22.6 C
ಪುತ್ತೂರು, ಬೆಳ್ತಂಗಡಿ
July 23, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕಪ್ರಮುಖ ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿಯ ಮೂರು ವಕೀಲರ ಕಚೇರಿಗೆ, ಒಂದು ಇಂಜಿನಿಯರ್ ಆಫೀಸ್‌ಗೆ ಕುಂಕುಮ ?

ಬೆಳ್ತಂಗಡಿ: ಇಲ್ಲಿನ ಐಬಿ ರಸ್ತೆಯಲ್ಲಿರುವ ಖಾಸಗಿ ವಾಣಿಜ್ಯ ಸಂಕೀರ್ಣದಲ್ಲಿರುವ ಮೂರು ಮಂದಿ ವಕೀಲರು ಹಾಗೂ ಒಬ್ಬರು ಇಂಜಿನಿಯರ್ ಕಚೇರಿಯ ಬಾಗಿಲಿನ ಮುಂಭಾಗದಲ್ಲಿ ಕಂಕುಮ ಚೆಲ್ಲಿರುವುದು ಬುಧವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.

ಬೆಳ್ತಂಗಡಿ ಐಬಿ ರಸ್ತೆಯಲ್ಲಿರುವ ವಿಘ್ನೇಶ್ ಸಿಟಿ ವಾಣಿಜ್ಯ ಸಂಕಿರ್ಣದ ಒಂದನೆ ಮಹಡಿಯಲ್ಲಿರುವ ಸಂತೋಷ್ ಕುಮಾರ್, ಗಂಗಾಧರ ಪೂಜಾರಿ ವಕೀಲರ ಕಚೇರಿಯ ಬಾಗಿಲ ಮುಂದೆ ಹಾಗೂ ಸಿದ್ದಿವಿನಾಯಕ ಆಸೋಸಿಯೇಟ್ಸ್ ಇಂಜಿನಿಯರ್ ಕಚೇರಿ ಮುಂದೆ ಇಂದು ಬೆಳಿಗ್ಗೆ ಕುಂಕುಮ ಚೆಲ್ಲಿರುವುದು ಕಂಡು ಬಂದಿದೆ. ಅದೇ ರೀತಿ ಮಹಿಳಾ ಒಕ್ಕೂಟ ಕಟ್ಟಡದಲ್ಲಿರುವ ವಕೀಲರಾದ ಮನೋಹರ ಇಳಂತಿಲರ ಕಚೇರಿಯ ಬಾಗಿಲಿನ ಮುಂದೆಯೂ ಇದೇ ರೀತಿ ಕುಂಕುಮ ಚೆಲ್ಲಿರುವುದು ಕಂಡು ಬಂದಿದೆ.

ನಾಲ್ಕು ಮಂದಿಯ ಕಚೇರಿಯ ಬಾಗಿಲು ಎದುರು ಕುಂಕುಮ ಚೆಲ್ಲಿರುವ ಉದ್ದೇಶ ಏನುಗೊತ್ತಾಗಿಲ್ಲ.ಈ ಕಟ್ಟಡದಲ್ಲಿ ಹಲವು ಕಚೇರಿಗಳಿದ್ದರೂ, ನಾಲ್ಕು ಕಚೇರಿಯ ಎದರು ಮಾತ್ರ ಕುಂಕುಮ ಚೆಲ್ಲಿರುವುದು ಕುತೂಲಹಕ್ಕೆ ಕಾರಣವಾಗಿದೆ.

Related posts

ಬೆಳ್ತಂಗಡಿಯಲ್ಲಿ ಬಸ್ ದರ ಹೆಚ್ಚಳ ಖಂಡಿಸಿ ಎಸ್‌ಡಿಪಿಐ ಪ್ರತಿಭಟನೆ

Suddi Udaya

ಪಿಲ್ಯ: ಆರೋಗ್ಯ ಕ್ಷೇಮ ಕೇಂದ್ರದ ಉದ್ಘಾಟನೆ

Suddi Udaya

ಶ್ರೀ ಕ್ಷೇತ್ರ ಕರಾಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ರಥ ಸಮರ್ಪಣೆ: ಹಲೇಜಿ-ತನ್ನೋಜಿ  ಶ್ರೀ ಕ್ಷೇತ್ರದಲ್ಲಿ  ಶೋಭಾಯಾತ್ರೆಗೆ ಚಾಲನೆ

Suddi Udaya

ಡಿ.ಕೆ.ಆರ್‌.ಡಿ.ಎಸ್ ಮಹಿಳಾ ಸ್ವಸಹಾಯ ಸಂಘಗಳ ರಜತ ಮಹೋತ್ಸವ ಹಾಗೂ ವಿಶ್ವ ಮಹಿಳಾ ದಿನಾಚರಣೆ

Suddi Udaya

ಶಿಶಿಲ ಶ್ರೀ ಶಿಶಿಲೇಶ್ವರ ದೇವಸ್ಥಾನಕ್ಕೆ ವ್ಯವಸ್ಥಾಪನ ಸಮಿತಿ ರಚನೆ

Suddi Udaya

ಗುರುವಾಯನಕೆರೆ: ರತ್ನಗಿರಿ ಶ್ರೀ ಸನ್ಯಾಸಿ ಗುಳಿಗ ಕ್ಷೇತ್ರದ ಪುನರ್ ಪ್ರತಿಷ್ಠಾ ಮಹೋತ್ಸವ: ಭಕ್ತರಿಂದ ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆ

Suddi Udaya
error: Content is protected !!