ಅರಸಿನಮಕ್ಕಿ: ಇಲ್ಲಿಯ ಪೆರಡೇಲು ನಿವಾಸಿ ದಿ| ಎಂ. ಪಿ ಲಕ್ಷ್ಮೀನಾರಾಯಣ ಅವರ ಪತ್ನಿ ಶ್ರೀಮತಿ ಎಂ. ಪಿ ರಾಧಾ(80) ರವರು ಮೇ 26 ರಂದು ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ.
ಮೃತರು ಮಕ್ಕಳಾದ ಬೂಡುಮುಗೇರು ಶ್ರೀ ದುರ್ಗಾಪರಮೇಶ್ವರಿ ದೇವಳದ ಅನುವಂಶಿಕ ಆಡಳಿತ ಮೊಕ್ತೇಸರ ಎಂ.ಪಿ. ರಾಜ್ ಗೋಪಾಲ್, ಎಂ.ಪಿ. ಶ್ರೀನಾಥ್, ಎಂ.ಪಿ. ಶ್ರೀಧರ್, ಎಂ.ಪಿ. ಮೋಹನ್, ಎಂ.ಪಿ. ಮಹೇಶ್ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.