25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಉಜಿರೆ: ಧೀಮತಿ ಜೈನ ಮಹಿಳಾ ಸಮಾಜದ ಮಾಸಿಕ ಸಭೆ

ಉಜಿರೆ: ಜೈನ ಧರ್ಮ ಕೇವಲ ಒಂದು ಮತ ಅಷ್ಟೇ ಅಲ್ಲ ಅದೊಂದು ಸರಳವಾದ ಜೀವನ ಶೈಲಿ. ಅದೊಂದು ವೈಚಾರಿಕತೆ, ನಾರಕ ತೀರ್ಯಂಚ ಗತಿಗಳಿಂದ ಮುಕ್ತಿ ಪಡೆದು ಮೋಕ್ಷ ಸಾಧನೆಗೆ ಜೈನ ಧರ್ಮ ದಾರಿ ತೋರುತ್ತದೆ ಎಂದು ಧೀಮತಿ ಜೈನ ಮಹಿಳಾ ಸಮಾಜದ ಮಾಸಿಕ ಸಭೆಯಲ್ಲಿ ,’ಆಧುನಿಕ ಜೀವನ ಶೈಲಿಯಲ್ಲಿ ಜೈನ ಧರ್ಮದ ಆಚರಣೆಯ ಪ್ರಸ್ತುತತೆ’ ಎಂಬ ವಿಷಯದ ಕುರಿತು ಕ್ಷೇಮವನ ಬೆಂಗಳೂರು ಇದರ ನಿರ್ದೇಶಕರಾದ ಶ್ರದ್ದಾ ಅಮಿತ್ ಅಭಿಪ್ರಾಯ ವ್ಯಕ್ತಪಡಿಸಿದರು.

ಯಾವುದೇ ಧರ್ಮದ ತತ್ವಗಳನ್ನು ವೈಜ್ಞಾನಿಕ ಚಿಂತನೆಗೆ ಒಳಪಡಿಸಿ ಸಮಾಜದ ಒಳಿತಿಗಾಗಿ ಸಕಾರಾತ್ಮಕವಾಗಿ ಅಳವಡಿಸಿಕೊಳ್ಳುವುದು ಇಂದಿನ ಅಗತ್ಯತೆಗಳಲ್ಲಿ ಒಂದು ಎಂದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ.ರಜತ ಪಿ.ಶೆಟ್ಟಿ ಮಾತನಾಡಿ ಜೈನ ಧರ್ಮದ ನೈಜ ತಿರುಳನ್ನು ಅರ್ಥೈಸಿಕೊಂಡು ಪಾಲಿಸುವುದು ನೆಮ್ಮದಿಯ ಜೀವನಕ್ಕೆ ರಹದಾರಿ. ಜೈನ ಧರ್ಮದ ಮೂಲ ತತ್ವಗಳಾದ ಅಹಿಂಸೆ, ತ್ಯಾಗ ಅಸ್ಥೇಯ ಅಪರಿಗ್ರಹ ಹಾಗೂ ಅನೇಕಾಂತವಾದಗಳಲ್ಲಿ ಆಳವಾದ ಜೀವನದ ಸತ್ಯ ಅಡಗಿದೆ ಅದನ್ನು ಅರಿತಾಗ ಜೀವನ ಸಾರ್ಥಕವಾಗುವುದು ಎಂದರು. ಇದೇ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಯೋಜನೆಗಳಲ್ಲಿ ವಿಶೇಷವಾಗಿ ತೊಡಗಿಸಿಕೊಂಡು ಮಹಿಳಾ ಸಬಲೀಕರಣಕ್ಕೆ ಕೊಡುಗೆ ನೀಡುತ್ತಿರುವ ಶ್ರದ್ಧಾ ಅಮಿತ್ ಅವರನ್ನು ದೀಮತಿ ಜೈನ ಮಹಿಳಾ ಸಮಾಜದ ವತಿಯಿಂದ ಅಭಿನಂದಿಸಿ ಗೌರವಿಸಲಾಯಿತು.


ಕಾರ್ಯಕ್ರಮದ ಆರಂಭದಲ್ಲಿ ಪೇಹಲ್ಗಾಮ್ ದಾಳಿಯಲ್ಲಿ ಮಡಿದ ನಾಗರಿಕರು ಹಾಗೂ ಪ್ರತಿದಾಳಿಯಲ್ಲಿ ಹುತಾತ್ಮರಾದ ಸೈನಿಕರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಸ್ಮೃತಿ ಜೈನ್ ಪ್ರಾರ್ಥಿಸಿ, ಸ್ಮಿತಾ ಜೈನ್ ಸ್ವಾಗತಿಸಿದರು. ಅಕ್ಷತಾ ಜೈನ್ ಅತಿಥಿಗಳನ್ನು ಪರಿಚಯಿಸಿದರು. ಪುನೀತ ಜೈನ್ ವಂದಿಸಿ, ದಿವ್ಯಾ ಕುಮಾರಿ ಕಾರ್ಯಕ್ರಮ ನಿರೂಪಿಸಿದರು.ಅಶ್ವಿನಿ ಪ್ರವೀಣ್ ಇಂದ್ರ ಹಾಗೂ ಉಲ್ಲಾಸಿನಿ ಕಂಬಳಿ ಸಹಕರಿಸಿದರು.

Related posts

ಶಿಬಾಜೆ: ಜಮೀನಿಗೆ ಅಳವಡಿಸಿದ ಮರದ ಬೇಲಿಯನ್ನು ತೆಗೆದು ಹಾಕಿ ಅಡಿಕೆಕೊಂಡು ಹೋದ ಪ್ರಕರಣ: ಧರ್ಮಸ್ಥಳ ಠಾಣೆಯಲ್ಲಿ ದೂರು ದಾಖಲು

Suddi Udaya

ಬೆಳ್ತಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಸಂಸ್ಮರಣಾರ್ಥ ಗೊರೂರು ಕಂಡ ಗಾಂಧಿ ವಿಶೇಷ ಉಪನ್ಯಾಸ ಕಾರ್ಯಕ್ರಮ

Suddi Udaya

ಇಂದಬೆಟ್ಟು: ಕಲ್ಲಾಜೆ ನಿವಾಸಿ ಜಾನಕಿ ನಿಧನ

Suddi Udaya

ಆ. 12: ಪ್ರಾಥಮಿಕ ಶಾಲಾ ಶಿಕ್ಷಕರಿಂದ ಬೆಂಗಳೂರು ಚಲೋ: ಕ್ಷೇತ್ರ ಶಿಕ್ಷಣಾಧಿಕಾರಿಗಳು, ತಹಸೀಲ್ದಾರ್ ಮತ್ತು ಶಾಸಕರು, ವಿಧಾನಪರಿಷತ್ ಸದಸ್ಯರ ಮೂಲಕ ಸರಕಾರಕ್ಕೆ ಮನವಿ

Suddi Udaya

ಅಕ್ರಮ ಪ್ರವೇಶ ಮಾಡಿ ಯುವಕನಿಗೆ ಹಲ್ಲೆ ಮಾಡಿ ಜೀವ ಬೆದರಿಕೆ

Suddi Udaya

ಧರ್ಮಸ್ಥಳ: ಶಾಂತಿವನದಲ್ಲಿ ನವೀಕರಣಗೊಂಡ ಮಹಿಳಾ ಚಿಕಿತ್ಸಾ ವಿಭಾಗ “ಸಿಂದೂರ”ಲೋಕಾರ್ಪಣೆ

Suddi Udaya
error: Content is protected !!