25.3 C
ಪುತ್ತೂರು, ಬೆಳ್ತಂಗಡಿ
May 24, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬಾಜಾರು – ಜೋಡುಕಟ್ಟೆ ರಸ್ತೆ ಕೆಸರುಮಯ ಓಡಾಟ ಶೋಚನೀಯ ! : ಹಲವು ವರ್ಷಗಳಿಂದ ದೊರೆಯದ ಕಾಯಕಲ್ಪ

ಬೆಳ್ತಂಗಡಿ: ತಾಲೂಕಿನ ತೆಕ್ಕಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬಾಜಾರು – ಜೋಡುಕಟ್ಟೆ ಸಂಪರ್ಕಿಸುವ ರಸ್ತೆ ಸಂಪೂರ್ಣ ಕೆಸರುಮಯವಾಗಿದ್ದು ಜನರು, ಸವಾರರು ಓಡಾಟ ಶೋಚನೀಯ ವಾಗಿದೆ. ರಸ್ತೆ ಅಭಿವೃದ್ಧಿ ಕುರಿತು ಹಲವು ವರ್ಷಗಳಿಂದ ಮನವಿ ಸಲ್ಲಿಸಿದರು ಯಾವುದೇ ಕಾಯಕಲ್ಪ ದೊರೆಯದೆ ನಾಗರೀಕರ ಬದುಕು ದುಸ್ತರವಾಗಿದೆ.

ಸುಮಾರು 700 ಮೀಟರ್ ಉದ್ದವಿರುವ ಜಿಲ್ಲಾ ಪಂಚಾಯತ್ ರಸ್ತೆ ಇದಾಗಿದ್ದು ಡಾಮರು ಜಲ್ಲಿಕಲ್ಲುಗಳು ಎದ್ದು ಹೋಗಿ ಮಣ್ಣಿನ ಮಾರ್ಗ ನಿರ್ಮಾಣವಾಗಿದ್ದು ಎಡೆಬಿಡದೆ ಸುರಿದ ಮಳೆಗೆ ರಸ್ತೆ ಸಂಪೂರ್ಣ ಕೆಸರುಮಯಗೊಂಡಿದ್ದು ಓಡಾಡಲು ಅಸಾಧ್ಯವಾದ ರೀತಿಯಲ್ಲಿದೆ.

ಶೋಚನೀಯ ಸ್ಥಿತಿಯಲ್ಲಿ ಇರುವ ಈ ರಸ್ತೆ ಅಭಿವೃದ್ಧಿ ಕುರಿತು ಸತತ ಏಳು ವರ್ಷಗಳಿಂದ ಹಲವಾರು ಬಾರಿ ಮನವಿ ಸಲ್ಲಿಸಿದರು ಜನಪ್ರತಿನಿಧಿಗಳ ಭರವಸೆ ನೀಡುತ್ತಾರೆ ಹೊರತು ಕಾಯಕಲ್ಪ ಹಾದಿ ಇನ್ನೂ ಕಂಡಿಲ್ಲ‌.

ತೆಕ್ಕಾರು ಪ್ಯಾಕ್ಸ್, ನ್ಯಾಯ ಬೆಲೆ, ಶಾಲೆಗೆ ಹೋಗುವ ಪ್ರಮುಖ ರಸ್ತೆಯಾಗಿದೆ. ಬಸ್. ಸಂಚಾರವೂ ಇದ್ದು ಇದೀಗ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಜನರು ನಡೆದುಕೊಂಡು ಹೋಗಲು ಅಸಾಧ್ಯಗೊಂಡಿರುವ ಸ್ಥಿತಿಯಲ್ಲಿದೆ. ಸಂಬಂಧಪಟ್ಟ ಇಲಾಖೆ ಗಮನಹರಿಸಿ ಸೂಕ್ತ ರೀತಿಯಲ್ಲಿ ರಸ್ತೆಗೆ ಕಾಯಕಲ್ಪ ನೀಡಬೇಕೆಂದು ಸಾರ್ವಜನಿಕರು ಆಗ್ರಹ.
ವರದಿ :ಮನೀಷ್ ವಿ.ಅಂಚನ್ ಕುಕ್ಕಿನಡ್ಡ

Related posts

ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಕಾಯ೯ಕತ೯ರ ಸಭೆ

Suddi Udaya

ಬೆಳ್ತಂಗಡಿ ಅಖಿಲ ಕರ್ನಾಟಕ ರಾಜಕೇಸರಿ ಟ್ರಸ್ಟ್ ವತಿಯಿಂದ 554 ನೇ ಸಹಾಯಧನ ವಿತರಣೆ

Suddi Udaya

ಕಳೆಂಜ ನಂದಗೋಕುಲ ಗೋಶಾಲೆ: ಮೇ 19: ಗೋಗ್ರಾಸ ಹೊರ ಕಾಣಿಕೆ ಸಮರ್ಪಣೆ: ಮೇ 26: ನಂದಗೋಕುಲ ದೀಪೋತ್ಸವ

Suddi Udaya

ಬಾಂಜಾರು ಮಲೆ ಮತಗಟ್ಟೆಯಲ್ಲಿ ಶೇ 100 ಮತದಾನ: ಹೊಸ ದಾಖಲೆ ನಿರ್ಮಿಸಿದ ಬಾಂಜಾರುಮಲೆಯ ಮತದಾರರು

Suddi Udaya

ಬಂದಾರುವಿನಲ್ಲಿ ಸರಿಯಾಗಿ ಬಸ್ಸು ವ್ಯವಸ್ಥೆಯಿಲ್ಲದೆ ಪ್ರಯಾಣಿಕರ ಪರದಾಟ: ಸಂಬಂಧಪಟ್ಟ ಅಧಿಕಾರಿಗಳು ಸಮಸ್ಯೆ ಬಗೆಹರಿಸುವಂತೆ ಸ್ಥಳೀಯರ ಮನವಿ

Suddi Udaya

ಮಾಚಾರು: ಬದನಾಜೆ ಶ್ರೀ ಲಕ್ಷ್ಮೀ ನಾರಾಯಣ ಭಜನಾ ಮಂಡಳಿಯ 45ನೇ ವರ್ಷದ ಶಾರದಾ ಪೂಜೆ

Suddi Udaya
error: Content is protected !!