ಸೋಣಂದೂರು: ಸಬರಬೈಲು ಕುದುರೆಂಜ ಪಡಂಗಡಿ ಸಂಪರ್ಕ ರಸ್ತೆಯ ಸಬರಬೈಲು ವಾದಿ ಇರ್ಫಾನ್ ಮಸೀದಿಯ ಸಮೀಪ ಕಾಲು ಸೇತುವೆ ಬಿರುಕು ಬಿಟ್ಟಿದ್ದು ಸಂಪರ್ಕ ಕಡಿತದ ಭೀತಿ ಎದುರಾಗಿದೆ.

ಈ ಸಂಪರ್ಕ ರಸ್ತೆಯಲ್ಲಿ ಶಾಲಾ-ಕಾಲೇಜು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಓಡಾಡುತ್ತಿದ್ದು ಇದರ ಎರಡು ಕಡೆಯ ತಡೆಗೋಡೆ ಮುರಿದು ಹೋಗಿದ್ದು ಸಂಕದ ಮದ್ಯದಲ್ಲಿ ನೀರು ನಿಂತು ಹೊoಡ ನಿರ್ಮಾಣವಾಗಿದೆ. ಬಾರಿ ಅನಾಹುತವನ್ನು ತಪ್ಪಿಸಿ ಸುರಕ್ಷತೆ ದೃಷ್ಟಿಯಿಂದ ಸ್ಥಳೀಯ ಆಡಳಿತ ಎಚ್ಚೆತ್ತುಕೊಳ್ಳಬೇಕಾಗಿದೆ ಕಾಲು ಸಂಕದ ಕೆಳಗಡೆ ಕಸದ ರಾಶಿಗಳು ತ್ಯಾಜ್ಯಗಳು ತುಂಬಿ ಹೋಗಿದ್ದು ನೀರು ಹರಿದು ಹೋಗಲು ಅಡಚಣೆ ಉಂಟಾಗಿದೆ.


ತಕ್ಷಣ ತ್ಯಾಜ್ಯಗಳು ಕಸದ ರಾಶಿಗಳನ್ನು ತೆರವುಗೊಳಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕಾಗಿದ್ದು ಇಲ್ಲದಿದ್ದಲ್ಲಿ ಸಂಪರ್ಕ ಕಡಿತಗೊಳ್ಳುವುದು ಖಚಿತ ಎಂದು ಸಾರ್ವಜನಿಕರು ಹೇಳುತ್ತಾರೆ.