ಬೆಳ್ತಂಗಡಿ: ರಾಷ್ಟ್ರೀಯ ಕಬಡ್ಡಿ ಆಟಗಾರ ಹಕೀಂ ಅವರನ್ನು ನಾರಾವಿ ಮಾಂಡೋವಿ ಮೋಟಾರ್ಸ್ ವತಿಯಿಂದ ಬೆಳ್ತಂಗಡಿ ಮಸೀದಿಯಲ್ಲಿ ಸನ್ಮಾನಿಸಲಾಯಿತು.
ಕಳೆದ ಮೂರು ದಶಕದ ಹಿಂದೆ ರಾಷ್ಟ್ರೀಯ ಕಬಡ್ಡಿ ಆಟಗಾರನಾಗಿ ತಂಡಕ್ಕೆ ಶಕ್ತಿ ತುಂಬಿ , ಹಲವು ಪಂದ್ಯದಲ್ಲಿ ತನ್ನ ಆಟದ ಮುಖೇನಾ ಗೆಲುವು ಸಾಧಿಸುವಲ್ಲಿ ಇವರು ಪ್ರಮುಖ ಪಾತ್ರ ವಹಿಸಿರುತ್ತಾರೆ. ಈ ಸೇವೆಯನ್ನು ಪರಿಗಣಿಸಿ ನಾರಾವಿ ಮಾಂಡೋವಿ ಮೋಟಾರ್ಸ್ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಎಎಸ್ಎಂ ಸುರೇಶ್ ಭಟ್, ಟೀಮ್ ಮ್ಯಾನೇಜರ್ ಚರಣ್ ಕುಮಾರ್, ಸೇಲ್ಸ್ ಆಫೀಸರ್ ಚಿದಾನಂದ ಪೂಜಾರಿ ಹಾಗೂ ಇತರರು ಉಪಸ್ಥಿತರಿದ್ದರು.