಕತೆಗೆ ಮತ್ತು ಕೋಮು ಸಾಮರಸ್ಯಕ್ಕೆ ಸವಾಲಾಗಿರುವ ಪಾಕಿಸ್ತಾನಕ್ಕೆ ಸೂಕ್ತ ಉತ್ತರ ನೀಡುವ ಅಗತ್ಯ ಖಂಡಿತ ಇದೆ. ಉಗ್ರವಾದಕ್ಕೆ ಸಹಕರಿಸುವ ಪೋಷಿಸುವ ಯಾವುದೇ ಸರ್ಕಾರ ಅಥವಾ ಜನರು ಭೂಮಿಯಲ್ಲಿ ಬದುಕಲು ಯೋಗ್ಯರಲ್ಲ. ಉಗ್ರವಾದವನ್ನು ಬೇರು ಸಹಿತ ಮಟ್ಟ ಹಾಕಲು ಭಾರತೀಯರೆಲ್ಲರೂ ಜಾತಿ ಮತ ಪಂಥ ಭೇದ ಮರೆತು ಒಂದಾಗಲು ಇದೊಂದು ಸಕಾಲ.

ಪಾಕಿಸ್ತಾನದ ಜನರಿಗೆ ಉಣ್ಣಲು ಗತಿಯಿಲ್ಲದಿದ್ದರೂ ಭಯೋತ್ಪಾದನೆಯಲ್ಲಿ ನಿರತರಾಗಿರುವುದು ಒಂದು ಶಾಪ. ಭಯೋತ್ಪಾದನೆಯ ಸಂಪೂರ್ಣ ಉಚ್ಛಾಟನೆ ಆಗಲೇಬೇಕು ಪಾಕಿಸ್ತಾನ ನಿರ್ನಾಮ ಆಗಲೇಬೇಕು. ಏ. 22ರಂದು ಜಮ್ಮು ಕಾಶ್ಮೀರದ ಪೇಹಲ್ ಗಾಂ ನಲ್ಲಿ ನಡೆದ ಪಾಕಿಸ್ತಾನದ ಉಗ್ರರ ಪೈಶಾಚಿಕ ದಾಳಿಯ ನೆನಪಿಗಾಗಿ ನಡೆದ ಸಿಂಧೂರ ಆಪರೇಷನ್ ಅರ್ಥಪೂರ್ಣ. ಭಾರತೀಯ ಸೇನೆಗೆ ಅಭಿನಂದನೆಗಳು ಎಂದು ನಿವೃತ್ತ ಎಸ್.ಪಿ ಪೀತಾಂಬರ ಹೆರಾಜೆ ರವರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Related posts

ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ಬೆಂಗಳೂರು ಭುವನೇಶ್ವರಿ ಕ್ಯಾಟರರ್ಸ್ ಜೆಬಿಆರ್ ಎಂಟರ್ ಪ್ರೈಶಸ್ ರವರಿಂದ ದೇವರಿಗೆ ವಿಶೇಷ ಹೂವಿನ ಅಲಂಕಾರ

Suddi Udaya

ಅ.10: ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಪ್ರಯುಕ್ತ ಮಡಂತ್ಯಾರು ಹಾಗೂ ಬಳ್ಳಮಂಜ ಫೀಡರುಗಳಲ್ಲಿ ವಿದ್ಯುತ್ ನಿಲುಗಡೆ

Suddi Udaya

ದ‌.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಂದ ಮಡಂತ್ಯಾರು ಸಿಎ ಬ್ಯಾಂಕಿಗೆ ಪ್ರೋತ್ಸಾಹಕ ಪ್ರಶಸ್ತಿ

Suddi Udaya

ಎಸ್.ವೈ.ಎಸ್ ಕಾಜೂರು ಸರ್ಕಲ್ ವತಿಯಿಂದ ಸ್ವಚ್ಛತಾ ಆಂದೋಲನ: ಸಾರ್ವಜನಿಕರಿಂದ ಶ್ಲಾಘನೆ

Suddi Udaya

ನಾಮಫಲಕಗಳಲ್ಲಿ ಕನ್ನಡ ಕಡ್ಡಾಯ – ಮಾಹಿತಿ

Suddi Udaya

ಬೆಳ್ತಂಗಡಿ: ವಾಹನ ಸಂಚಾರ ಇಂದು ಮಾರ್ಗ ಬದಲಾವಣೆ

Suddi Udaya
error: Content is protected !!