ಶಿಶಿಲ: ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಗ್ರಾಮ ಸಮಿತಿ ಶಿಶಿಲ-ಯುವ ಸಮಿತಿ ಮಹಿಳಾ ಸಮಿತಿಯಿಂದ ವೀರ ಯೋಧರಿಗೆ ಶಕ್ತಿ ತುಂಬುವ ಆಪರೇಷನ್ ಸಿಂದೂರ ಯಶಸ್ವಿ ಕಾರ್ಯಾಚರಣೆಗಾಗಿ ಶ್ರೀ ಶಿಶಿಲೇಶ್ವರ ದೇವಸ್ಥಾನದಲ್ಲಿ ಮೇ ೧೨ರಂದು ವಿಶೇಷ ಪ್ರಾರ್ಥನೆ ಮತ್ತು ದೇವರಿಗೆ ಸರ್ವ ಸೇವೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಶ್ರೀ ಶಿಶಿಲೇಶ್ವರ ದೇವಸ್ಥಾನದ ನಿಕಟಪೂರ್ವ ಅಧ್ಯಕ್ಷ ಶ್ರೀನಿವಾಸ ಮುಡೆತ್ತಾಯ, ಅರ್ಚಕ ರಾಮ ಕಾರಂತ್, ಒಕ್ಕಲಿಗ ಗ್ರಾಮ ಸಮಿತಿ ಅಧ್ಯಕ್ಷ ಕುಶಾಲಪ್ಪ ಗೌಡ ಜಿ. ಬದ್ರಿಜಾಲು, ಉಪಾಧ್ಯಕ್ಷ ಕೊರಗಪ್ಪ ಗೌಡ ಪಡ್ಪು (ಶಿಶಿಲ ಗ್ರಾಮ ಗೌಡ ರಮೇಶ್ ಗೌಡ ) ಸಮಿತಿ ಕಾರ್ಯದರ್ಶಿ ಭುವನ್ ಕುಮಾರ್ ಶಿಶಿಲ, ರಾಕೇಶ್ ಗೌಡ ಪಡ್ಪು, ಉಮಾವತಿ ಗಣೇಶ್ ಗೌಡ ಓಟ್ಲ, ಕೋಮಲಾಕ್ಷಿ ಅಡ್ಡಹಳ್ಳ, ಗಾಯತ್ರಿ ಗುತ್ತು ಹಾಗೂ ಬೈಲುವಾರು ಸಮಿತಿ ಸದಸ್ಯರು, ಗ್ರಾಮಸ್ಥರು ಭಾಗವಹಿಸಿದ್ದರು.
