ಕೊಕ್ಕಡ: ಕೊಕ್ಕಡ ಗ್ರಾಮದ ಕೆಂಪಕೊಡಿ ನಿವಾಸಿ ರಿಕ್ಷಾ ಡ್ರೈವರ್ ಶರತ್ ಕುಮಾರ್ ಕೆ. (35ವ) ರವರು ಜೂ.3ರಂದು ಬೆಳಿಗ್ಗೆ ಗಂಟೆ 10ರ ಸಮಯ ಶಾಲಾ ಟ್ರಿಪ್ ಮುಗಿಸಿ ಮನೆಗೆ ತೆರಳುತ್ತಿದ್ದ ಸಂದರ್ಭ ದಾರಿ ಮಧ್ಯೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ತಕ್ಷಣ ಸ್ಥಳೀಯರು ಸೇರಿ ಕೊಕ್ಕಡ ಸರಕಾರಿ ಆಸ್ಪತ್ರೆಗೆ ತಲುಪಿಸಿದ್ದರೂ, ಅದಾಗಲೇ ಅವರು ಮೃತಪಟ್ಟಿದ್ದರು.
ಮೃತರ ತಂದೆ ಕೂಡಾ ಮಂಗಳೂರಿನ ಆಸ್ಪತ್ರೆಯಲ್ಲಿ ಅಸೌಖ್ಯ ದಿಂದ ದಾಖಲಾಗಿರುತ್ತಾರೆ. ಮೃತರು ತಂದೆ, ತಾಯಿ, ಮತ್ತು ಸಹೋದರಿಯನ್ನು ಆಗಲಿರುತ್ತಾರೆ.