ಬೆಳ್ತಂಗಡಿ: ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಸುಹಾಸ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಮೂವರು ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಮೇ.14ರಂದು ದಸ್ತಗಿರಿ ಮಾಡಿದ್ದಾರೆ.
ಅಜರುದ್ದೀನ್ @ ಅಜರ್ @ ಅಜ್ಜು (29), ತಂದೆ: ಅಬೂಬಕ್ಕರ್, ವಾಸ: ಕಳವಾರು ಆಶ್ರಯ ಕಾಲೊನಿ, ಕಳವಾರು ಗ್ರಾಮ, ಮಂಗಳೂರು, ಅಬ್ದುಲ್ ಖಾದರ್ @ ನೌಫಲ್(24), ತಂದೆ: ಕೆ ಎಂ ನಜೀರ್, ವಾಸ: ಬದ್ರಿಯ ನಗರ, ಬೆಳಪು, ಕಾಪು, ಉಡುಪಿ ಜಿಲ್ಲೆ, ಹಾಲಿ ವಾಸ: ಜೈನಾಬಿ ಫ್ಲಾಟ್, ಭಟ್ರಕೆರೆ, ಉಸ್ಮಾನಿಯಾ ಮಸೀದಿ ಬಳಿ, ಬಟ್ಟೆ, ಮಂಗಳೂರು ಮತ್ತು ನೌಷಾದ್ @ ವಾಮಂಜೂರು ನೌಷದ್ @ ಚೊಟ್ಟೆ ನೌಷದ್ (39), ತಂದೆ: ದಿ.ನಸ್ರುದ್ದೀನ್, ವಿಳಾಸ: ಟಿ.ಕೆ.ಬಶೀರ್ ಅಪಾರ್ಟಮೆಂಟ್ 1ನೇ ಮಹಡಿ, ಸಿಟಿ ಲೈಟ್ ಹೊಟೇಲ್ ಹಿಂಭಾಗ, ಕುಂಪನಮಜಲು ರಸ್ತೆ, ಫರಂಗಿಪೇಟೆ, ಬಂಟ್ವಾಳ ತಾಲೂಕು, ಹಾಲಿ ವಾಸ: ಸೈಯದ್ ರವರ ಬಾಡಿಗೆ ಮನೆ, 1ನೇ ಮಹಡಿ, ಕೆ.ಆರ್.ಪುರಂ, ಹಾಸನ ಜಿಲ್ಲೆ ಇವರು ಬಂಧಿತರು. ಆರೋಪಿಗಳ ಪೈಕಿ ಅಜರುದ್ದೀನ್ @ ಅಜರ್ @ ಅಜ್ಜು ಎಂಬಾತನ ವಿರುದ್ಧ ಈ ಹಿಂದೆ ಪಣಂಬೂರು, ಸುರತ್ಕಲ್, ಮುಲ್ಕಿ ಪೊಲೀಸ್ ಠಾಣೆಗಳಲ್ಲಿ 3 ಕಳವು ಪ್ರಕರಣ ದಾಖಲಾಗಿರುತ್ತದೆ. ಈತನು ಪ್ರಕರಣದ ಆರೋಪಿಗಳಿಗೆ ಕೊಲೆಯಾದ ಸುಹಾಸ್ ಶೆಟ್ಟಿಯ ಚಲನವಲನದ ಬಗ್ಗೆ ಮಾಹಿತಿಯನ್ನು ನೀಡಿ ಕೊಲೆಗೆ ಸಹಕರಿಸಿರುತ್ತಾನೆ. ಆರೋಪಿ ಅಬ್ದುಲ್ ಖಾದರ್ @ ನೌಫಲ್ ಎಂಬಾತನು ಆರೋಪಿಗಳು ಕೊಲೆ ಕೃತ್ಯ ನಡೆಸಿದ ನಂತರ ಕಾರಿನಲ್ಲಿ ಪರಾರಿಯಾಗುವ ಸಮಯದಲ್ಲಿ ಆರೋಪಿಗಳಿಗೆ ಸಹಕರಿಸಿದ್ದನು. ಇನ್ನೋರ್ವ ಆರೋಪಿ ನೌಷದ್ @ ವಾಮಂಜೂರು ನೌಷದ್ @ ಚೊಟ್ಟೆ ನೌಷದ್ ಎಂಬಾತನು ಸುಹಾಸ್ ಶೆಟ್ಟಿಯ ಕೊಲೆಗೆ ಉಳಿದ ಆರೋಪಿಗಳ ಜೊತೆ ಸಂಚು ರೂಪಿಸಿ ಕೊಲೆ ಕೃತ್ಯದಲ್ಲಿ ಭಾಗಿಯಾಗಿರುವುದಾಗಿದೆ.
ಈತನು ಈ ಹಿಂದೆ ಸುರತ್ಕಲ್, ಬಟ್ಟೆ, ಮೂಡಬಿದ್ರಿ, ಮಂಗಳೂರು ಉತ್ತರ, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗಳಲ್ಲಿ ಕೊಲೆ, ಕೊಲೆ ಯತ್ನ, ದರೋಡೆಗೆ ಸಂಚು ಸೇರಿದಂತೆ ಒಟ್ಟು 6 ಪ್ರಕರಣಗಳು ದಾಖಲಾಗಿರುತ್ತದೆ
ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ಅಜರುದ್ದೀನ್ @ ಅಜರ್ @ ಅಜ್ಜು ಎಂಬಾತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿರುತ್ತದೆ. ಆರೋಪಿಗಳಾದ ಅಬ್ದುಲ್ ಖಾದರ್ @ ನೌಫಲ್ ಮತ್ತು ನೌಷದ್ @ ವಾಮಂಜೂರು ನೌಷದ್ @ ಚೊಟ್ಟೆ ನೌಷದ್ ಎಂಬವರನ್ನು ಹೆಚ್ಚಿನ ತನಿಖೆ ಕುರಿತು 7 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆಯಲಾಗಿರುತ್ತದೆ. ಈ ಕೊಲೆ ಪ್ರಕರಣದ ತನಿಖೆಯು ಮುಂದುವರಿದಿದ್ದು, ಪ್ರಕರಣದಲ್ಲಿ ಭಾಗಿಯಾದ ಇತರ ಆರೋಪಿಗಳ ಪತ್ತೆ ಕಾರ್ಯ ಮುಂದುವರಿದಿದೆ ಎಂದು ನಗರ ಪೊಲೀಸ್ ಆಯುಕ್ತರ ಪ್ರಕಟಣೆ ತಿಳಿಸಿದೆ