22.4 C
ಪುತ್ತೂರು, ಬೆಳ್ತಂಗಡಿ
May 31, 2025
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕಪ್ರಮುಖ ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿಯ ಮೂರು ವಕೀಲರ ಕಚೇರಿಗೆ, ಒಂದು ಇಂಜಿನಿಯರ್ ಆಫೀಸ್‌ಗೆ ಕುಂಕುಮ ?

ಬೆಳ್ತಂಗಡಿ: ಇಲ್ಲಿನ ಐಬಿ ರಸ್ತೆಯಲ್ಲಿರುವ ಖಾಸಗಿ ವಾಣಿಜ್ಯ ಸಂಕೀರ್ಣದಲ್ಲಿರುವ ಮೂರು ಮಂದಿ ವಕೀಲರು ಹಾಗೂ ಒಬ್ಬರು ಇಂಜಿನಿಯರ್ ಕಚೇರಿಯ ಬಾಗಿಲಿನ ಮುಂಭಾಗದಲ್ಲಿ ಕಂಕುಮ ಚೆಲ್ಲಿರುವುದು ಬುಧವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.

ಬೆಳ್ತಂಗಡಿ ಐಬಿ ರಸ್ತೆಯಲ್ಲಿರುವ ವಿಘ್ನೇಶ್ ಸಿಟಿ ವಾಣಿಜ್ಯ ಸಂಕಿರ್ಣದ ಒಂದನೆ ಮಹಡಿಯಲ್ಲಿರುವ ಸಂತೋಷ್ ಕುಮಾರ್, ಗಂಗಾಧರ ಪೂಜಾರಿ ವಕೀಲರ ಕಚೇರಿಯ ಬಾಗಿಲ ಮುಂದೆ ಹಾಗೂ ಸಿದ್ದಿವಿನಾಯಕ ಆಸೋಸಿಯೇಟ್ಸ್ ಇಂಜಿನಿಯರ್ ಕಚೇರಿ ಮುಂದೆ ಇಂದು ಬೆಳಿಗ್ಗೆ ಕುಂಕುಮ ಚೆಲ್ಲಿರುವುದು ಕಂಡು ಬಂದಿದೆ. ಅದೇ ರೀತಿ ಮಹಿಳಾ ಒಕ್ಕೂಟ ಕಟ್ಟಡದಲ್ಲಿರುವ ವಕೀಲರಾದ ಮನೋಹರ ಇಳಂತಿಲರ ಕಚೇರಿಯ ಬಾಗಿಲಿನ ಮುಂದೆಯೂ ಇದೇ ರೀತಿ ಕುಂಕುಮ ಚೆಲ್ಲಿರುವುದು ಕಂಡು ಬಂದಿದೆ.

ನಾಲ್ಕು ಮಂದಿಯ ಕಚೇರಿಯ ಬಾಗಿಲು ಎದುರು ಕುಂಕುಮ ಚೆಲ್ಲಿರುವ ಉದ್ದೇಶ ಏನುಗೊತ್ತಾಗಿಲ್ಲ.ಈ ಕಟ್ಟಡದಲ್ಲಿ ಹಲವು ಕಚೇರಿಗಳಿದ್ದರೂ, ನಾಲ್ಕು ಕಚೇರಿಯ ಎದರು ಮಾತ್ರ ಕುಂಕುಮ ಚೆಲ್ಲಿರುವುದು ಕುತೂಲಹಕ್ಕೆ ಕಾರಣವಾಗಿದೆ.

Related posts

ಕಣಿಯೂರು ಜಿ. ಪಂ. ವ್ಯಾಪ್ತಿಯ ಮತದಾನ ಕೇಂದ್ರಕ್ಕೆ ಎಸ್‌ಡಿಪಿಐ ಅಭ್ಯರ್ಥಿ ಅಕ್ಬರ್ ಬೆಳ್ತಂಗಡಿ ಭೇಟಿ

Suddi Udaya

ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ಚುನಾವಣೆ: ಬಿಜೆಪಿ ಬೆಂಬಲಿತ ಸಹಕಾರ ಭಾರತೀಯ ಅಭ್ಯರ್ಥಿಗಳಿಗೆ ಜಯ

Suddi Udaya

ಗುರುವಾಯನಕೆರೆ ವಿಜಯ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿಯ ಆಡಳಿತ ಮಂಡಳಿಗೆ ನಿರ್ದೇಶಕರ ಅವಿರೋಧ ಆಯ್ಕೆ

Suddi Udaya

ಪೆರಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಚುನಾವಣೆ: 12 ನಿರ್ದೇಶಕರುಗಳ ಅವಿರೋಧ ಆಯ್ಕೆ

Suddi Udaya

ಅರಸಿನಮಕ್ಕಿ: ಶ್ರೀ ಗೋಪಾಲಕೃಷ್ಣ ಅ.ಹಿ.ಪ್ರಾ. ಶಾಲೆಯಲ್ಲಿ ಬೇಸಿಗೆ ಶಿಬಿರ ಉದ್ಘಾಟನೆ

Suddi Udaya

ಧರ್ಮಸ್ಥಳ: ಅಪರಿಚಿತ ವ್ಯಕ್ತಿ ಸಾವು: ವಾರೀಸುದಾರರು ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಮನವಿ

Suddi Udaya
error: Content is protected !!