ಮಡಂತ್ಯಾರು: ಗೇರುಕಟ್ಟೆಯಲ್ಲಿ ಬಹುಮಾನ್ಯ ಸಯ್ಯಿದ್ ಉಮರ್ ಅಸ್ಸಖಾಫ್ ಮನ್ಷ್ಯರ್ ತಂಗಳ್ ರವರ ನೇತೃತ್ವದ ಮನ್ಶರ್ ಪಿ.ಯು ಕಾಲೇಜಿಗೆ ನೂತನ ಪ್ರಾಂಶುಪಾಲರಾಗಿ ಹಂಸಶ್ರೀ ಬಿ.ಆರ್. ಅವರು ಅಧಿಕಾರ ಸ್ವೀಕರಿಸಿದರು.
ಇವರು ಬಂಟ್ವಾಳ ತಾಲೂಕು ಕಾವಲುಕಟ್ಟೆ ಎನ್.ಸಿ. ರೋಡ್ ನಿವಾಸಿ, ಸರಕಾರಿ ಪದವಿಪೂರ್ವ ಕಾಲೇಜು ಸಿದ್ದಕಟ್ಟೆಯ ಪ್ರಾಂಶುಪಾಲರಾಗಿ ನಿವೃತ್ತಿ ಹೊಂದಿರುತ್ತಾರೆ. ಡಿ. ರಾಮಯ್ಯ ರವರ ಸುಪುತ್ರಿ. ಗಣಿತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದು ಸುಮಾರು 17 ವರ್ಷಕ್ಕಿಂತಲೂ ಹೆಚ್ಚು ಕಾಲ ಸೇವೆಯನ್ನು ಸಲ್ಲಿಸಿದ್ದಾರೆ.
ಮೇ 31ರಂದು ಗೇರುಕಟ್ಟೆ ಮನ್ಶರ್ ಸಂಸ್ಥೆಯ ಅಧ್ಯಕ್ಷರು ಸಯ್ಯಿದ್ ಉಮರ್ ಅಸ್ಸಖಾಫ್ ಮನ್ಷ್ಯರ್ ತಂಗಳ್, ಸಂಸ್ಥೆಯ ಜನರಲ್ ಮ್ಯಾನೇಜರ್ ಹೈದರ್ ಮರ್ದಾಳ, ಪಿ.ಯು. ಕಾಲೇಜು ಉಪ ಪ್ರಾಂಶುಪಾಲರು ಮೊಹಮ್ಮದ್ ತೌಫೀಕ್ ಪಟ್ಟೆ ಹಾಗೂ ಉಪನ್ಯಾಸಕರ ಉಪಸ್ಥಿತಿಯಲ್ಲಿ ಅಧಿಕಾರ ಪತ್ರವನ್ನು ನೀಡಿ ಗೌರವಿಸಲಾಯಿತು.