ಪುದುವೆಟ್ಟು ಪಂಚಾಯತ್ 1ನೇ ವಾರ್ಡ್ ತೆರವಾದ ಸ್ಥಾನಕ್ಕೆ ಉಪಚುನಾವಣೆ ಘೋಷಣೆಯಾಗಿದ್ದು ಮೇ 14 ರಂದು ಪುದುವೆಟ್ಟು ನಿವಾಸಿ ಶ್ರೀಮತಿ ಜಯಲಕ್ಷ್ಮೀ ರವರು ಚುನಾವಣಾಧಿಕಾರಿ ಗಣೇಶ್ ರವರಿಗೆ ನಾಮಪತ್ರ ಸಲ್ಲಿಸಿದರು.


ಈ ಸಂದರ್ಭದಲ್ಲಿ ಪುದುವೆಟ್ಟು ಗ್ರಾ.ಪಂ. ಅಧ್ಯಕ್ಷ ಪೂರ್ಣಾಕ್ಷ, ಮಿಯಾರು ವನದುರ್ಗಾ ದೇವಸ್ಥಾನದ ನಿಕಟಪೂರ್ವ ಅಧ್ಯಕ್ಷ ನಿತ್ಯಾನಂದ ಗೌಡ, ಧರ್ಮಸ್ಥಳ ಸಿ.ಎ ಬ್ಯಾಂಕಿನ ಉಪಾಧ್ಯಕ್ಷ ಅಜಿತ್ ಕುಮಾರ್ ಜೈನ್, ನಿರ್ದೇಶಕರಾದ ಪ್ರಸನ್ನ ಹೆಬ್ಬಾರ್, ಬೊಳ್ಮನಾರು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ರಂಗನಾಥ್, ಮಿಯಾರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಸಜು, ಸಹಕಾರ ಭಾರತೀಯ ತಾಲೂಕು ಉಪಾಧ್ಯಕ್ಷ ಶ್ರೀಧರ್ ನಾಯರ್, ಗ್ರಾ.ಪಂ. ಸದಸ್ಯರಾದ ಭಾಸ್ಕರ್ ಅಡ್ಯ, ಅಪ್ಪಿ, ವನಿತಾ, ಶ್ರೀಮತಿ ರೇಣುಕಾ, ಧರ್ಮಸ್ಥಳ ಸಿ.ಎ ಬ್ಯಾಂಕಿನ ಮಾಜಿ ನಿರ್ದೇಶಕ ನಾರಾಯಣ ಪೂಜಾರಿ ಕೈರಂಡ, ಮಿಯಾರು ಹಾಲು ಉತ್ಪಾದಕರ ಸಹಕಾರಿ ಸಂಘದ ಉಪಾಧ್ಯಕ್ಷ ಅಣ್ಣು ಗೌಡ, ಕೃಷ್ಣಪ್ಪ ಪೂಜಾರಿ ಬರಮೇಲು, ಬೂತ್ ಅಧ್ಯಕ್ಷ ಚಂದ್ರಹಾಸ್ ಗೌಡ ಮುಚ್ಚಾರು, ಬೂತ್ ಕಾರ್ಯದರ್ಶಿಗಳಾದ ಆನಂದ ಗೌಡ ಕಲ್ಲಾಜೆ, ಹರೀಶ್ ಮೇಲಿನಡ್ಕ, ಬಾಲಣ್ಣ ಗೌಡ ಮಿಯಾರು, ಪ್ರಮೋದ್ ದರ್ಖಾಸು, ಮೋಹನ್ ಗೌಡ ಮಠ, ಗ್ರಾ.ಪಂ. ನಿಕಟಪೂರ್ವ ಅಧ್ಯಕ್ಷ ಯಶವಂತ ಗೌಡ ಡೆಚ್ಚಾರು, ಪುತ್ತೂರು ಜಿಲ್ಲಾ ವಿಶ್ವ ಹಿಂದೂ ಪರಿಷತ್ ಗೋರಕ್ಷ ಪ್ರಮುಖ್ ಗಣೇಶ್ ಗೌಡ ಕಳೆಂಜ ಉಪಸ್ಥಿತರಿದ್ದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವಿ ಎಂ.ಬಿ. ಸಹಕರಿಸಿದರು.