ಮೂಡುಬಿದಿರೆ: ಇತ್ತೀಚೆಗೆ ನಡೆದ ರಾಷ್ಟ್ರಮಟ್ಟದ ಜೆಇಇ ಅಡ್ವಾನ್ಸ್ಡ್ ಪರೀಕ್ಷೆಯಲ್ಲಿ ಮೂಡುಬಿದಿರೆಯ ಎಕ್ಸಲೆಂಟ್ ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳನ್ನು ಪಡೆದು ಉತ್ಕೃಷ್ಟ ಸಾಧನೆಗೈದಿದ್ದಾರೆ.
ಹರೀಶ್ ಶೆಟ್ಟಿ ಮತ್ತು ಶ್ರೀಮತಿ ಸುಮಿತ ಶೆಟ್ಟಿ ರವರ ಪುತ್ರ ಶಿಶಿರ್ ಹೆಚ್ ಶೆಟ್ಟಿ ರಾಷ್ಟ್ರಮಟ್ಟದಲ್ಲಿ 664ನೇ ಸ್ಥಾನ (open), ಕಾರ್ತಿಕ್ ಎಸ್ 12072ನೇ ಸ್ಥಾನ (open), ಶ್ರೇಯಾಂಕ್ ಮನೋಹರ್ ಪೈ 4601ನೇ ಸ್ಥಾನ (C), ಶೌರ್ಯ್ ಬಿ ತಲ್ವಾರ್ 610ನೇ ಸ್ಥಾನ (C), ಸ್ಮಿರಾ ತಲ್ವಾರ್ 27ನೇ ಸ್ಥಾನ (C), ಪೂರ್ಣಚಂದ್ರ ಎಸ್ 2367ನೇ ಸ್ಥಾನ (C), ಆಶ್ರಯ ಆರ್ 25 (C), ನಿಧಿರಾಮ್ ಜೆ 2161 (C), ವೈಭವ್ ಟಿ.ಆರ್. 6049 (C), ಪಡೆದು ಉತ್ತಮ ಸ್ಥಾನ ಗಳಿಸುವುದರ ಮೂಲಕ ಸಂಸ್ಥೆಗೆ ಕೀರ್ತಿ ತಂದಿರುತ್ತಾರೆ.
ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಯುವರಾಜ ಜೈನ್, ಕಾರ್ಯದರ್ಶಿ ರಶ್ಮಿತಾ ಜೈನ್, ಪ್ರಾಂಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ, ಸ್ಪರ್ಧಾತ್ಮಕ ಪರೀಕ್ಷಾ ನಿರ್ದೇಶಕ ಡಾ. ಪ್ರಶಾಂತ್ ಹೆಗ್ಡೆ , ಜೆಇಇ ಸಂಯೋಜಕ ವಿ ಅರುಣ್, ಹಾಗೂ ಉಪನ್ಯಾಸಕ ವೃಂದದವರು ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.