ಬೆಳ್ತಂಗಡಿ: ಬಡಗಕಾರಂದೂರು ಗ್ರಾಮದ ಕೆದ್ದುನಲ್ಲಿ ಕಾರು ಡಿಕ್ಕಿ ಹೊಡೆದು ಬೈಕ್ ಸವಾರಿಬ್ಬರು ಗಾಯಗೊಂಡ ಘಟನೆ ಮೇ 29ರಂದು ನಡೆದಿದೆ.
ಬಡಗಕಾರಂದೂರು ಗ್ರಾಮದ ಕೆದ್ದು ಎಂಬಲ್ಲಿ ಗುರುವಾಯನಕೆರೆ-ನಾರಾವಿ-ಕಾರ್ಕಳ ಸಾರ್ವಜನಿಕ ರಸ್ತೆಯಲ್ಲಿ ಕಾರು ನಂಬ್ರ KA 19 MB 0596 ನೇ ಕಾರನ್ನು ಅದರ ಚಾಲಕ ಹರೀಶ್ ಪೂಜಾರಿ ಎಂಬವರು ಗುರುವಾಯನಕೆರೆ ಕಡೆಯಿಂದ ನಾರಾವಿ ಕಡೆಗೆ ತಿರುವು ರಸ್ತೆಯಲ್ಲಿ ಬಳಿ ನಿರ್ಲಕ್ಷ್ಯತನದಿಂದ ಚಲಾಯಿಸಿ ಬಂದು, ನಾರಾವಿ ಕಡೆಯಿಂದ ಅಚ್ಚುತ್ತ ಹೆಗ್ಡೆ ರವರು ತನ್ನ ಅಣ್ಣ ಸುರೇಶ ಹೆಗ್ಡೆ ಜೊತೆ ತನ್ನ ಬೈಕ್ ನಂಬ್ರ KA 70 J 4022 ನೇಯದರಲ್ಲಿ ಕುಳ್ಳಿರಿಸಿಕೊಂಡು ಬರುತ್ತಿದ್ದ ಬೈಕ್ ಗೆ ಡಿಕ್ಕಿ ಹೊಡೆದರೆನ್ನಲಾಗಿದೆ.
ಪರಿಣಾಮ ವಾಹನಗಳು ಜಖಂಗೊಂಡು ಬೈಕ್ ಸವಾರರು ಬೈಕನೊಂದಿಗೆ ರಸ್ತೆಗೆ ಬಿದ್ದು ಅಚ್ಚುತ್ತ ರವರ ಬಲಕಾಲಿಗೆ ಮುರಿತದ ಗಾಯ,ಬಲಕೈಗೆ,ಹಣೆಗೆ ತರಚಿದ ಗಾಯ ಹಾಗೂ ಸಹಸವಾರ ಸುರೇಶ್ ರವರ ತಲೆಗೆ ರಕ್ತಗಾಯಗಳಾಗಿ ಉಜಿರೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದು ಆ ಪೈಕಿ ತೀವ್ರಗಾಯಗೊಂಡ ಸುರೇಶ್ ರವರು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ವೇಣೂರು ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ