22.6 C
ಪುತ್ತೂರು, ಬೆಳ್ತಂಗಡಿ
July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಕಡಬ ಐಐಸಿಟಿ ಮೊಂಟೆಸ್ಸರಿ ತರಬೇತಿ ಸಂಸ್ಥೆಗೆ ಶೇ.100 ಫಲಿತಾಂಶ: 11 ವಿದ್ಯಾರ್ಥಿನಿಯರು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ: ಪ್ರತಿಯೊಬ್ಬರು ಶಿಕ್ಷಕಿಯರಾಗಿ ನೇಮಕ

ಕಡಬ: ಭಾರತ ಸರ್ಕಾರದ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ಅಧೀನದಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಕ್ಯಾರಿಯರ್ ಟ್ರೈನಿಂಗ್ ಆಶ್ರಯದಲ್ಲಿ ಕಡಬದ ಸೈಂಟ್ ಜೋಕಿಮ್ಸ್ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಐಎಸ್‌ಒ 9001:2015 ಪ್ರಮಾಣೀಕೃತ ಐಐಸಿಟಿ ಶಿಕ್ಷಣ ಸಂಸ್ಥೆಯು ಶ್ಲಾಘನೀಯ ಸಾಧನೆ ಮಾಡಿದೆ.

ಈ ಸಂಸ್ಥೆಯಲ್ಲಿ ನಡೆದ ಮೊಂಟೆಸ್ಸರಿ (ನರ್ಸರಿ ಟೀಚರ್ ಟ್ರೈನಿಂಗ್) ಪರೀಕ್ಷೆಗೆ ಹಾಜರಾದ ಎಲ್ಲ 11 ವಿದ್ಯಾರ್ಥಿನಿಯರೂ ಶೇ.100 ಫಲಿತಾಂಶದೊಂದಿಗೆ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.

ಆಶಾರೋಸ್ ಸುಂಕದಕಟ್ಟೆ(97%), ವೈಶಾಲಿ ಕೋಡಿಂಬಾಡಿ(96%), ಅಸಿಯಮ್ಮ ಮರ್ದಾಳ(94%), ಸೌಮ್ಯ ಕೆ ಕುಟ್ರುಪಾಡಿ(94%), ನಸೀಮಾ ಎಚ್ ನೆಲ್ಯಾಡಿ(94%), ಸುರೂರತ್ ಎಂ.ಎಸ್ ಕಡಬ(93%), ಸಂಧ್ಯಾ ಕುಮಾರಿ ಬಿ ಬೆಟ್ಟಂಪಾಡಿ(93%), ಸಂಧ್ಯಾ ಅರಸಿನಮಕ್ಕಿ(93%), ಪುಲಕಿತ ಕೆ.ಪಿ ಪೇರಾಬೆ(91%), ಫಾತಿಮಾ ಅನಿಸಾ ಮರ್ದಾಳ(90%) ಹಾಗೂ ಸ್ವಾತಿ ಎಸ್ ಶಿಶಿಲ(90%) ಅಂಕ ಪಡೆದು ಉತ್ತೀರ್ಣರಾಗಿ,ಈಗಾಗಲೇ ವಿವಿಧ ಶಾಲೆಗಳಲ್ಲಿ ಎಲ್ಲಾ ವಿದ್ಯಾರ್ಥಿಗಳು ಶಿಕ್ಷಕಿಯರಾಗಿ ನೇಮಕಗೊಂಡಿದ್ದಾರೆ.

ಅತ್ಯುತ್ತಮ ಗುಣ ಮಟ್ಟದ ಶಿಕ್ಷಣವನ್ನೂ, ಅತಿ ಕಡಿಮೆ ಶುಲ್ಕದೊಂದಿಗೆ ನುರಿತ ಅಧ್ಯಾಪಕರಿಂದ ಶಿಸ್ತಿನ ಬೋಧನೆಯನ್ನೂ ಒದಗಿಸುವ ಈ ಸಂಸ್ಥೆಯು ಉಚಿತ ಕಂಪ್ಯೂಟರ್ ತರಬೇತಿ, ಸ್ಪೋಕನ್ ಇಂಗ್ಲಿಷ್, ಕರಕುಶಲ ತರಬೇತಿ, ಪ್ರತಿಷ್ಠಿತ ಶಾಲೆಗಳಲ್ಲಿ ಇಂಟರ್ನ್‌ಶಿಪ್, ಉಚಿತ ಪಠ್ಯಪುಸ್ತಕ ಹಾಗೂ ಸಮವಸ್ತ್ರಗಳ ಸಹಿತ ಉತ್ತಮ ಅವಕಾಶಗಳನ್ನು ಕಲ್ಪಿಸಿದೆ. ಇದೊಂದು ಜಾಬ್ ಓರಿಯೆಂಟೆಡ್ ಕೋರ್ಸ್ ಆಗಿದ್ದು, ತರಬೇತಿ ಪಡೆದ ಪ್ರತಿಯೊಬ್ಬ ವಿದ್ಯಾರ್ಥಿಗೆ ಉದ್ಯೋಗದ ಭರವಸೆ ನೀಡುತ್ತಿದೆ.

2025–26ನೇ ಸಾಲಿನ ಶೈಕ್ಷಣಿಕ ವರ್ಷದ ದಾಖಲಾತಿ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದ್ದು, ಆಸಕ್ತರು 9448409912 ಅಥವಾ 9743271502 ಸಂಖ್ಯೆಗೆ ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Related posts

ಬೆಳ್ತಂಗಡಿ ಪಿಡಬ್ಲೂಡಿ ಎಇಇ ಆಗಿ ಸಂಜೀವ ಕುಮಾರ್ ಜಿ .ಕೆ.

Suddi Udaya

ಮುಂಡಾಜೆ ಯಂಗ್ ಚಾಲೆಂಜರ್ಸ್ ವತಿಯಿಂದ ಡಾ. ಯು.ಸಿ. ಪೌಲೋಸ್ ಅವರಿಗೆ ‘ಕೀರ್ತಿಶೇಷ ಜಿ.ಎನ್. ಭಿಡೆ’ ಪ್ರಶಸ್ತಿ

Suddi Udaya

ಉಜಿರೆ ಅಮೃತ್‌ ಸಿಲ್ಕ್ ನಲ್ಲಿ ಮನ್ಸೂನ್ (ಆಷಾಢ) ಸೇಲ್ಸ್: ಪ್ರತಿ ಖರೀದಿಯ ಮೇಲೆ ಶೇ.10 ರಿಂದ 50 ರಷ್ಟು ಡಿಸ್ಕೌಂಟ್

Suddi Udaya

ಪಟ್ರಮೆ ಶ್ರೀ ಮಹಾ ವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ಜಾತ್ರೆ ಹಾಗೂ ದೈವಗಳ ನೇಮೋತ್ಸವ: ತೋರಣ ಮೂಹೂರ್ತ, ಊರವರಿಂದ ಹೊರೆಕಾಣಿಕೆ ಸಮರ್ಪಣೆ

Suddi Udaya

ಗೇರುಕಟ್ಟೆ ಅರ್ಕುಳ ಸುಬ್ರಾಯ ಆಚಾರ್ಯ ಪ್ರತಿಷ್ಠಾನದಿಂದ ತೀರ್ಥಹಳ್ಳಿ ಗೋಪಾಲಾಚಾರ್ಯರಿಗೆ ಅರ್ಕುಳ ಪ್ರಶಸ್ತಿ ಪ್ರದಾನ

Suddi Udaya

ಶಿಶಿಲ ಶ್ರೀ ಶಿಶಿಲೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವ: ಹಸಿರು ಹೊರೆಕಾಣಿಕೆ ಸಮರ್ಪಣೆ

Suddi Udaya
error: Content is protected !!