ಬೆಳ್ತಂಗಡಿ: ಉಜಿರೆಯಿಂದ ಚಾರ್ಮಾಡಿ ಹೆದ್ದಾರಿ ರಸ್ತೆಯ ಕಾಮಗಾರಿ ನಡೆಯುತ್ತಿದ್ದು ಇದರ ಬೆನ್ನಲ್ಲೇ ಬೆಂಬಿಡದೆ ನಿರಂತರವಾಗಿ ಧಾರಾಕಾರವಾಗಿ ಮಳೆ ಸುರಿಯುತ್ತಿದೆ ರಸ್ತೆ ಬದಿಗಳಲ್ಲಿ ಇರುವ ಮರಗಳು ಬೀಳುವ ಹಂತದಲ್ಲಿದೆ ಇದನ್ನು ಅತೀ ಶೀಘ್ರವಾಗಿ ತೆರವುಗೊಳಿಸುವ ಕಾರ್ಯ ಆಗಬೇಕಾಗಿದೆ.
ಮುಂಡಾಜೆಯ ಸೀಟು ಬಳಿ ರಸ್ತೆಗೆ ವಾಲಿಕೊಂಡು ಬೀಳಲು ತಯಾರಾಗಿರುವ ಮರಗಳು ಹಾಗೂ ಇತರೇ ಮರಗಳನ್ನು ತೆರವುಗೊಳಿಸುವ ಮೂಲಕ ಸಂಭಾವ್ಯ ಅಪಾಯವನ್ನು ತಪ್ಪಿಸಲು ಕೂಡಲೇ ಕ್ರಮಕೈಗೊಳ್ಳಬೇಕಾಗಿದೆ.