ಧರ್ಮಸ್ಥಳ: ಡಾ|| ಬಾಬಾ ಸಾಹೇಬ್ ಅಂಬೇಡ್ಕರ್ರವರ ಅಂದಿನ ಜೀವನ ಇತಿಹಾಸವನ್ನು ಅರಿಯದೆ ಇಂದಿನ ಸಾಮಾಜಿಕ ವ್ಯವಸ್ಥೆಯನ್ನು ಅಳತೆ ಮಾಡುವುದು ಅಸಾಧ್ಯ. ಅವರು ಕೇವಲ ಒಂದು ಸಮುದಾಯಕ್ಕೆ ಒಂದು ಜನಾಂಗಕ್ಕೆ ಸೀಮಿತರಾದವರಲ್ಲ ಇಡೀ ಭಾರತದ ಪ್ರಜೆಗಳು ಸ್ವಾತಂತ್ಯ್ರ -ಸಮಾನತೆ-ಭ್ರಾತ್ವತ್ವದಿಂದ ಕೂಡಿ ಬಾಳಬೇಕು ಎನ್ನುವ ಗುರಿಯನ್ನು ಇಟ್ಟುಕೊಂಡು ಇಡೀ ಮಾನವ ಸಮುದಾಯಕ್ಕೆ ಎಲ್ಲಾ ಕಾಲಘಟ್ಟದಲ್ಲೂ ಅನ್ವಯವಾಗುವಂತಹ ಕಾನೂನುಗಳನ್ನು ಒಳಗೊಂಡ ಶ್ರೇಷ್ಠ ಸಂವಿಧಾನವನ್ನು ಈ ದೇಶಕ್ಕೆ ನೀಡಿದ್ದಾರೆ. ಅವರು ಪಟ್ಟ ಪರಿಶ್ರಮ, ನಿರಂತರ ಓದುವಿಕೆಯ ಶ್ರದ್ಧೆ, ತನ್ನ ಕಾರ್ಯಕ್ಷಮತೆಯ ಮೇಲಿನ ಬದ್ಧತೆ ಇವುಗಳನ್ನು ಇಂದಿನ ಯುವ ಪೀಳಿಗೆಗೆ ತಿಳಿಸಬೇಕಾಗಿದೆ ಎಂದು ಖ್ಯಾತ ಸಾಹಿತಿ, ಅಂಕಣಕಾರರು, ಅಧ್ಯಾಪಕ ಅರವಿಂದ ಚೊಕ್ಕಡಿಯವರು ಅಭಿಪ್ರಾಯಪಟ್ಟರು.
ಕರ್ನಾಟಕ ರಾಜ್ಯ ಆದಿದ್ರಾವಿಡ ಸಮಾಜ ಸೇವಾ ಸಂಘದ ಧರ್ಮಸ್ಥಳ ವಲಯ ಘಟಕದ ಆಶ್ರಯದಲ್ಲಿ ಮೇ 7 ರಂದು ನಡೆದ ಡಾ|| ಬಾಬಾ ಸಾಹೇಬ್ ಅಂಬೇಡ್ಕರ್ರವರ 135ನೇ ಜನ್ಮ ದಿನಾಚರಣೆಯ ಸಂಭ್ರಮದಲ್ಲಿ ಅವರು ದಿಕ್ಸೂಚಿ ಭಾಷಣವನ್ನು ಮಾಡಿದರು.
ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್. ಜನಾರ್ದನ ಅವರು ದೀಪ ಬೆಳಗಿಸಿ, ಅಂಬೇಡ್ಕರ್ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ, ಅಂಬೇಡ್ಕರ್ರವರ ಅದಮ್ಯ ಚಿಂತನೆಯ ಫಲವಾಗಿ ಸಮಾಜದಲ್ಲಿ ನಾವು ವ್ಯವಸ್ಥಿತ ಹಾಗೂ ಉತ್ತಮ ಜೀವನ ನಡೆಸುವಂತಾಗಿದೆ. ಅವರು ಮಹಿಳೆಯರಿಗಾಗಿ ಮಾಡಿರುವ ಕೆಲಸಗಳು ಅದರ ಉದ್ದೇಶಗಳಲ್ಲೊಂದಾದದ್ದು ಮಹಿಳಾ ಸಬಲೀಕರಣಕ್ಕಾಗಿ ಪ್ರಯತ್ನ ನಮ್ಮ ಸಿರಿ ಸಂಸ್ಥೆಯಿಂದ ನಡೆಯುತ್ತಿದೆ ಎಂದು ಶುಭಹಾರೈಸಿದರು.
ಕರ್ನಾಟಕ ರಾಜ್ಯ ಆದಿದ್ರಾವಿಡ ಸಮಾಜ ಸೇವಾ ಸಂಘದ ರಾಜ್ಯಾಧ್ಯಕ್ಷ ಗಣೇಶ್ ಪ್ರಸಾದ್ ಮೂಡಬಿದ್ರೆ , ಧರ್ಮಸ್ಥಳ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವಿಮಲಾ, ಜಿಲ್ಲಾಧ್ಯಕ್ಷ ಶ್ರೀನಿವಾಸ ಅರ್ಬಿಗುಡ್ಡೆ, ತಾಲೂಕು ಘಟಕದ ಅಧ್ಯಕ್ಷ ದಿನೇಶ್ ಕೊಕ್ಕಡರವರು ಸಂದರ್ಭೋಚಿತವಾಗಿ ಮಾತನಾಡಿ ಶುಭಹಾರೈಸಿದರು. ಗ್ರಾಮ ಪಂಚಾಯತ್ನ ವಾರ್ಡ್ ಸದಸ್ಯರಾದ ಶ್ರೀ ಚಂದನ್ಪ್ರಸಾದ್ ಕಾಮತ್, ಶ್ರೀಮತಿ ಗಾಯತ್ರಿ, ಅಶೋಕನಗರದ ಗುರಿಕಾರರಾದ ಕರಿಯ ಹಾಗೂ ಸದಾಶಿವ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಧರ್ಮಸ್ಥಳ ವಲಯ ಘಟಕದ ಅಧ್ಯಕ್ಷ ಗಣೇಶ್ ಡಿ.ಯವರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಧರ್ಮಸ್ಥಳ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪ್ರೀತಮ್ ಡಿ., ನಿರ್ದೇಶಕರುಗಳಾದ ಶ್ರೀಮತಿ ಧನಲಕ್ಷ್ಮಿ ಜನಾರ್ದನ್, ಶ್ರೀ ಶೀನ, ಗ್ರಾಮ ಪಂಚಾಯತ್ ಸದಸ್ಯರಾದ ಹರ್ಷಿತ್ ಜೈನ್, ಶ್ರೀಮತಿ ಸುನೀತಾ ಶ್ರೀಧರ್, ಶ್ರೀಮತಿ ಭಾರತಿ, ಶ್ರೀಮತಿ ಸುನೀತಾ ಡಿ.ಕೆ.,ಶ್ರೀ ಮುರಳೀಧರ ದಾಸ್, ಉದ್ಯಮಿಗಳಾದ ಶ್ರೀ ಸದಾಶಿವ, ಶ್ರೀ ಚಂದ್ರನ್ ನಾಯರ್, ಶ್ರೀ ಕ್ಷೇತ್ರದ ವಿವಿಧ ವಿಭಾಗಗಳ ಮೆನೇಜರ್ಗಳಾದ ಶ್ರೀ ಯೋಗೀಶ್, ಶ್ರೀ ರವಿ ಹಾಗೂ ಇನ್ನಿತರ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಅಶೋಕನಗರದ ದಿವಾಕರ ಇವರಿಗೆ ‘ಉತ್ತಮ ನಾಗರಿಕ ಪುರಸ್ಕಾರ’ ನೀಡಿ ಗೌರವಿಸಲಾಯಿತು. ಶ್ರೀಮತಿ ಅನಿತಾ ಬಿ.ಯವರು ದಿವಾಕರರವರ ಪರಿಚಯವನ್ನು ಓದಿದರು.
ಶ್ರೀಮತಿ ಸುಪ್ರಿತಾ ಇವರ ಭೀಮಗೀತೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಶೇಖರ್ ಧರ್ಮಸ್ಥಳ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿ, ಶ್ರೀಮತಿ ಸುಜಾತ ವರದಿ ವಾಚಿಸಿದರು. ಸಂತೋಷ್ ಎಸ್. ರವರು ಧನ್ಯವಾದವಿತ್ತರು. ಸಂತೋಷ್ ಎಸ್. ಮತ್ತು ಶೇಖರ್ರವರು ಕಾರ್ಯಕ್ರಮ ನಿರೂಪಿಸಿದರು, ಶ್ರೀಮತಿ ಸುನೀತಾ ಸಹಕರಿಸಿದರು.
ಸಭಾಕಾರ್ಯಕ್ರಮದ ಬಳಿಕ ವಿಠ್ಠಲ ನಾಯಕ್ ಕಲ್ಲಡ್ಕ ಇವರಿಂದ ಗೀತ ಸಾಹಿತ್ಯ ಸಂಭ್ರಮ ಕಾರ್ಯಕ್ರಮ ಹಾಗೂ ವಿವಿಧ ತಂಡಗಳಿAದ ಅಂಬೇಡ್ಕರ್ರವರ ಜೀವನ ಚಿತ್ರಣದ ನೃತ್ಯರೂಪಕ ಹಾಗೂ ಇನ್ನಿತರ ನೃತ್ಯವೈವಿಧ್ಯ ಕಾರ್ಯಕ್ರಮ ನೆರವೇರಿತು.