September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿ

CSEET ಫಲಿತಾಂಶ: ರಾಜ್ಯದಲ್ಲೇ ಗರಿಷ್ಠ ಸಂಖ್ಯೆಯಲ್ಲಿ ತೇರ್ಗಡೆಗೊಂಡ ಕ್ರಿಯೇಟಿವ್‌ನ ವಿದ್ಯಾರ್ಥಿಗಳು

ಇನ್ಸ್ ಟ್ಯೂಟ್ ಆಫ್ ಕಂಪನಿ ಸೆಕ್ರೆಟರಿ ಆಫ್ ಇಂಡಿಯಾ (CSEET ) ರವರು ೦೩ ಮೇ, ೨೦೨೫ ರಲ್ಲಿ ನಡೆಸಿದ CSEET ಅರ್ಹತಾ ಪರೀಕ್ಷೆಯಲ್ಲಿ ಕಾರ್ಕಳದ ಕ್ರಿಯೇಟಿವ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಮಿಥುನಶ್ರೀ 164 ಮತ್ತು ಸುವರ್ಣ ಹರ್ಷಲ್ ವೈ 162ಅಂಕಗಳೊಂದಿಗೆ ವಿಶಿಷ್ಟ ಸಾಧನೆಗೈದಿದ್ದಾರೆ.

ವಿದ್ಯಾರ್ಥಿಗಳಾದ ಹಾರಿಕ ಗೌಡ ಆರ್. ಬಿ.(೧೫೩), ಇಯಾನ್ ಪೌಲ್(೧೪೭), ಬಸವ ಪ್ರಸಾದ್ ಕಾಜಿ(೧೪೨), ಪೂರ್ಣ ಭಟ್ ಕೆ.ಎಲ್(೧೪೧), ಸೃಜನ್ ಎಸ್.ಭಟ್(೧೪೦), ಲಿಖಿತ್ ರೆಡ್ಡಿ ಎಚ್.ಎಂ(೧೪೦), ರಕ್ಷಿತಾ ಆರ್.ಕಾಮತ್(೧೩೫), ರೇಷ್ಮಾ ಜಿ.ಕೆ.(೧೩೫) ಅಭಿಷೇಕ್ ಉಮಾದಿ(೧೩೧), ಕೀರ್ತಿ ಪೈ(೧೨೯), ಶ್ರದ್ಧಾ ಪಿ.ಅಂಗಡಿ(೧೨೫), ಎಚ್.ಎ ಅದನ್ ಬೆಳ್ಳಿಯಪ್ಪ(೧೨೫), ಪ್ರಭವ್ ಜಿ. ಶೆಟ್ಟಿ(೧೨೧), ಆರ್ಯ ಬಿ.ವಿ(೧೨೦), ಅಪ್ಸರ್ ಪಾಹಿಮ್(೧೨೦), ಧನ್ಯಶ್ರೀ ಶೆಟ್ಟಿ(೧೧೯), ಸೌರವ್ ರವಿ ಶೇಟ್(೧೧೬), ಪೃಥ್ವಿ ಜಾಜಿ(೧೧೫), ಸಾತ್ವಿಕ್ ಯು.ಆರ್(೧೧೪), ಕನಿಷ್ಕ ಸೇನ್ ಎಸ್(೧೧೩), ಸಪಲಿಗ ಸ್ವಾತಿ ತಿಮ್ಮಪ್ಪ(೧೧೧), ಶ್ರೀಕಾರ್ ದುಬೀರ(೧೧೧), ವಜ್ರ ಗೌಡ(೧೧೦), ಶ್ರೇಯಸ್ ವಿ.ರೆಡ್ಡಿ(೧೧೦), ಅನನ್ಯ ರಾಜೇಶ್(೧೦೯, ಬಿಪಿನ್ ಗೌಡ(೧೦೮), ಎಸ್. ನಂದನ್(೧೦೬), ವಿ.ಎಸ್. ವೈಭವ್(೧೦೫), ಕೆ.ವೈ ದಿಲೀಪ್(೧೦೩), ಆಡ್ಲಿನ್ ಥೋಮಸ್(೧೦೨), ಮೆಲಿಶ ಶೈನಿ ಪೆರ್ನಾಂಡಿಸ್(೧೦೨), ತೇಜಸ್ ದೀಪಕ್ ಭಟ್(೧೦೧), ವೇದಿಕ ವಸಂತ್ ಶೆಟ್ಟಿ(೧೦೦), ಪ್ರೀತಮ್.ಎಸ್(೧೦೦), ಪೂರ್ಣೇಶ್(೧೦೦), ಗೌತಮ್ ಗಾಯಕವಾಡ(೧೦೦), ಪ್ರೀತಮ್ ಉದಯ್ ಹೆಗ್ಡೆ(೧೦೦), ಪ್ರಥಮ್ ವಿ. ಶೆಟ್ಟಿ(೧೦೦), ರವಿ ತೇಜಸ್ ಆರ್.ಗಳಗಲಿ(೧೦೦), ಸುಹಾಶ್ ಡಿ.(೧೦೦) ರವರು ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಮೂಲಕ ಮುಂದಿನ ಹಂತದ ಪರೀಕ್ಷೆಗೆ ಅರ್ಹತೆ ಪಡೆದಿದ್ದಾರೆ.

ಇನ್ಸ್ ಟ್ಯೂಟ್ ಆಫ್ ಕಂಪನಿ ಸೆಕ್ರೆಟರಿ ಆಫ್ ಇಂಡಿಯಾ ನಡೆಸುವ ರಾಷ್ಟ್ರ ಮಟ್ಟದ ಅತೀ ಕಠಿಣವಾದ ಪರೀಕ್ಷೆ ಇದಾಗಿದ್ದು ಪರೀಕ್ಷೆ ಬರೆದ ಕ್ರಿಯೇಟಿವ್‌ನ ೫೨ ವಿದ್ಯಾರ್ಥಿಗಳಲ್ಲಿ ೪೨ ವಿದ್ಯಾರ್ಥಿಗಳು ಪಿಯುಸಿಯ ಮೊದಲ ಹಂತದಲ್ಲೇ ತೇರ್ಗಡೆ ಹೊಂದಿರುವುದು ವಿಶೇಷವಾಗಿದೆ. ಪ್ರತೀ ವರ್ಷವೂ ಸಂಸ್ಥೆಯ ಅತೀ ಹೆಚ್ಚು ವಿದ್ಯಾರ್ಥಿಗಳು ಸಿ.ಎ ಫೌಂಡೇಶನ್ ಹಾಗೂ CSEET ಯಲ್ಲಿ ತೇರ್ಗಡೆಯಾಗುತ್ತಿರುವುದು ಕ್ರಿಯೇಟಿವ್‌ನ ಗುಣಮಟ್ಟದ ಶಿಕ್ಷಣಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಆಡಳಿತ ಮಂಡಳಿ, CSEET ಸಂಯೋಜಕರಾದ ಜ್ಞಾನೇಶ್ ಕೋಟ್ಯಾನ್, ಬೋಧಕ – ಬೋಧಕೇತರ ವೃಂದದವರು ಅಭಿನಂದಿಸಿ, ಶುಭಹಾರೈಸಿದ್ದಾರೆ.

Related posts

ಉಜಿರೆ: ನಿನ್ನಿಕಲ್ಲು ಗುಡ್ಡ ಪ್ರದೇಶದಲ್ಲಿ ಆಕಸ್ಮಿಕ ಅಗ್ನಿ ಅವಘಡ

Suddi Udaya

ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವನಮಹೋತ್ಸವ ಆಚರಣೆ.

Suddi Udaya

ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರಕ್ಕೆ ಖ್ಯಾತ ಕ್ರಿಕೆಟಿಗ ಕೆ.ಎಲ್.ರಾಹುಲ್ ಭೇಟಿ

Suddi Udaya

ಜ.16: ಬೆಳ್ತಂಗಡಿ ವ್ಯಾಪ್ತಿಯಲ್ಲಿ ವಿದ್ಯುತ್ ನಿಲುಗಡೆ

Suddi Udaya

ಚಿನ್ನದ ಉಂಗುರವನ್ನು ಹಿಂತಿರುಗಿಸಿಕೊಟ್ಟು ಪ್ರಾಮಾಣಿಕತೆ ಮೆರೆದ ಕಳೆಂಜ ಶ್ರೀ ಸದಾಶಿವೇಶ್ವರ ದೇವಸ್ಥಾನದ ಆಡಳಿತ ಮಂಡಳಿ

Suddi Udaya

ಶ್ರೀ ಎರ್ನೋಡಿ ಕ್ಷೇತ್ರ ಉಜಿರೆ ವಷಾ೯ವಧಿ ಜಾತ್ರೋತ್ಸವ : ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya
error: Content is protected !!