ಅಳದಂಗಡಿ:ಶಿರ್ಲಾಲು ಊರ ಸುಶೀಲಾ ಪೂಜಾರ್ತಿ ಇವರ ಮೂರನೇ ವರ್ಷದ ಪುಣ್ಯಸ್ಮರಣೆ ಪ್ರಯುಕ್ತ ಅವರ ಪುತ್ರ, ಧಾರ್ಮಿಕ,ಸಾಮಾಜಿಕ ಕ್ಷೇತ್ರದ ನೇತಾರ,ಮುಂಬಯಿ ಉದ್ಯಮಿ,ಸುರೇಶ್ ಪೂಜಾರಿ ಊರ ಹಾಗೂ ಕುಟುಂಬಸ್ಥರಿಂದ ಆರೋಗ್ಯ ನಿಧಿ,ವಿದ್ಯಾನಿಧಿ ಹಸ್ತಾಂತರ ಮಾಡಲಾಯಿತು.

ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ 88% ಅಂಕ ಪಡೆದ ಕರಂಬಾರು ಗ್ರಾಮದ ವಿದ್ಯಾರ್ಥಿ ಶಾಶ್ವತ್ ಇವರನ್ನು ಗುರುತಿಸಿ ಗೌರವಿಸಲಾಯಿತು.ಕ್ಯಾನ್ಸರ್ ರೋಗದಿಂದ ಬಳಲುತ್ತಿರುವ ಕಾಪಿನಡ್ಕ ನಿವಾಸಿ ಮೀನಾಕ್ಷಿ ಇವರ ಆರೋಗ್ಯವನ್ನು ವಿಚಾರಿಸಿ ಇವರ ಚಿಕಿತ್ಸೆಗಾಗಿ ಆರ್ಥಿಕ ಸಹಾಯ ನೀಡಲಾಯಿತು.
ಈ ಸಂದರ್ಭದಲ್ಲಿ ಸದಾನಂದ ಪೂಜಾರಿ ಉಂಗಿಲಬೈಲು, ಸುರೇಶ್ ಪೂಜಾರಿ ಅಭಿಮಾನಿ ಬಳಗದ ಸಂಯೋಜಕರಾದ ಹರೀಶ್ ಕಲ್ಲಾಜೆ, ವಿಶ್ವನಾಥ ಬಂಗೇರ,ದೇವದಾಸ್ ಸಾಲ್ಯಾನ್, ಸಂತೋಷ್ ಕಟ್ಟೆ,ಹಿತೇಶ್ ಉಂಗಿಲಬೈಲು, ಕಮಲೇಶ್ ಉಂಗಿಲಬೈಲು, ಹಿತೇಶ್ ಸಾವ್ಯ ಹಿತೇಶ್ ಉಂಗಿಲಬೈಲು, ಸುರೇಂದ್ರ ಕೋಟ್ಯಾನ್ ಮುಂಬೈ ಹಾಗೂ ಕುಟುಂಬಸ್ಥರು, ಸುರೇಶ್ ಪೂಜಾರಿ ಅಭಿಮಾನಿ ಬಳಗದ ಸದಸ್ಯರು ಉಪಸ್ಥಿತರಿದ್ದರು.