ಧರ್ಮಸ್ಥಳ : ಇಲ್ಲಿಯ ನಾರ್ಯ ನಿವಾಸಿ ಶಾಂತಾ (68ವ)ರವರು ಹಾವು ಕಚ್ಚಿ ಮೃತಪಟ್ಟಿರುವ ಘಟನೆ ಮೇ12 ರಂದು ನಡೆದಿದೆ.
ಮನೆಯ ಹಿಂಬದಿಯಲ್ಲಿ ಬಟ್ಟೆಯನ್ನು ಒಗೆಯಲು ಸಾಬೂನು ತೆಗೆಯುವ ಸಂದರ್ಭದಲ್ಲಿ ಕಿಟಕಿಯಲ್ಲಿ ಯಾವುದೋ ವಿಷದ ಹಾವು ಎಡಗೈ ಕಿರು ಬೆರಳಿಗೆ ಕಡಿದಿತ್ತು. ಮನೆ ಮದ್ದು ಮಾಡಿ ಬಳಿಕ ಉಜಿರೆ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೇ 13ರಂದು ಮೃತಪಟ್ಟಿದ್ದಾರೆ.