
ಮಚ್ಚಿನ: ಇತಿಹಾಸ ಪ್ರಸಿದ್ಧ ಬಳ್ಳಮಂಜ ಮಹತೋಭಾರ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರದ ಕೆಲಸವು ನಡೆಯುತ್ತಿದ್ದು ಇದರ ಧ್ವಜಸ್ತಂಭದ ವೃಕ್ಷ ಮುಹೂರ್ತವು ಇತೀಚೆಗೆ ನಡೆದಿದ್ದು. ತಣ್ಣೀರುಪಂತ ಗ್ರಾಮದ ಅಲಕ್ಕೆ ಬೈಲಿನ ಕುಟುಂಬಸ್ಥರು ದಾನವಾಗಿ ನೀಡಿದ ಕೊಡಿ ಮರದ ಮೆರವಣಿಗೆ ಮೇ. 30ರಂದು ಬ್ರಹ್ಮಶ್ರೀ ಡಾ. ದೇರೆಬೈಲ್ ಶಿವಪ್ರಸಾದ್ ತಂತ್ರಿಗಳ ಮಾರ್ಗದರ್ಶನದಂತೆ ಕೊಡಿ ಮರದ ಭವ್ಯ ಮೆರವಣಿಗೆ ಅಲಕ್ಕೆಯಿಂದ ಬಳ್ಳಮಂಜಕ್ಕೆ ಆಗಮಿಸಿತು.


ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಬಳ್ಳಮಂಜ ದೇವಸ್ಥಾನದ ಆನುವಂಶೀಯ ಆಡಳಿತ ಮೊಕ್ತೇಸರ ಡಾ. ಎಂ ಹರ್ಷ ಸಂಪಿಗೆತ್ತಾಯ, ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಶಾಸಕ ಹರೀಶ್ ಪೂಂಜ, ಅನಂತರಾಮ್ ಜೋಗಿತ್ತಾಯ, ರಾಜೇಶ್ ಶೆಟ್ಟಿ ನವಶಕ್ತಿ, ಮಾಲಾಡಿ ಜೈ ಮಾತಾ ಲ್ಯಾಮಿನೇಟರ್ಸ್ ವಿಜಯಚಂದ್ರ, ಶ್ರೀ ಕ್ಷೇತ್ರ ಪಾರೆಂಕಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ವಿಠಲ ಶೆಟ್ಟಿ ಮೂಡಯೂರು, ಹಿರಿಯ ವಕೀಲರು ಬದರಿನಾಥ್ ಸಂಪಿಗೆತ್ತಾಯ, ಗಂಗಾಧರ್ ಭಟ್, ಕಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಸಂತ ಮಜಲು, ವಕೀಲರ ಸಂಘದ ಅಧ್ಯಕ್ಷ ವಸಂತ ಮರಕಡ, ದುಗ್ಗಪ್ಪ ಗೌಡ, ಸತೀಶ್ ಕಾರಂದೂರು, ಪ್ರಮೋದ್ ಕುಮಾರ್, ನಾರಾಯಣ ಪೂಜಾರಿ, ರಾಜಶೇಖರ್ ಶೆಟ್ಟಿ, ವಿದ್ಯಾಸಾಗರ ಶಾಲಾ ಸಂಚಾಲಕ ವೆಂಕಟ ರೆಡ್ಡಿ, ಮಚ್ಚಿನ ಗ್ರಾಮ ಪಂಚಾಯತ್ ಅಧ್ಯಕ್ಷೆ ರುಕ್ಕಿಣಿ, ಉಪಾಧ್ಯಕ್ಷೆ ಸೋಮಾವತಿ, ಮಾಜಿ ಅಧ್ಯಕ್ಷರು ಚಂದ್ರಕಾಂತ್ ನಿಡ್ಡಾಜೆ, ಪದ್ಮನಾಭ ಸುವರ್ಣ, ಮಾಲಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಪದ್ಮನಾಭ ಸಾಲಿಯಾನ್, ನಾರಾಯಣ ಶೆಟ್ಟಿ, ಮಚ್ಚಿನ ಗ್ರಾಮ ಪಂಚಾಯತ್ ಸದಸ್ಯರು , ಗ್ರಾಮಸ್ಥರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಬಳಿಕ ಸುಂದರಿ ಹಾಗೂ ವಿಠಲ ಶೆಟ್ಟಿ ಮತ್ತು ಮಕ್ಕಳು ತಾರೆಮಾರು ಇವರ ವತಿಯಿಂದ ರಂಗಪೂಜೆ ಹಾಗೂ ಅನ್ನದಾನ ನಡೆಯಿತು.











